ಹರಿದ್ವಾರದಲ್ಲಿ ಮುಸಲ್ಮಾನರ ಜನಸಂಖ್ಯೆಯಲ್ಲಿ ಪ್ರತಿ 10 ವರ್ಷಗಳಲ್ಲಿ ಶೇ. 40 ರಷ್ಟು ಹೆಚ್ಚಳ !

ಹರಿದ್ವಾರ (ಉತ್ತರಾಖಂಡ) – ಹರಿದ್ವಾರವು ಹಿಂದೂಗಳ ಪವಿತ್ರ ತೀರ್ಥಕ್ಷೇತ್ರವಾಗಿದೆ. ಇಲ್ಲಿರುವ ಎಲ್ಲ ಮಠಗಳು, ಎಲ್ಲ ಆಖಾಡಗಳು, ಹಿಂದೂ ಧರ್ಮದ ಆಧ್ಯಾತ್ಮಿಕ ಕೇಂದ್ರಗಳಾಗಿವೆ. ಇಲ್ಲಿ ಎಲ್ಲ ಧಾರ್ಮಿಕ ಕಾರ್ಯಗಳನ್ನು ನಡೆಸಲಾಗುತ್ತಿದೆ. ಇಲ್ಲಿ ಕುಂಭಮೇಳ ನಡೆಯುತ್ತದೆ. ಪ್ರತಿವರ್ಷ 3 ಕೋಟಿಗಿಂತ ಹೆಚ್ಚು ಭಕ್ತರು ಇಲ್ಲಿಂದ ಗಂಗಾಜಲವನ್ನು ತೆಗೆದುಕೊಂಡು ಹೋಗುತ್ತಾರೆ; ಆದರೆ ಈ ಪವಿತ್ರ ತೀರ್ಥಕ್ಷೇತ್ರದ ಜನಸಂಖ್ಯೆಯಲ್ಲಿ ಬದಲಾಯಿಸಲು ಪ್ರಯತ್ನಗಳು ನಡೆಯುತ್ತಿರುವುದು ಕಂಡು ಬರುತ್ತಿದೆ. ಹರಿದ್ವಾರ ಜಿಲ್ಲೆಯ ಮುಸಲ್ಮಾನರ ಜನಸಂಖ್ಯೆ ಪ್ರತಿ 10 ವರ್ಷಗಳಲ್ಲಿ ಶೇ. 40 ರಷ್ಟು ಹೆಚ್ಚುತ್ತಿದೆ ಎಂದು `ಪಾಂಚಜನ್ಯ’ ದಿನಪತ್ರಿಕೆಯು ವರದಿ ಮಾಡಿದೆ.

ಹರಿದ್ವಾರದಲ್ಲಿನ ಮುಸಲ್ಮಾನರ ಜನಸಂಖ್ಯೆ ಶೇ. 39 ರಷ್ಟು ಅಂದರೆ 9 ಲಕ್ಷಗಳಷ್ಟು ಇರುವ ಸಾಧ್ಯತೆ !

ಹರಿದ್ವಾರ ಜಿಲ್ಲೆಯ ಮುಸಲ್ಮಾನರ ಜನಸಂಖ್ಯೆ 2001 ರಲ್ಲಿ 4 ಲಕ್ಷ 78 ಸಾವಿರಗಳಷ್ಟು ಇತ್ತು. ಅದು 2011 ರ ಜನಗಣತಿಯನುಸಾರ 6 ಲಕ್ಷ 48 ಸಾವಿರ 119 ರಷ್ಟು ಹೆಚ್ಚಳವಾಗಿದೆ. ಅಂದರೆ ಜಿಲ್ಲೆಯ ಒಟ್ಟು ಜನಸಂಖ್ಯೆಯಲ್ಲಿ ಶೇ. 34.2 ರಷ್ಟು ಮುಸಲ್ಮಾನರು ಇದ್ದರು. ಆ ಸಮಯದಲ್ಲಿ ರಾಜ್ಯದ ಮುಸಲ್ಮಾನರ ಜನಸಂಖ್ಯೆ ಶೇ. 11.19 ರಿಂದ ಶೇ. 13.9 ರಷ್ಟು ಆಗಿತ್ತು. 2020 ರಲ್ಲಿ ಅಂದಾಜಿನಂತೆ ಹರಿದ್ವಾರ ಜಿಲ್ಲೆಯಲ್ಲಿ ಮುಸಲ್ಮಾನರ ಜನಸಂಖ್ಯೆ ಸುಮಾರು ಶೇ. 39 ರಷ್ಟು ಇತ್ತು. ಈ ವರ್ಷದ ಕೊನೆಯಲ್ಲಿ ಹರಿದ್ವಾರ ಜಿಲ್ಲೆಯ ಜನಸಂಖ್ಯೆ ಹೆಚ್ಚು ಕಡಿಮೆ 22 ಲಕ್ಷದಷ್ಟು ಆಗಲಿದೆಯೆಂದು ಅಂದಾಜಿಸಲಾಗಿದೆ. ಅದರಲ್ಲಿ ಮುಸಲ್ಮಾನರ ಜನಸಂಖ್ಯೆ 8 ಲಕ್ಷಕ್ಕಿಂತ ಹೆಚ್ಚಿದೆ. ಇದರಿಂದಲೇ ಹರಿದ್ವಾರ ಜಿಲ್ಲೆಯಲ್ಲಿ ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಗಳು ನಡೆಯುತ್ತಲಿದೆ.

ಕಾಂಗ್ರೆಸ್ ಸಹಿತ ರಾಜಕೀಯ ಪಕ್ಷಗಳು ಮುಸಲ್ಮಾನರಿಗೆ ಅನಧಿಕೃತವಾಗಿ ವಾಸಿಸಲು ಸಹಾಯ ಮಾಡಿವೆ !

ಉತ್ತರಪ್ರದೇಶದ ಬಿಜನೌರ, ಮುಝಪ್ಪರನಗರ, ಮೇರಠ ಮತ್ತು ಸಹಾರನಪುರ ಜಿಲ್ಲೆಗಳು ಹರಿದ್ವಾರ ಜಿಲ್ಲೆಯ ಗಡಿಯನ್ನು ಹೊಂದಿಕೊಂಡಿದೆ. ಈ ಜಿಲ್ಲೆಯಲ್ಲಿ ಮುಸಲ್ಮಾನರ ಜನಸಂಖ್ಯೆ ಹೆಚ್ಚಿದೆ. ಉತ್ತರಾಖಂಡ ನಿರ್ಮಾಣವಾಗುತ್ತಲೇ ಹರಿದ್ವಾರ ಜಿಲ್ಲೆಯಲ್ಲಿ ಉದ್ಯಮಿಗಳ ಜಾಲ ಹರಡಿತ್ತು. ಮುಸಲ್ಮಾನ ಗುತ್ತಿಗೆದಾರರು ಬಿಜನೌರ, ಮುಝಪ್ಪರನಗರ, ಮೇರಠ, ಸಹಾರನಪುರ ಇತ್ಯಾದಿ ಜಿಲ್ಲೆಗಳಿಂದ ಮುಸಲ್ಮಾನ ಕಾರ್ಮಿಕರನ್ನು ಕೆಲಸಕ್ಕಾಗಿ ಕರೆತಂದರು. ಆಗಿನ ನಾರಾಯಣ ದತ್ತ ತಿವಾರಿಯವರ ಕಾಂಗ್ರೆಸ್ ಸರಕಾರವು ಇಲ್ಲಿನ ಉದ್ಯಮಿಗಳೊಂದಿಗೆ ಶೇ. 70 ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೆ ನೀಡುವ ನಿರ್ಣಯವನ್ನು ತೆಗೆದುಕೊಂಡರು; ಆದರೆ ಕಾರ್ಮಿಕರ ಗುತ್ತಿಗೆದಾರರು ಭ್ರಷ್ಟಾಚಾರ ಮಾಡಿ ಈ ನಿರ್ಣಯವನ್ನು ಧಿಕ್ಕರಿಸಿತು ಅವರು ಉತ್ತರಪ್ರದೇಶದಿಂದ ಕರೆದುಕೊಂಡು ಬಂದಿರುವ ಕಾರ್ಮಿಕರಿಗೆ ಸ್ಥಳೀಯರಾಗಿದ್ದಾರೆಂದು ಹೇಳಿದರು ಮತ್ತು ಈ ರೀತಿ ಸರಕಾರಿ ನಿಯಮಗಳ ಪಾಲನೆ ಮಾಡಿದರು. ಇದಲ್ಲದೇ ಗಂಗಾ ಮತ್ತು ಉಪನದಿಗಳಲ್ಲಿ ಗಣಿಗಾರಿಕೆಗಾಗಿ ಉತ್ತರಪ್ರದೇಶ, ಬಿಹಾರ ಮತ್ತು ಆಸ್ಸಾಂ ರಾಜ್ಯಗಳಿಂದ ಮುಸಲ್ಮಾನ ಕಾರ್ಮಿಕರನ್ನು ಕರೆತಂದಿದ್ದರು. ಈ ಜನರು ನದಿಯ ದಡದಲ್ಲಿ ಅಕ್ರಮವಾಗಿ ವಾಸ್ತವ್ಯ ಮಾಡತೊಡಗಿದರು. ಈಗ ಅವರ ಹತ್ತಿರ ಮತದಾನ ಗುರುತುಪತ್ರವೂ ಇದೆ. ಈ ಕೆಲಸಕ್ಕಾಗಿ ಕಾಂಗ್ರೆಸ್ ಮತ್ತು ಇತರ ಜಾತ್ಯತೀತ ಪಕ್ಷಗಳ ಮುಖಂಡರು ಈ ಜನರಿಗೆ ಸಹಾಯ ಮಾಡಿದರು.

ಹಿಂದೂ ಸಂಘಟನೆ ಮತ್ತು ಭಾರತೀಯ ಜನತಾ ಪಕ್ಷದವರಿಂದ ವಿರೋಧ !

ಪ್ರತಿವರ್ಷ ಕೋಟಿಗಟ್ಟಲಠ ಭಕ್ತರು ಕಾವಡ ಯಾತ್ರೆಗಾಗಿ ಹರಿದ್ವಾರಕ್ಕೆ ಬರುತ್ತಾರೆ. ಈ ಹಿಂದೆ ಹರಿದ್ವಾರಕ್ಕೆ ಹೊಂದಿಕೊಂಡಿರುವ ಉತ್ತರಪ್ರದೇಶದ ವಿವಿಧ ಜಿಲ್ಲೆಯ ಜನರಿಗೆ ಕಾವಡ ಮತ್ತು ಇತರೆ ಸಂಬಂಧಿಸಿದ ಸಾಮಗ್ರಿಗಳನ್ನು ತಯಾರಿಸುವ ಉದ್ಯೋಗಗಳಿದ್ದವು. ಉತ್ತರಾಖಂಡ ನಿರ್ಮಾಣವಾದ ಬಳಿಕ ಜನರು ಹರಿದ್ವಾರ ಜಿಲ್ಲೆಯಲ್ಲಿ ಉಳಿದುಕೊಂಡರು. ಕಳೆದ 20 ವರ್ಷಗಳಲ್ಲಿ ಜನಸಂಖ್ಯೆ ಹರಿದ್ವಾರದಿಂದ ಋಷಿಕೇಶದ ವರೆಗೆ ಹೆಚ್ಚಾಗಿದೆ. ಇದು ವಸ್ತುಸ್ಥಿತಿಯಾಗಿದೆ. ಇದರಿಂದ ಕಟ್ಟಡ ಕಾಮಗಾರಿ, ಬಡಿಗತನ, ಫಿಟ್ಟರ ಉದ್ಯೋಗ ಮಾಡುವ ಜನರೂ ಕುಂಭ ಪರಿಸರದ ಹೊರಗೆ ನಿವಾಸಿಯಾಗತೊಡಗಿದರು. ಇದೆಲ್ಲವನ್ನೂ ನೋಡುತ್ತಾ, ಜವಾಲಾಪುರ ಚುನಾವಣಾಕ್ಷೇತ್ರದ ಭಾಜಪ ಶಾಸಕ ಸುರೇಶ ರಾಠೋಡ ಇವರು ಅಕ್ಟೋಬರ 2019 ರಲ್ಲಿ, `ಹರಿದ್ವಾರ ಜಿಲ್ಲೆಯ ಗಂಗೆಯ ದಡದಲ್ಲಿ ಮುಸಲ್ಮಾನರ ಜನಸಂಖ್ಯೆ 67 ಕಿ.ಮಿ. ವರೆಗೆ ವೃದ್ಧಿಸುತ್ತಿದೆ. ಇಲ್ಲಿ ಯಾರು ಬಂದು ನಿವಾಸಿಯಾದರು ? ಇದರ ಪರಿಶೀಲನೆ ನಡೆಯಬೇಕಾಗಿದೆ’ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಕಳೆದ ವರ್ಷ ವಿಶ್ವ ಹಿಂದೂ ಪರಿಷತ್ತು ಕೂಡ ಈ ಸಮಸ್ಯೆಯ ಮೇಲೆ ಸರಕಾರದ ಗಮನ ಸೆಳೆದಿತ್ತು.

ಮುಸಲ್ಮಾನರಿಂದಾಗಿ ಭಾಜಪ ಅಭ್ಯರ್ಥಿಗಳು ಸೋಲುತ್ತಿದ್ದಾರೆ !

ಭಾಜಪದ ಮುಖಂಡರಲ್ಲಿ ಒಬ್ಬರಾಗಿರುವ ಸ್ವಾಮಿ ಯತೀಶ್ವರಾನಂದಜಿ ಮಹಾರಾಜರು ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಹರಿದ್ವಾರ ಗ್ರಾಮೀಣದಿಂದ ಚುನಾವಣೆಯಲ್ಲಿ ಸೋತಿದ್ದರು. ಇದರೊಂದಿಗೆ ಜ್ವಾಲಾಪುರದಿಂದ ಭಾಜಪದ ಅಭ್ಯರ್ಥಿ ಸುರೇಶ ರಾಠೋಡ ಮತ್ತು ಲಕ್ಸರನಿಂದ ಸಂಜಯ ಗುಪ್ತಾ ಇವರು ಕಾಂಗ್ರೆಸ್ ಅಭ್ಯರ್ಥಿಯಿಂದ ಸೋತಿದ್ದರು. ಖಾನಾಪುರದಲ್ಲಿ ಭಾಜಪದ ಅಭ್ಯರ್ಥಿಯನ್ನು ಸ್ವತಂತ್ರ ಅಭ್ಯರ್ಥಿ ಉಮೇಶಕುಮಾರ ಇವರು ಸೋಲಿಸಿದ್ದರು. ಈ ಪ್ರದೇಶದಲ್ಲಿ ಭಾಜಪ ಸೋಲುವುದು ಹೆಚ್ಚುತ್ತಿರುವುದು ಮುಸಲ್ಮಾನ ಚುನಾವಣಾ ಕ್ಷೇತ್ರದ ಕಾರಣದಿಂದ ಎಂದು ಚುನಾವಣಾ ವಿಶ್ಲೇಷಕರ ಅಭಿಪ್ರಾಯವಾಗಿದೆ. ರೂರ್ಕಿ ಶಾಸಕ ಪ್ರದೀಪ ಬತ್ರಾ ಇವರು 2018 ರಲ್ಲಿ 12 ಸಾವಿರಕ್ಕಿಂತ ಹೆಚ್ಚು ಮತಗಳಿಂದ ಜಯಗಳಿಸಿದ್ದರು ಆದರೆ 2023 ರಲ್ಲಿ ಅವರು ಕೇವಲ 2 ಸಾವಿರ 200 ಮತಗಳಿಂದ ಜಯಗಳಿಸಿದರು. ಇತರೆ ಚುನಾವಾಣಾ ಕ್ಷೇತ್ರಗಳಲ್ಲಿಯೂ ಭಾಜಪ ಸೋಲಿನ ಅಂತರ ಹೆಚ್ಚಾಗುತ್ತಿದೆ. ಇದರ ಕಾರಣ ಇಲ್ಲಿನ ಮುಸಲ್ಮಾನರ ಜನಸಂಖ್ಯೆ ಹೆಚ್ಚುತ್ತಿದ್ದು,ಅವರ ಮತ ನಿರ್ಣಾಯಕವಾಗುತ್ತಿದೆ.

ಕಾಂಗ್ರೆಸ್ ನಿಂದ ಮುಸಲ್ಮಾನರ ಅಕ್ರಮ ವಸತಿಗಳಿಗೆ ಅಭಯ

ಹರಿದ್ವಾರದ ಮುಸಲ್ಮಾನರ ಜನಸಂಖ್ಯೆ ಬಹುತೇಕ ನಗರದ ಹೊರಗಿನ ಗಂಗಾನದಿಯ ದಡದಲ್ಲಿ ಮತ್ತು ರೇಲ್ವೆ ಭೂಮಿಯ ಮೇಲೆ ಅತಿಕ್ರಮಣ ಮಾಡಿ ವಾಸ್ತವ್ಯ ಮಾಡಿದ್ದಾರೆ. ಕಾಂಗ್ರೆಸ್ಸಿನ ಕಾಲದಲ್ಲಿ ಅದರಲ್ಲಿ ಬಹಳ ಹೆಚ್ಚಳವಾಗಿದೆಯೆಂದು ತಿಳಿದವರ ಅಭಿಪ್ರಾಯವಾಗಿದೆ. ಅದರಲ್ಲಿ ಬಾಂಗ್ಲಾದೇಶಿ ಮತ್ತು ರೋಹಿಂಗ್ಯಾ ಮುಸಲ್ಮಾನರೂ ಇದ್ದಾರೆಂದು ಹೇಳಲಾಗುತ್ತಿದೆ. ಅವರಿಗೆ ಕಾಂಗ್ರೆಸ್ ಮುಖಂಡರ ಅಭಯ ಸಿಗುತ್ತಿದೆ. ಮಾಜಿ ಮುಖ್ಯಮಂತ್ರಿ ಹರೀಶ ರಾವತ ಇವರು ಹರಿದ್ವಾರದಿಂದ ಲೋಕಸಭೆಯ ಚುನಾವಣೆಯಲ್ಲಿ ಭಾಗವಹಿಸುತ್ತಿದ್ದು, ಅಕ್ರಮ ವಸತಿಗಳನ್ನು ಸಕ್ರಮಗೊಳಿಸುವ ಕ್ರಮ ಅವರ ಕಾಲಾವಧಿಯಲ್ಲಿ ನಡೆದಿತ್ತು.

ಮಸೀದಿಯಲ್ಲಿ ಏರಿಕೆ !

ಹರಿದ್ವಾರದ ಕುಂಭ ಕ್ಷೇತ್ರದಿಂದ ಹೊರಬರುವಾಗ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಗಳಲ್ಲಿ ಎತ್ತರದ ಮೀನಾರ ಇರುವ ಮಸೀದಿ ಕಾಣಿಸುತ್ತದೆ. ಅವುಗಳು ಕೆಲವು ವರ್ಷಗಳ ಹಿಂದೆ ಇರಲಿಲ್ಲ. ಕುಂಭ ಪರಿಸರದಲ್ಲಿ ಮಾರುಕಟ್ಟೆಯನ್ನು ನಿರ್ಮಿಸುವ ಮುಸಲ್ಮಾನರು ಅನೇಕ ಸಲ ಬಯಲಿನಲ್ಲಿ ನಮಾಜ ಮಾಡುತ್ತಿರುವುದು ಕಂಡು ಬಂದಿದೆ. ಅವರ ಮೇಲೆ ಸರಕಾರಕ್ಕೆ ಕ್ರಮ ಕೈಕೊಳ್ಳಬೇಕಾಗಿದೆ. ಸಧ್ಯಕ್ಕೆ ರಮಜಾನ್ ನಡೆಯುತ್ತಿದೆ, ಹರಿದ್ವಾರ ಸರಕಾರವು ಮಸೀದಿಯಿಂದ ಧ್ವನಿವರ್ಧಕಗಳನ್ನು ತೆಗೆದಿದೆ ಮತ್ತು ಅವರ ಆಡಳಿತ ಮಂಡಳಿಯವರಿಗೆ ಧ್ವನಿವರ್ಧಕದ ಮೇಲೆ ನಿಷೇದವಿದೆಯೆಂದು ನ್ಯಾಯಾಲಯದ ಆದೇಶದ ನೆನಪು ಮಾಡಿಕೊಡಲಾಗಿದೆ.

ಮುಸಲ್ಮಾನರು ಹರಿದ್ವಾರ ಜಿಲ್ಲೆಯನ್ನು `ಗಜವಾ-ಎ – ಹಿಂದ’ ( ಭಾರತದ ವಿನಾಶದ) ಮಾಡುವ ಭಾಗ !

ಜಿಹಾದಿ ಘಟಕಗಳು ಹರಿದ್ವಾರ ಜಿಲ್ಲೆಯನ್ನು `ಗಜವಾ-ಎ-ಹಿಂದ’ ನ ಭಾಗವನ್ನಾಗಿ ಮಾಡಿದ್ದಾರೆಂದು ಅನೇಕ ಜನರ ಅಭಿಪ್ರಾಯವಾಗಿದೆ. ಕಳೆದ ವರ್ಷ ಉಗ್ರ ನಿಗ್ರಹ ದಳವು ಈ ಸ್ಥಳದಿಂದ 3 ಜನರನ್ನು ಬಂಧಿಸಿತ್ತು. ಇವರಲ್ಲಿ ಓರ್ವ ಅಲಿ ನೂರ ಬಾಂಗ್ಲಾದೇಶಿ ನಾಗರಿಕನಾಗಿದ್ದನು. ಅವನು ಅಡ್ಡ ಹೆಸರಿನಿಂದ ವಾಸಿಸುತ್ತಿದ್ದನು ಮತ್ತು ಮದರಸಾದಲ್ಲಿ ಮಕ್ಕಳಿಗೆ ಪ್ರಶಿಕ್ಷಣ ನೀಡುತ್ತಿದ್ದನು. ಅಲಿ ನೂರನೊಂದಿಗೆ ರೂರ್ಕಿಯ ಮುದಸ್ಸೀರ ಮತ್ತು ಸಿಡಕುಲನ ಕಾಮಿಲ್ ಇವನನ್ನು ಕೂಡ ಬಂಧಿಸಲಾಗಿತ್ತು. `ಗಜವಾ-ಎ- ಹಿಂದ್’ಗಾಗಿ ಉತ್ತರಾಖಂಡದಲ್ಲಿ ಅನೇಕ ಸಂಘಟನೆಗಳು ಸಕ್ರಿಯವಾಗಿದೆಯೆಂದು ಪೊಲೀಸ ಅಧೀಕ್ಷಕ ಅಶೋಕ ಕುಮಾರ ಇವರು ದೃಢೀಕರಿಸಿದ್ದಾರೆ.

ಹರಿದ್ವಾರದಲ್ಲಿ ಅಹಿಂದುಗಳ ಪ್ರವೇಶವನ್ನು ನಿರ್ಬಂಧಿಸಿ !

ಹರಿದ್ವಾರ ಒಂದು ಚಿಕ್ಕ ನಗರವಾಗಿರುವಾಗ 1916 ರಲ್ಲಿ ಮಹಾಮಾನವ ಪಂಡಿತ ಮದನ ಮೋಹನ ಮಾಳವೀಯ ಮತ್ತು ಬ್ರಿಟಿಶ ಸರಕಾರದ ನಡುವೆ ಒಂದು ಒಪ್ಪಂದವಾಗಿತ್ತು. ಅದರಂತೆ ಹರ ಕಿ ಪೌಡಿಯ 3 ಕಿ.ಮೀ. ಪರಿಸರದಲ್ಲಿ ಯಾವುದೇ ಅಹಿಂದೂ ವ್ಯಕ್ತಿಯ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಹರಿದ್ವಾರ ಮಹಾನಗರ ಪಾಲಿಕೆಯ ನಿಯಮಗಳಲ್ಲಿ ಈ ಒಪ್ಪಂದವನ್ನು ನೊಂದಾಯಿಸಲಾಗಿದೆ. ಆ ಕಾಲದಲ್ಲಿ ಹರಿದ್ವಾರ ಕೇವಲ 3 ಕಿ.ಮಿ. ಪರಿಧಿಯಲ್ಲಿರುವುದು ಇದು ಸ್ವಾಭಾವಿಕವಾಗಿದೆ. ಇಂದು ಇದು ದೊಡ್ಡ ಸ್ವರೂಪವನ್ನು ಪಡೆದುಕೊಂಡಿದೆ. ಇದೇ ಕಾನೂನು ಋಷಿಕೇಶಕ್ಕಾಗಿ ಮಾಡಲಾಗಿತ್ತು ಮತ್ತು ಅಲ್ಲಿ ಯಾವುದೇ ಅಹಿಂದು ಬಂದರೂ ಅವನನ್ನು ರಾತ್ರಿ ಉಳಿಯಲು ನಿಷೇಧವಿದೆ. ಮಕ್ಕಾ ಮತ್ತು ಮದಿನಾದಲ್ಲಿ ಮುಸಲ್ಮಾನೇತರ ಮತ್ತು ವ್ಯಾಟಿಕನ್ ಸಿಟಿಯಲ್ಲಿ ಕ್ರಿಶ್ಚಿಯನ್ನರನ್ನು ಹೊರತು ಪಡಿಸಿ ಬೇರೆಯವರ ಪ್ರವೇಶದಲ್ಲಿ ನಿರ್ಬಂಧವಿದೆಯೆಂದು ತಜ್ಞರ ಹೇಳಿಕೆಯಾಗಿದೆ. ಇದರ ಆಧಾರದಲ್ಲಿ ಪಂಡಿತ ಮದನಮೋಹನ ಮಾಳವೀಯರು ಶ್ರದ್ಧೆಯ ಪ್ರಶ್ನೆಯ ಮೇಲೆ ಬ್ರಿಟಿಶ ಆಡಳಿತಗಾರರೊಂದಿಗೆ ಈ ಒಪ್ಪಂದ ಮಾಡಿದ್ದರು. ಈ ನಿಯಮಗಳ ಆಧಾರದಲ್ಲಿ ದೇವಭೂಮಿ ಉತ್ತರಾಖಂಡದಲ್ಲಿ ಅಹಿಂದುಗಳ ಪ್ರವೇಶದ ಮೇಲೆ ನಿರ್ಬಂಧ ವಿಧಿಸುವಂತೆ ಸಾಧು-ಸಂತರು ಕೋರುತ್ತಿದ್ದಾರೆ. ಈಗ ಈ ಕೋರಿಕೆಯೆಡೆಗೆ ಗಮನಹರಿಸುವ ಸಮಯ ಬಂದಿದೆ. ಇಲ್ಲವಾದರೆ ಹರಿದ್ವಾರದಂತಹ ತೀರ್ಥಕ್ಷೇತ್ರವೂ `ಗಜವಾ-ಎ- ಹಿಂದ್’ನ ಭಾಗವಾಗಬಹುದು ಎಂದು ಹೇಳಲಾಗುತ್ತಿದೆ.

ಸಂಪಾದಕೀಯ ನಿಲುವು

ಹಿಂದೂಗಳ ತೀರ್ಥಕ್ಷೇತ್ರಗಳಲ್ಲಿ ಇಸ್ಲಾಮೀಕರಣದ ಈ ಸಂಚನ್ನು ಎಂದು ನಷ್ಟಗೊಳಿಸುವಿರಿ ?