ಅಸದುದ್ದೀನ್ ಓವೈಸಿ ಇವರ ದೆಹಲಿಯ ಮನೆಯ ಮೇಲೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ

ನವ ದೆಹಲಿ – ಎಂ.ಐ.ಎಂ.ನ ಅಧ್ಯಕ್ಷ ಮತ್ತು ಸಂಸದ ಅಸದುದ್ದೀನ್ ಓವೈಸಿ ಇವರ ದೆಹಲಿಯ ನಿವಾಸ ಸ್ಥಳದ ಮೇಲೆ ದುಷ್ಕರ್ಮಿಗಳಿಂದ ಮಧ್ಯರಾತ್ರಿ ಕಲ್ಲುತೂರಾಟ ನಡೆದಿದೆ. ಇದರಲ್ಲಿ ಅವರ ಮನೆಯ ಕಿಟಕಿಯ ಗಾಜುಗಳು ಒಡೆದಿವೆ.

ಓವೈಸಿ ಇವರು, ನನ್ನ ದೆಹಲಿಯ ಮನೆಯ ಮೇಲೆ ಮತ್ತೊಮ್ಮೆ ದಾಳಿ ನಡೆದಿದೆ ಎಂದು ಹೇಳಿದರು.೨೦೧೪ ನಂತರ ಇದು ನಾಲ್ಕನೆಯ ಘಟನೆಯಾಗಿದೆ. ನಾನು ಜೈಪುರನಿಂದ ಹಿಂತಿರುಗಿ ಮನೆಗೆ ಬಂದ ನಂತರ ನನ್ನ ಮನೆಯ ಕೆಲಸದವರು, ಗುಂಪಿನಿಂದ ಕಲ್ಲು ತೂರಾಟ ನಡೆದಿರುವುದರಿಂದ ಕಿಟಕಿಯ ಗಾಜು ಒಡೆದಿದೆ ಎಂದು ಹೇಳಿದರು. ಈ ಘಟನೆ ಖೇದಕರವಾಗಿದೆ. ಎಲ್ಲಕ್ಕಿಂತ ಹೆಚ್ಚಿನ ಭದ್ರತೆ ಇರುವ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಿದರು.