ಕ್ರೈಸ್ತ ಮಿಷನರಿಗಳಿಗಿಂತ ಹಿಂದೂ ಸಂತರ ಕಾರ್ಯ ಹೆಚ್ಚು ! – ಪ. ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ್

ಜೈಪುರ (ರಾಜಸ್ಥಾನ) – ದಕ್ಷಿಣ ಭಾರತದಲ್ಲಿ ಹಿಂದೂ ಸಂತರು ಕ್ರೈಸ್ತ ಮಿಷನರಿಗಳಿಗಿಂತ ಹೆಚ್ಚಿನ ಸೇವೆಯನ್ನು ಮಾಡಿದ್ದಾರೆ; ಆದರೆ ಅದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ಪ.ಪೂ. ಸರ್ಸಂಘಚಾಲಕ ಡಾ.ಮೋಹನ್‌ಜಿ ಭಾಗವತ್ ಕಳವಳ ವ್ಯಕ್ತಪಡಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಸಂಘದ ೩ ದಿನಗಳ ಚಿಂತನ ಶಿಬಿರದಲ್ಲಿ ಅವರು ಮಾತನಾಡುತ್ತಿದ್ದರು. ಸೇವೆಯು ಸೇವೆಯಾಗಿದೆ ಸೇವೆಯನ್ನು ಲೆಕ್ಕಿಸಲು ಸಾಧ್ಯವಿಲ್ಲ. ಅದರಲ್ಲಿ ಯಾವದೇ ಸ್ಪರ್ಧೆ ಇರಲ್ಲ ಎಂದೂ ಸಹ ಹೇಳೀದರು. ಈ ಸಂದರ್ಭದಲ್ಲಿ ಉದ್ಯಮಿ ಅಜಯ್ ಪಿರಾಮಲ್ ಕೂಡ ಉಪಸ್ಥಿತರಿದ್ದರು.