ಹಿಂದೂ ರಾಷ್ಟ್ರದ ಸಂದರ್ಭದಲ್ಲಿ ಸಂಸತ್ತಿನಲ್ಲಿ ಏನೋ ಆಗಲಿದೆ !

ಬಾಗೇಶ್ವರ ಧಾಮ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರ ಭವಿಷ್ಯವಾಣಿ !

ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ

ಛತ್ತರಪುರ (ಮಧ್ಯಪ್ರದೇಶ) – ಯಾವ ವ್ಯಕ್ತಿಯಲ್ಲಿ ಸನಾತನದ ರಕ್ತವಿದೆಯೋ, ಧ್ಯೇಯವಿದೆಯೋ, ಅವನು ಮುಕ್ತ ಮನಸ್ಸಿನಿಂದ ಹಿಂದೂ ರಾಷ್ಟ್ರವನ್ನು ಬೆಂಬಲಿಸುವನು, ಹಿಂದೂ ರಾಷ್ಟ್ರದ ಬೇಡಿಕೆ ಮಾಡುವನು ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆ ಮಾಡುವನು; ಆದರೆ ಯಾರ ರಕ್ತದಲ್ಲಿ ಕಪಟತನವಿದೆಯೋ, ಅವನು ಹಿಂದೂ ರಾಷ್ಟ್ರದ ವಿಷಯದಲ್ಲಿ ಮಾತನಾಡುವುದಿಲ್ಲ. ನಮಗೆ ಅದರ ಬಗ್ಗೆ ಏನೂ ಅನಿಸುವುದಿಲ್ಲ. ಬದಲಾಗಿ ಭಾರತ ಹಿಂದೂ ರಾಷ್ಟ್ರವೆಂದು ಘೋಷಿಸಲ್ಪಡುವುದು ಎಂದು ನಮಗೆ ತಿಳಿದಿದೆ. ಹಿಂದೂ ರಾಷ್ಟ್ರದ ನಿಮಿತ್ತದಿಂದ ಕ್ರಾಂತಿಯಾಗಲಿದೆ. ಆದಷ್ಟು ಬೇಗನೆ ಈ ಕ್ರಾಂತಿಯಿಂದ ಸಂಸತ್ತಿನಲ್ಲಿ ಏನೋ ನಡೆಯಲಿದೆ, ಎಂದು ಬಾಗೇಶ್ವರ ಧಾಮನ ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿಯವರು ತಮ್ಮ ದರಬಾರಿನಲ್ಲಿ ಭಕ್ತರ ಎದುರಿಗೆ ಭವಿಷ್ಯವಾಣಿ ನುಡಿದಿದ್ದಾರೆ. ಧೀರೇಂದ್ರಕೃಷ್ಣ ಶಾಸ್ತ್ರಿಯವರು ಈ ಸಂದರ್ಭದಲ್ಲಿ ಭೋಪಾಲ ಭಾಜಪ ಶಾಸಕ ಸಾಧ್ವಿ ಪ್ರಜ್ಞಾಸಿಂಹ ಠಾಕೂರ ಇವರ ಕೋರಿಕೆಯಂತೆ `ಸನಾತನ ಬೋರ್ಡ’ ಸ್ಥಾಪನೆಯನ್ನು ಬೆಂಬಲಿಸಿದರು. ಬಾಗೇಶ್ವರ ಧಾಮನಲ್ಲಿ ಫೆಬ್ರುವರಿ 13 ರಿಂದ 19 ಈ ಕಾಲಾವಧಿಯಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಯಜ್ಞ ನಡೆಸಲಾಗುತ್ತಿದೆ.

ಕಾಂಗ್ರೆಸ್ಸಿನ ಮುಖಂಡ ಕಮಲನಾಥರು ಇತ್ತೀಚೆಗಷ್ಟೇ ಬಾಗೇಶ್ವರ ಧಾಮಗೆ ಹೋಗಿದ್ದರು. ಅವರು `ಭಾರತ ಸಂವಿಧಾನದ ಮೂಲಕ ನಡೆಯುತ್ತದೆ’, ಎಂದು ಹೇಳಿದ್ದರು. ಈ ವಿಷಯದಲ್ಲಿ ಧೀರೇಂದ್ರಕೃಷ್ಣ ಶಾಸ್ತ್ರಿಯವರು, ಹಿಂದೂ ರಾಷ್ಟ್ರದ ಸ್ಥಾಪನೆಯನ್ನು ಯಾರು ಬೆಂಬಲಿಸುತ್ತಿದ್ದಾರೆ ಯಾರು ವಿರೋಧಿಸುತ್ತಿದ್ದಾರೆ ಎನ್ನುವ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಯಾರು ಬರುತ್ತಾರೆಯೋ ಅವರಿಗೆ ಧನ್ಯವಾದ. ಬಾಗೇಶ್ವರ ಧಾಮದಿಂದ ಎಲ್ಲರಿಗೂ ಆಶೀರ್ವಾದವಿದೆ ಎಂದು ಹೇಳಿದರು.