ಲಂಡನ್‌ಗೆ ಹೋಗುತ್ತಿದ್ದ ಖಲಿಸ್ತಾನಿ ಅಮೃತಪಾಲ್‌ನ ಪತ್ನಿ ಇವರನ್ನು ಅಮೃತಸರ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ತಡೆದರು !

ವಿಚಾರಣೆ ನಡೆಸಿ ಹಿಂದಕ್ಕೆ ಕಳುಹಿಸಿದ್ದಾರೆ !

ಖಲಿಸ್ತಾನಿ ಅಮೃತಪಾಲ್‌ನ ಪತ್ನಿ ಕಿರಣದೀಪ್

ಅಮೃತಸರ (ಪಂಜಾಬ್) – ‘ವಾರಿಸ್ ಪಂಜಾಬ್ ದೇ’ (ಪಂಜಾಬ್‌ನ ಉತ್ತರಾಧಿಕಾರಿಗಳು) ಈ ಖಲಿಸ್ತಾನಿ ಸಂಘಟನೆಯ ಮುಖ್ಯಸ್ಥ ಹಾಗೂ ಸಧ್ಯ ಪರಾರಿಯಾಗಿರುವ ಅಮೃತಪಾಲ್ ಅವರ ಪತ್ನಿ ಕಿರಣದೀಪ್ ಳನ್ನು ಏಪ್ರಿಲ್ ೨೦ ರಂದು ಅಮೃತಸರ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ತಡೆಹಿಡಿದರು. ಆಕೆಯನ್ನು ವಿಚಾರಣೆಗೊಳಪಡಿಸಿದ ನಂತರ ಆಕೆಯನ್ನು ಮತ್ತೆ ಪಂಜಾಬ್‌ನ ಜಲ್ಲುಪುರ ಗ್ರಾಮಕ್ಕೆ ಕಳುಹಿಸಲಾಯಿತು. ಕಿರಣ್‌ದೀಪ್ ಏರ್ ಇಂಡಿಯಾ ವಿಮಾನದಿಂದ ಲಂಡನ್‌ಗೆ ಹೋಗುವಳಿದ್ದಳು. ಕಿರಣದೀಪ್ ಇವಳು ಅನಿವಾಸಿ ಭಾರತೀಯಳಗಿದ್ದಾಳೆ. ಆಕೆ ಭಾರತದಲ್ಲಿ ೧೮೦ ದಿನಗಳ ಕಾಲ ಇರಬಲ್ಲಳು ಎನ್ನಲಾಗುತ್ತಿದೆ.

ಮೂಲಗಳ ಮಾಹಿತಿಯ ಪ್ರಕಾರ, ಕಿರಣ್‌ದೀಪ್ ಇವಳು ಅಧಿಕಾರಿಗಳಿಗೆ, ತನ್ನ ತಂದೆ-ತಾಯಿಯರನ್ನು ಭೇಟಿಯಾಗಲು ಹೋಗುತ್ತಿದ್ದೇನೆಂದು ಹೇಳಿದ್ದಳು. ಭಾರತದಲ್ಲಿ ಆಕೆಯ ವಿರುದ್ಧ ಯಾವುದೇ ದೂರುಗಳಿಲ್ಲ.