‘ಬಿಜೆಪಿಯು ‘ಬಾಬ್ರಿಯ ನಂತರ ಜ್ಞಾನವಾಪಿ ಮತ್ತು ಈದ್ಗಾ ಮಸೀದಿಯನ್ನು ಗುರಿ ಮಾಡುತ್ತಿದೆ!’ (ಅಂತೆ)

ಮಾಕಪ್‌ನ ಸಂಸದ ಜಾನ್ ಬ್ರಿಟ್ಸ್ ಅವರ ಹುರುಳಿಲ್ಲದ ಆರೋಪ

ಮಾಕಪ್‌ನ ಸಂಸದ ಜಾನ್ ಬ್ರಿಟ್ಸ್

ಕೋಯಿಕ್ಕೋಡ್ (ಕೇರಳ) : ಭಾಜಪವು ಈ ಹಿಂದೆ ಬಾಬ್ರಿ ಮಸೀದಿಯನ್ನು ಗುರಿಯಾಗಿಸಿಕೊಂಡಿತ್ತು ಮತ್ತು ಈಗ ಮಥುರಾದ ಜ್ಞಾನ್ವಾಪಿ ಮಸೀದಿ ಮತ್ತು ಈದ್ಗಾ ಮಸೀದಿಯನ್ನು ಗುರಿಯಾಗಿಸಿಕೊಂಡಿದೆ ಎಂದು ಮರ್ಕ್ಸವಾದಿ ಕಮ್ಯುನಿಸ್ಟ ಪಕ್ಷದ ನಾಯಕ ಮತ್ತು ರಾಜ್ಯಸಭಾ ಸಂಸದ ಜಾನ್ ಬ್ರಿಟ್ಸ್ ಅವರು ’ನದಾವತುಲ್ ಮುಜಾಹಿದ್ದೀನ್’ ಸಭೆಯಲ್ಲಿ ಹುರುಳಿಲ್ಲದ ಆರೋಪ ಮಾಡಿದರು. ಇದಕ್ಕೂ ಮುನ್ನ ಬ್ರಿಟ್ಸ್ ಅವರು ಬಿಜೆಪಿ ನಾಯಕ ವಿ. ಮುರಳಿಧರನ್ ಹಾಗೂ ಗೋವಾದ ರಾಜ್ಯಪಾಲ ಹಾಗೂ ಕೇರಳದ ಭಾಜಪದ ಮಾಜಿ ಅಧ್ಯಕ್ಷ ಪಿ. ಎಸ್. ಶ್ರೀಧರನ್ ಪಿಳ್ಳೈ ಇವರನ್ನು ಆಹ್ವಾನ ನೀಡಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು “ಭಾಜಪ ಚುನಾವಣೆಯಲ್ಲಿ ಮತಗಳನ್ನು ಪಡೆಯಲು ಧಾರ್ಮಿಕ ಸಾಮರಸ್ಯ ಮತ್ತು ಸುಳ್ಳು ಭಾವನೆಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ” ಎಂದು ಅವರು ಆರೋಪಿಸಿದರು. “ದೇಶದ ಜನಸಂಖ್ಯೆಯ ಶೇಕಡಾ ೨೦ ರಷ್ಟಿರುವ ಸಮುದಾಯಕ್ಕೆ ಸಂಸತ್ತಿನಲ್ಲಿ ಸರಿಯಾದ ಪ್ರಾತಿನಿಧ್ಯವನ್ನು ನೀಡಲಾಗುತ್ತಿಲ್ಲ” ಎಂದು ಅವರು ಆರೋಪಿಸಿದರು. (ದೇಶದಲ್ಲಿ ಪ್ರಜಾಪ್ರಭುತ್ವವಿದೆ. ಸಂಸತ್ತಿಗೆ ಹೋಗಲು ಚುನಾವಣೆಗಳು ನಡೆಯುತ್ತವೆ. ಈ ಶೇ. ೨೦ ರಷ್ಟು ಜನಸಂಖ್ಯೆಯು ಸಂಸತ್ತಿಗೆ ಹೋಗಲು ಬಯಸಿದರೆ, ಅವರು ಚುನಾವಣೆ ಸ್ಪರ್ಧಿಸಬೇಕು ಮತ್ತು ಗೆಲ್ಲಬೇಕು ಮತ್ತು ಸಂಸತ್ತಿಗೆ ಹೋಗಬೇಕು. ಸಂವಿಧಾನದಲ್ಲಿ ಹೀಗೆ ಮಾಡಲು ಸಾಧ್ಯವಿಲ್ಲ ಆದ್ದರಿಂದ ಈ ರೀತಿಯ ಆರೋಪ ಮಾಡುವುದು ಇದೊಂದು ನೆಪವಾಗಿದೆ- ಸಂಪದಕರು)

ಸಂಪಾದಕೀಯ ನಿಲುವು

  • ಅಯೋಧ್ಯೆ, ಮಥುರಾ ಮತ್ತು ಕಾಶಿಯಲ್ಲಿ ಹಿಂದೆ ಏನು ನಡೆಯಿತು ಮತ್ತು ನಂತರ ಅಲ್ಲಿ ಯಾರು ಏನು ಕಟ್ಟಿದರು ಎಂದು ಬ್ರಿಟ್ಸ್ ಏಕೆ ಹೇಳುತ್ತಿಲ್ಲ ?
  • ಕಮ್ಯುನಿಷ್ಟರು ಭಾರತದ ಇತಿಹಾಸವನ್ನು ತಿರಸ್ಕರಿಸಿದರು ಮತ್ತು ಸಿಕ್ಕಿದೆಲ್ಲ ವ್ಯಾಸ ಪೀಠದಿಂದ ಹಿಂದೂ ದ್ವೇಷ ಮತ್ತು ಅಲ್ಪಸಂಖ್ಯಾತರ ಓಲೈಕೆ ಮಾಡಲು ಪ್ರಯತ್ನಿಸಿತು. ಆದ್ದರಿಂದ, ಇಂತಹ ಹೇಳಿಕೆಗಳನ್ನು ನೀಡುವುದು ಸಾಮ್ಯವಾದಿ ವೈಚಾರಿಕ ಭಯೋತ್ಪಾದನೆಯಾಗಿದೆ !