|

ಡೆಹ್ರಾಡೂನ್ (ಉತ್ತರಾಖಂಡ) – ರಾಜ್ಯದ ಮುಖ್ಯಮಂತ್ರಿ ಪುಷ್ಕರಸಿಂಗ್ ಧಾಮಿ ರಾಜ್ಯವನ್ನು ‘ಲ್ಯಾಂಡ್ ಜಿಹಾದ್’ನಿಂದ ಸಂಪೂರ್ಣವಾಗಿ ಮುಕ್ತಗೊಳಿಸಲು ಸಂಕಲ್ಪವನ್ನು ಮಾಡಿದ್ದಾರೆ. (ಲ್ಯಾಂಡ್ ಜಿಹಾದ್ ವಿರುದ್ಧ ಧೈರ್ಯವಾಗಿ ಕ್ರಮ ಕೈಗೊಳ್ಳಲು ನಿರ್ಧರಿಸಿದ ಧಾಮಿಯವರಿಗೆ ಅಭಿನಂದನೆಗಳು ! – ಸಂಪಾದಕರು) ರಾಜ್ಯದಲ್ಲಿ ಸುಮಾರು ೧ ಸಾವಿರಕ್ಕೂ ಹೆಚ್ಚು ಅಕ್ರಮ ಗೋರಿಗಳಿವೆ. ಅವುಗಳನ್ನು ಪತ್ತೆ ಹಚ್ಚಲಾಗಿದ್ದು, ಅದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮುಖ್ಯಮಂತ್ರಿ ಧಾಮಿಯವರು ಇತ್ತೀಚೆಗೆ ಹೃಷಿಕೇಶ ಯಾತ್ರೆಯಲ್ಲಿದ್ದಾಗ. ಆಗ ಅವರು ಏಪ್ರಿಲ್ ೧೬, ೨೦೨೩ ರಂದು ಹೃಷಿಕೇಶಕ್ಕೆ ಭೇಟಿ ನೀಡಿದ್ದರು. ಈ ಬಾರಿ ಅವರು ಪರಮಾರ್ಥ ನಿಕೇತನ್ ನಲ್ಲಿನ ಗಂಗಾ ಆರತಿಯಲ್ಲಿ ಪಾಲ್ಗೊಂಡರು. ಈ ಕಾರ್ಯಕ್ರಮದ ನಂತರ ಧಾಮಿಯವರು ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದರು. ಮುಖ್ಯಮಂತ್ರಿ ಧಾಮಿ ಇವರು, ‘’ಪವಿತ್ರ ಗಂಗಾನದಿಯ ದಡದ ಹಲವೆಡೆ ಅಕ್ರಮ ಗೋರಿಗಳನ್ನು ನಿರ್ಮಿಸಲಾಗಿದೆ. ಈ ಅತಿಕ್ರಮಣಗಳ ತೆರವಿಗೆ ಸರಕಾರ ಆಂದೋಲನ ಆರಂಭಿಸಿದೆ.” ಎಂದು ಹೇಳಿದರು.

ಧಾಮಿ ಸರಕಾರ ಡಿಸೆಂಬರ್ ೨೦೨೨ ಮತ್ತು ಮಾರ್ಚ್ ೨೦೨೩ ರ ನಡುವೆ ಕಾರ್ಯಾಚರಣೆ ನಡೆಸಿ ೪೧ ಅಕ್ರಮ ಗೋರಿಗಳನ್ನು ನೆಲಸಮ ಮಾಡಿದ್ದರು. ಇದೀಗ ೧ ಸಾವಿರ ಅಕ್ರಮ ಗೋರಿಗಳ ಪಟ್ಟಿ ಮಾಡುವ ಮೂಲಕ ಸರಕಾರ ಮತ್ತೊಮ್ಮೆ ಅವುಗಳ ವಿರುದ್ಧ ಕಾರ್ಯಾಚರಣೆಗೆ ಮುಂದಾಗಿದೆ.
#Uttarakhand | देवभूमि में #लैंड_ज़िहाद जैसा महापाप नहीं होने दिया जाएगा- CM धामीhttps://t.co/9zXms8ghHe
— Uttarakhand Post (@uttarakhandpost) April 17, 2023
ಸಂಪಾದಕೀಯ ನಿಲುವುಇಷ್ಟು ದೊಡ್ಡ ಪ್ರಮಾಣದಲ್ಲಿ ಅಕ್ರಮ ಗೋರಿಗಳು ನಿರ್ಮಾಣವಾಗುತ್ತಿರುವಾಗ ಆಡಳಿತ ನಿದ್ದೆ ಮಾಡುತ್ತಿತ್ತೆ ? ಉತ್ತರಾಖಂಡವನ್ನು ‘ಲ್ಯಾಂಡ್ ಜಿಹಾದ್’ನಿಂದ ಮುಕ್ತಗೊಳಿಸುವುದರ ಜೊತೆಗೆ ಇಂತಹ ಅಕ್ರಮ ನಿರ್ಮಾಣಗಳಿಗೆ ಅವಕಾಶ ನೀಡುವವರ ವಿರುದ್ಧ ಧಾಮಿಯವರು ಕ್ರಮ ಕೈಗೊಳ್ಳಬೇಕು ! |
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ಕೇರಳಮ್ನ ‘ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್’ನ ಮೊದಲ ಮಹಿಳಾ ಶಾಸಕಿ ರೆಸ್ಟೋರೆಂಟ್ ಉದ್ಘಾಟನೆಯನ್ನು ದೀಪ ಬೆಳಗಿಸುವ ಮೂಲಕ ಮಾಡಿದ್ದಕ್ಕೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ
ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ಕಾರಿನ ಮೇಲೆ ಮೊಟ್ಟೆ ಎಸೆತ
ವಾರಾಣಸಿ: ಇನ್ನುಮುಂದೆ ಮೀನು-ಮಾಂಸ ಮಾರಾಟವಿಲ್ಲ!