ಜಮ್ಮುದಲ್ಲಿ ನಡೆದ ೨ ಬಾಂಬ್ ಸ್ಫೋಟದಲ್ಲಿ ೫ ಜನರಿಗೆ ಗಾಯ !

ಜಮ್ಮು – ನರವಾಲ ಪ್ರದೇಶದಲ್ಲಿ ಜನವರಿ ೨೧ ರಂದು ನಡೆದ ೨ ಬಾಂಬ್ ಸ್ಫೋಟದಲ್ಲಿ ೫ ಜನರು ಗಾಯಗೊಂಡಿದ್ದಾರೆ. ಗಣರಾಜ್ಯೋತ್ಸವ ದಿನದಂದು ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇವರ ಭಾರತ ಜೋಡೋ ಯಾತ್ರೆಯ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ಬಿಗಿ ಬಂದೋಬಸ್ತ್ ಇರುವಾಗ ಈ ರೀತಿಯ ಘಟನೆ ಘಟಿಸಿರುವುದರಿಂದ ಭದ್ರತಾ ಪಡೆಯು ಹೆಚ್ಚು ಜಾಗೃತವಾಗಿದೆ. ಈ ಬಾಂಬ್ ಸ್ಫೋಟ ನರವಾಲದಲ್ಲಿ ಟ್ರಾನ್ಸ್ ಪೂರ್ಟ್ ನಗರದ ಯಾರ್ಡ್ ಕ್ರಮಾಂಕ ೭ ಮತ್ತು ೯ ರಲ್ಲಿ ನಡೆದಿದೆ.

(ಸೌಜನ್ಯ: India Today)

ಸಂಪಾದಕರ ನಿಲುವು

ಭಯೋತ್ಪಾದಕರನ್ನು ಎಷ್ಟೇ ಕೊಂದರೂ, ಜಮ್ಮು ಕಾಶ್ಮೀರದಲ್ಲಿನ ಇಂತಹ ಘಟನೆಗಳು ನಿಲ್ಲುವುದು ಕಾಣುತ್ತಿಲ್ಲ. ಇದರ ಕಾರಣವೆಂದರೆ ಈ ಭಯೋತ್ಪಾದನೆ ಹಿಂದೆ ಇರುವ ಪಾಕಿಸ್ತಾನ ಮತ್ತು ಅದರ ಜಿಹಾದಿ ಮಾನಸಿಕತೆ ! ಇದೆರಡರನ್ನು ನಾಶ ಮಾಡಿದ ನಂತರವೇ ಕಾಶ್ಮೀರದಲ್ಲಿನ ಭಯೋತ್ಪಾದನೆಯನ್ನು ಬೇರು ಸಹಿತ ನಾಶವಾಗಲಿದೆ !