
ಭರತಪುರ (ರಾಜಸ್ಥಾನ) – ಭರತಪುರ ಜಿಲ್ಲೆಯ ನದಬಯಿ ಪ್ರದೇಶದಲ್ಲಿ ಮಹಾರಾಜಾ ಸೂರಜಮಲ್ ಮತ್ತು ಡಾ. ಆಂಬೇಡಕರ ಇವರ ಪುತ್ತಳಿಯನ್ನು ಸ್ಥಾಪಿಸುವ ವಿಷಯದ ಕುರಿತು ಎಪ್ರಿಲ್ 12 ರಂದು ರಾತ್ರಿ ನಡೆದ ವಿವಾದವು ಕಲ್ಲು ತೂರಾಟ ಮತ್ತು ಬೆಂಕಿ ಹಚ್ಚುವುದರಲ್ಲಿ ರೂಪಾಂತರಗೊಂಡಿತು. ರಾತ್ರಿ 8 ಗಂಟೆಯ ಸುಮಾರಿಗೆ ನಡೆದ ಈ ಹಿಂಸಾಚಾರವು ತಡರಾತ್ರಿ 2 ಗಂಟೆಯ ವರೆಗೆ ಮುಂದುವರಿದಿತ್ತು. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಅಶ್ರುವಾಯು ಸಿಡಿಸಿದರು.
ನದಬಯಿ ಪ್ರದೇಶದಲ್ಲಿ ಪಾಲಿಕೆಯ ವತಿಯಿಂದ 3 ಸ್ಥಳಗಳಲ್ಲಿ ಪುತ್ತಳಿಗಳನ್ನು ಸ್ಥಾಪಿಸುವವರಿದ್ದರು. ಪ್ರಾದೇಶಿಕ ಆಯುಕ್ತರಾದ ಸಂವರಮಲ್ ವರ್ಮಾ ಇವರ ಅಧ್ಯಕ್ಷತೆಯ ಸಮಿತಿಯು ಕುಮ್ಹೆರ ವೃತ್ತದಲ್ಲಿ ಮಹಾರಾಜಾ ಸೂರಜಮಲ್, ಬಲ್ಲಾರಾ ವೃತ್ತದಲ್ಲಿ ಡಾ. ಬಾಬಾಸಾಹೆಬ್ ಆಂಬೇಡಕರ ಮತ್ತು ನಗರ ವೃತ್ತದಲ್ಲಿ ಭಗವಾನ ಪರಶುರಾಮನ ಪುತ್ತಳಿಯನ್ನು ಸ್ಥಾಪಿಸುವವರಿದ್ದರು. ಆದರೆ `ಬಲ್ಲಾರಾ ಇದು ನದಬಯಿಯ ಮುಖ್ಯ ವೃತ್ತವಾಗಿರುವುದರಿಂದ ಅಲ್ಲಿ ಮಹಾರಾಜಾ ಸೂರಜಮಲ್ ಇವರ ಪುತ್ತಳಿಯನ್ನು ಸ್ಥಾಪಿಸಬೇಕು’ ಎನ್ನುವುದು ಸ್ಥಳೀಯರ ಕೋರಿಕೆಯಾಗಿದೆ. ಈ ಕೋರಿಕೆಗಾಗಿ ಸಾರ್ವಜನಿಕರು ಆಂದೋಲನ ನಡೆಸಿದ್ದರು. ಎಪ್ರಿಲ್ 12 ರ ರಾತ್ರಿ ಈ ವಿಷಯದಲ್ಲಿ ನಡೆದ ವಾದ-ವಿವಾದವು ಹಿಂಸಾಚಾರಕ್ಕೆ ತಿರುಗಿತು.
Muzaffarpur Hospital Fire : ಮುಜಫ್ಫರಪುರ (ಬಿಹಾರ)ದ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 4 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ
90 ವರ್ಷದ ವಯೋವೃದ್ಧ ಅತ್ತೆಯನ್ನು ತನ್ನ ತಲೆಯ ಮೇಲೆ ಹೊತ್ತುಕೊಂಡು ಸವಾರಿ ಮಾಡುತ್ತಾ 84 ಕೋಸು ಪ್ರದಕ್ಷಿಣೆ ಪೂರ್ಣಗೊಳಿಸುತ್ತಿರುವ ಸೊಸೆ!
ಮುಜಫರ್ನಗರದಲ್ಲಿ(ಉತ್ತರ ಪ್ರದೇಶ) ಆಘಾತಕಾರಿ ಘಟನೆ; ಬಾಕಿ ಹಣ ಸಿಗದಿದ್ದಕ್ಕೆ ಜೋಡಿಸಿದ ಮೂಳೆಯನ್ನು ಮುರಿದ ವೈದ್ಯ!
Vande Mataram : ಬಂಗಾಳದ ಮದರಸಾಗಳಲ್ಲಿ ‘ವಂದೇ ಮಾತರಂ’ ಕಡ್ಡಾಯಗೊಳಿಸುವುದಕ್ಕೆ ‘ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್’ ಆಕ್ಷೇಪ
ಕೊಲಕಾತಾ: ಟಿಎಂಸಿ ವಿದ್ಯಾರ್ಥಿ ಸಂಘಟನೆಯ ಕಚೇರಿಯಲ್ಲಿ ಭಾರಿ ನಗದು ಪತ್ತೆ
ಕೊಲಕಾತಾ: ತೃಣಮೂಲ ಕಾಂಗ್ರೆಸ್ನ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ