ಉತ್ತರ ಪ್ರದೇಶದಲ್ಲಿ ಹಿಂದೂ ಹುಡುಗಿಯ ಮೇಲೆ ಬಲಾತ್ಕಾರ ಮಾಡಿರುವ ಆಫತಾಬ್ ನ ಬಂಧನ

ಮುಸಲ್ಮಾನ ಮಹಿಳೆಯರಂತೆ ಬುರ್ಖಾ ಹಾಕಿಕೊಂಡ ಆರೋಪಿ ಆಫತಾಬ್

ಲಕ್ಷ್ಮಣಪುರಿ (ಉತ್ತರಪ್ರದೇಶ) – ಓರ್ವ ಹಿಂದೂ ಹುಡುಗಿಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿದ ಪ್ರಕರಣದಲ್ಲಿ ಪರಾರಿಯಾಗಿದ್ದ ಆರೋಪಿ ಆಫತಾಬ್ ಮುಸಲ್ಮಾನ ಮಹಿಳೆಯರಂತೆ ಬುರ್ಖಾ ಹಾಕಿಕೊಂಡು ತಿರುಗುತ್ತಿದ್ದನು. ಉತ್ತರ ಪ್ರದೇಶ ಪೊಲೀಸರು ‘ಲವ್ ಜಿಹಾದ್’ ಪ್ರಕರಣದಲ್ಲಿ ಈ ಆರೋಪಿಯನ್ನು ಇತ್ತೀಚೆಗೆ ಬಂಧಿಸಿದ್ದಾರೆ.

ಪ್ರಸಾರ ಮಾಧ್ಯಮದಲ್ಲಿನ ಒಂದು ವಾರ್ತೆಯ ಪ್ರಕಾರ ಈ ಪ್ರಕರಣ ಹಾಪುರ ನಗರ ಕೋತವಾಲಿ ಪ್ರದೇಶದಲ್ಲಿ ನಡೆದಿದೆ. ಫೆಬ್ರವರಿ ೨೦೨೩ ರಲ್ಲಿ ಓರ್ವ ಹಿಂದೂ ಸಂತ್ರಸ್ತೇಯು ಇಲ್ಲಿ ವಾಸಿಸುವ ಅಫತಾಬ್ ನನ್ನ ಮೇಲೆ ಬಲಾತ್ಕಾರ ಮಾಡಿದ್ದಾನೆ ಎಂದು ದೂರು ದಾಖಲಿಸಿದ್ದಳು. ಈ ಸಂತ್ರಸ್ತೆ ಹುಡುಗಿ ದೂರಿನಲ್ಲಿ, ನವಂಬರ್ ೨೦೨೨ ರಲ್ಲಿ ಅಫತಾಬನ ಜೊತೆ ನನ್ನ ಪರಿಚಯ ಆಯಿತು. ಅದರ ನಂತರ ಆಫತಾಬ್ ನನ್ನನ್ನು ಗಾಜಿಯಾಬಾದ್ ನ ಒಂದು ಹೋಟೆಲಿಗೆ ಕರೆದುಕೊಂಡು ಹೋದನು. ಅಲ್ಲಿ ಅವನು ನನಗೆ ಮಾದಕ ಪಾನೀಯ ಕುಡಿಸಿ ಪ್ರಜ್ಞೆತಪ್ಪಿಸಿದನು. ಅದರ ನಂತರ ಆಫತಾಬ್ ಮತ್ತು ಅವನ ಕೆಲವು ಸಹಚರರು ನನ್ನ ಮೇಲೆ ಸಾಮೂಹಿಕ ಬಲತ್ಕಾರ ಮಾಡಿದರು. ಆ ಸಮಯದಲ್ಲಿ ನನ್ನ ಅಶ್ಲೀಲ ವಿಡಿಯೋ ಕೂಡ ತಯಾರಿಸಿದ್ದರು. ಅಫತಾಬ್ ನನಗೆ ಬೆದರಿಕೆ ನೀಡುತ್ತಾ ನನ್ನಿಂದ ೭೦ ಸಾವಿರ ರೂಪಾಯಿ ಕಿತ್ತುಕೊಂಡನು. ಆಫತಾಬ್ ನ ಮೇಲೆ ದೂರು ನೀಡಿದ ನಂತರ ಅವನು ಪರಾರಿಯಾಗಿದ್ದನು. (ಬಲತ್ಕಾರದ ಪ್ರಕರಣದಲ್ಲಿ ಆರೋಪಿಗಳಿಗೆ ತಕ್ಷಣ ಬಂಧಿಸದಿರುವುದು, ಇದು ಪೊಲೀಸರಿಗೆ ನಾಚಿಕೆಗೇಡು ! – ಸಂಪಾದಕರು)

ಸಂಪಾದಕೀಯ ನಿಲುವು

ರಾಜ್ಯದಲ್ಲಿ ಲವ್ ಜಿಹಾದ್ ಕಾನೂನು ಇದ್ದರೂ ಕೂಡ ಮತಾಂಧ ಮುಸಲ್ಮಾನರು ಹಿಂದೂ ಹುಡುಗಿಯರ ಮೇಲೆ ಬಲಾತ್ಕಾರ ಮಾಡುವ ಧೈರ್ಯ ಮಾಡುತ್ತಾರೆ, ಇದು ಆಘಾತಕಾರಿಯಾಗಿದೆ ! ಇಂತಹವರ ಮೇಲೆ ಅಂಕುಶ ಇಡುವುದಕ್ಕಾಗಿ ಕಾನೂನನ್ನು ಪರಿಣಾಮಕಾರಿಯಾಗಿ ಉಪಯೋಗಿಸಿ ಅವರಿಗೆ ಕಠಿಣ ಶಿಕ್ಷೆ ನೀಡುವುದು ಅವಶ್ಯಕ !