ಗಡಚಿರೋಲಿಯಲ್ಲಿ ನಡೆದ ಚಕಮಕಿಯಲ್ಲಿ ೩ ನಕ್ಸಲರ ಸಾವು !

ಹತರಾಗಿರುವ ನಕ್ಸಲರು ಮಹಾರಾಷ್ಟ್ರ ದಿನದಂದು ರಕ್ತಪಾತ ನಡೆಸುವ ಸಿದ್ಧತೆಯಲ್ಲಿದ್ದರು !

ಭಾನುವಾರ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ನಕ್ಸಲ್ ಕಮಾಂಡರ್ ಗಳು ಸಾವನ್ನಪ್ಪಿದ್ದಾರೆ.

ಗಡಚಿರೋಲಿ – ಇಲ್ಲಿಯ ಭಾಮರಾಗಡ ತಾಲೂಕಿನಲ್ಲಿನ ಕೇಳಮಾರಾ ಅರಣ್ಯ ಪ್ರದೇಶದಲ್ಲಿ ನಡೆದಿರುವ ಪೊಲೀಸ-ನಕ್ಸಲರ ನಡುವಿನ ಚಕಮಕಿಯಲ್ಲಿ ‘ಪೇರಮಿಲಿ ದಲಮ’ ಸಂಘಟನೆಯ ಕಮಾಂಡರ್ ಕುಖ್ಯಾತ ನಕ್ಸಲ್ ಬಿಟಲೂ ಮಡಾವಿಸಹಿತ 3 ಲಕ್ಸಲರು ಸಾವನ್ನಪ್ಪಿದ್ದಾರೆ. ಗಡಚಿರೋಲಿ ಪೊಲೀಸರ ‘ಸಿ-60’ ಪಡೆಯು ಈ ಕಾರ್ಯಾಚರಣೆ ನಡೆಸಿತು. ಬಿಟಲು ಮಡಾವಿಯು ಮಹಾರಾಷ್ಟ್ರ ದಿನದಂದು ರಕ್ತಪಾತ ನಡೆಸುವ ಸಿದ್ಧತೆಯಲ್ಲಿದ್ದನು ಎಂದು ತಿಳಿಯಿತು. ಅಡಗಿ ಕುಳಿತಿರುವ ನಕ್ಸಲರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದರು, ಪ್ರತ್ಯುತ್ತರದಲ್ಲಿ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ೩ ಕ್ರೂರಿ ನಕ್ಸಲರು ಹತರಾದರು. ಹತರಾದವರಲ್ಲಿ ಡಿವಿಸಿ ವಾಸು ಮತ್ತು ‘ಆಹೇರಿ ದಲಮ’ನ ಸದಸ್ಯ ಶ್ರೀಕಾಂತನ ಸಮಾವೇಶ ಕೂಡ ಇದೆ.