ದೆಹಲಿಯ ತಿಹಾರ ಜೈಲಿನಲ್ಲಿ ಬಂಧಿತ ರೌಡಿಗಳ ಗ್ಯಾಂಗ್ ವಾರ್ ನಲ್ಲಿ ಒಬ್ಬ ರೌಡಿಯ ಕೊಲೆ ಹಾಗೂ ೪ ರೌಡಿಗಳಿಗೆ ಗಾಯ

ದೆಹಲಿಯ ತಿಹಾರ್ ಜೈಲು

ನವ ದೆಹಲಿ – ಇಲ್ಲಿಯ ತಿಹಾರ ಜೈಲಿನಲ್ಲಿ ಎಪ್ರಿಲ್ ೧೪ ಸಂಜೆ ನಡೆದ ಗ್ಯಾಂಗ್ ವಾರ್ ನಲ್ಲಿ ಕುಖ್ಯಾತ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ನ ರೌಡಿ ಪ್ರಿನ್ಸ್ ತೆವತಿಯನನ್ನು ಚಾಕುವಿವಿಂದ ತಿವಿದು ಕೊಲೆ ಮಾಡಿದ್ದಾರೆ. ಇತರ ೪ ರೌಡಿಗಳಿಗೂ ಕೂಡ ಚಾಕುವಿನಿಂದ ದಾಳಿ ಮಾಡಿದ್ದಾರೆ. ಇದರಲ್ಲಿ ಅವರು ಗಂಭೀರವಾಗಿ ಗಾಯಗೊಂಡಿರುವುದರಿಂದ ಆಸ್ಪತ್ರೆಗೆ ಸೇರಿಸಿದೆ. ಈ ಘಟನೆ ಸಿಸಿಟಿವಿ ಕ್ಯಾಮೆರ ಸೆರೆಯಾಗಿದೆ. ಅತಾತುರ ರಹಮಾನ್ ಅಲಿಯಾಸ್ ಅತ್ತವಾ ಈ ರೌಡಿಯ ನೇತೃತ್ವದ ಅಡಿಯಲ್ಲಿ ದಾಳಿ ನಡೆದಿದೆ. ಅವನು ರೋಹಿತ ಚೌದರಿ ಮತ್ತು ರವಿ ಗಂಗವಾನ್ ಗ್ಯಾಂಗ್ ಗಾಗಿ ಗೂಂಡಾಗಿರಿ ನಡೆಸುತ್ತಾನೆ. ಈ ಘಟನೆಯ ನಂತರ ಈಗ ಬಿಸ್ನೋಯಿ ಗ್ಯಾಂಗ್ ಪ್ರತ್ಯುತ್ತರ ನೀಡುವ ಸಾಧ್ಯತೆ ಇರುವುದರಿಂದ ಜೈಲಿನಲ್ಲಿ ಜಾಗರೂಕತೆ ವಹಿಸುವಂತೆ ಆದೇಶ ನೀಡಲಾಗಿದೆ. ರೌಡಿಗಳು ಚಮಚ ಮತ್ತು ತಟ್ಟೆಯಿಂದ ಚಾಕು ತಯಾರಿಸಿದ್ದಾರೆ ತಿಹರಾದಲ್ಲಿ ಈ ಹಿಂದೆ ಕೂಡ ಈ ರೀತಿಯ ಗ್ಯಾಂಗ್ ವಾರ್ ನಡೆದಿತ್ತು ಮತ್ತು ಅದರಲ್ಲಿ ಅನೇಕ ಬಂಧಿತ ರೌಡಿಗಳು ಸಾವನ್ನಪ್ಪಿದ್ದರು. ಈಗ ಜೈಲಿನ ಕೋಣೆ ಸಂಖ್ಯೆ ೩ ರಲ್ಲಿ ಈ ಘಟನೆ ನಡೆದಿದೆ, ಇಲ್ಲಿ ಮಾರ್ಚ್ ೯ ರಂದು ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಆಗ ಬಂಧಿತರಿಂದ ೨೩ ಸರ್ಜಿಕಲ್ ಬ್ಲೇಡ್, ಮಾದಕ ವಸ್ತುಗಳು, ೨ ಮೊಬೈಲ್ ಗಳು ಮತ್ತು ನಿಷೇಧಿತ ವಸ್ತುಗಳು ವಶಪಡಿಸಿಕೊಳ್ಳಲಾಗಿತ್ತು. (ಈ ರೀತಿಯ ವಸ್ತುಗಳು ಅಲ್ಲಿ ಹೇಗೆ ತಲುಪಿತು ? – ಸಂಪಾದಕರು)

ಸಂಪಾದಕರ ನಿಲುವು

ದೇಶದಲ್ಲಿನ ಎಲ್ಲಕ್ಕಿಂತ ಮಹತ್ವದ ಜೈಲಿನಲ್ಲಿ ನಿರಂತರವಾಗಿ ಈ ರೀತಿಯ ಘಟನೆ ನಡೆಯುವುದು, ಇದು ಪೊಲೀಸರಿಗೆ ನಾಚಿಕೆಗೇಡು ! ಹೊರಗೆ ಗುಂಡಾಗಿರಿ ನಡೆಸಿದವರಿಗೆ ಬಂಧಿಸಿ ಜೈಲಿಗೆ ಅಟ್ಟಿದ ನಂತರ ಕೂಡ ಅದೇ ರೀತಿಯ ಕೃತ್ಯ ಮಾಡುತ್ತಿದ್ದರೇ ಜೈಲಿನ ಕಾನೂನು ಮತ್ತು ಸುವ್ಯವಸ್ಥೆ ಎಷ್ಟು ಶೋಚನೀಯವಾಗಿದೆ, ಇದರಿಂದ ತಿಳಿದು ಬರುತ್ತದೆ !