
ಭರತಪುರ (ರಾಜಸ್ಥಾನ) – ಭರತಪುರ ಜಿಲ್ಲೆಯ ನದಬಯಿ ಪ್ರದೇಶದಲ್ಲಿ ಮಹಾರಾಜಾ ಸೂರಜಮಲ್ ಮತ್ತು ಡಾ. ಆಂಬೇಡಕರ ಇವರ ಪುತ್ತಳಿಯನ್ನು ಸ್ಥಾಪಿಸುವ ವಿಷಯದ ಕುರಿತು ಎಪ್ರಿಲ್ 12 ರಂದು ರಾತ್ರಿ ನಡೆದ ವಿವಾದವು ಕಲ್ಲು ತೂರಾಟ ಮತ್ತು ಬೆಂಕಿ ಹಚ್ಚುವುದರಲ್ಲಿ ರೂಪಾಂತರಗೊಂಡಿತು. ರಾತ್ರಿ 8 ಗಂಟೆಯ ಸುಮಾರಿಗೆ ನಡೆದ ಈ ಹಿಂಸಾಚಾರವು ತಡರಾತ್ರಿ 2 ಗಂಟೆಯ ವರೆಗೆ ಮುಂದುವರಿದಿತ್ತು. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಅಶ್ರುವಾಯು ಸಿಡಿಸಿದರು.
ನದಬಯಿ ಪ್ರದೇಶದಲ್ಲಿ ಪಾಲಿಕೆಯ ವತಿಯಿಂದ 3 ಸ್ಥಳಗಳಲ್ಲಿ ಪುತ್ತಳಿಗಳನ್ನು ಸ್ಥಾಪಿಸುವವರಿದ್ದರು. ಪ್ರಾದೇಶಿಕ ಆಯುಕ್ತರಾದ ಸಂವರಮಲ್ ವರ್ಮಾ ಇವರ ಅಧ್ಯಕ್ಷತೆಯ ಸಮಿತಿಯು ಕುಮ್ಹೆರ ವೃತ್ತದಲ್ಲಿ ಮಹಾರಾಜಾ ಸೂರಜಮಲ್, ಬಲ್ಲಾರಾ ವೃತ್ತದಲ್ಲಿ ಡಾ. ಬಾಬಾಸಾಹೆಬ್ ಆಂಬೇಡಕರ ಮತ್ತು ನಗರ ವೃತ್ತದಲ್ಲಿ ಭಗವಾನ ಪರಶುರಾಮನ ಪುತ್ತಳಿಯನ್ನು ಸ್ಥಾಪಿಸುವವರಿದ್ದರು. ಆದರೆ `ಬಲ್ಲಾರಾ ಇದು ನದಬಯಿಯ ಮುಖ್ಯ ವೃತ್ತವಾಗಿರುವುದರಿಂದ ಅಲ್ಲಿ ಮಹಾರಾಜಾ ಸೂರಜಮಲ್ ಇವರ ಪುತ್ತಳಿಯನ್ನು ಸ್ಥಾಪಿಸಬೇಕು’ ಎನ್ನುವುದು ಸ್ಥಳೀಯರ ಕೋರಿಕೆಯಾಗಿದೆ. ಈ ಕೋರಿಕೆಗಾಗಿ ಸಾರ್ವಜನಿಕರು ಆಂದೋಲನ ನಡೆಸಿದ್ದರು. ಎಪ್ರಿಲ್ 12 ರ ರಾತ್ರಿ ಈ ವಿಷಯದಲ್ಲಿ ನಡೆದ ವಾದ-ವಿವಾದವು ಹಿಂಸಾಚಾರಕ್ಕೆ ತಿರುಗಿತು.
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ