
ಶ್ರೀನಗರ (ಜಮ್ಮೂ-ಕಾಶ್ಮೀರ) – ಒಂದು ವೇಳೆ ಕೇಂದ್ರ ಸರಕಾರವು ಜಮ್ಮೂ- ಕಾಶ್ಮೀರದಲ್ಲಿರುವ ಕಾಶ್ಮೀರಿ ಹಿಂದೂಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನವನ್ನು ನೀಡಲು ಬಯಸುತ್ತಿದ್ದರೆ, ಅದಕ್ಕೆ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ ಆಕ್ಷೇಪಿಸುವುದಿಲ್ಲ ಎಂದು ಈ ಆಯೋಗ ಸದಸ್ಯರಾದ ಸಯೀದ್ ಶಹಜಾದಿಯವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
1. ಸಯೀದ್ ಶಹಜಾದಿಯವರು ಮಾತನಾಡುತ್ತಾ, ಒಂದು ವೇಳೆ ಸಂಸತ್ತು ಕಾನೂನನ್ನು ರೂಪಿಸಿ ಹಿಂದೂಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನವನ್ನು ನೀಡಲು ನಿರ್ಧರಿಸಿದ್ದರೆ, ಅದು ಸರಕಾರದ ಅಧಿಕಾರವಾಗಿದೆ. ಇದೇ ನಮ್ಮ ನಿಲುವಾಗಿದೆ.
`ಯಾವುದೇ ಒಂದು ಸಮಾಜಕ್ಕೆ ಅಲ್ಪಸಂಖ್ಯಾತರ ಸ್ಥಾನಮಾನವನ್ನು ನೀಡಬೇಕೆ ?’, ಈ ಕುರಿತು ನಿರ್ಧರಿಸುವ ಅಧಿಕಾರ ಆಯೋಗಕ್ಕೆ ಇಲ್ಲ. ಈ ವಿಷಯದಲ್ಲಿ ಗೃಹಸಚಿವಾಲಯ ನಮ್ಮ ಅಭಿಪ್ರಾಯವನ್ನು ಕೋರಿದಾಗ, ನಾವು ಅವರಿಗೆ ಇದೇ ಅಭಿಪ್ರಾಯವನ್ನು ನೀಡಿದೆವು. ಸಂಸತ್ತು ಮುಂದುವರಿದು ಈ ವಿಷಯದಲ್ಲಿ ಕಾನೂನು ರೂಪಿಸಬೇಕು ಮತ್ತು ಸರ್ವೋಚ್ಚ ನ್ಯಾಯಾಲಯವು ಈ ಬಗ್ಗೆ ನಿರ್ಣಯ ನೀಡಬೇಕು. ಗೃಹ ಸಚಿವಾಲಯ ಮತ್ತು ಆಯೋಗದ ಅಧ್ಯಕ್ಷರು ಇವರೂ ಕೂಡ ಈ ವಿಷಯದಲ್ಲಿ ಚರ್ಚಿಸಿದ್ದು, `ಕಾನೂನು ರೂಪಿಸಬೇಕು’ ಎನ್ನುವುದೇ ಅವರ ಅಭಿಪ್ರಾಯವೂ ಆಗಿದೆ.
2. ನಾವು ಸರಕಾರಕ್ಕೆ ಪತ್ರವನ್ನು ಬರೆದು ಕೇಂದ್ರಾಡಳಿತ ಪ್ರದೇಶಗಳಲ್ಲಿಯೂ ರಾಜ್ಯ ಅಲ್ಪಸಂಖ್ಯಾತ ಆಯೋಗವನ್ನು ರೂಪಿಸಬೇಕು ಎಂದು ಕೋರುವವರಿದ್ದೇವೆ. ಹಾಗೆಯೇ ನಾವು ಇತರೆ ರಾಜ್ಯಗಳಿಗೂ ಪತ್ರವನ್ನು ಬರೆದು ಈ ವಿಷಯದಲ್ಲಿ ವಿನಂತಿಸುವವರಿದ್ದೇವೆ. ದೇಶದ ಪ್ರತಿಯೊಂದು ರಾಜ್ಯದಲ್ಲಿ ಆಯೋಗ ಇರಬೇಕು ಎಂದು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು.
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ