`ಈ ಭೂಮಿ ಅಲ್ಲಾಹನದು ಇಲ್ಲಿಯ ಎಲ್ಲಾ ಮೂರ್ತಿಗಳು ತೆರೆವು ಗೊಳಿಸಲಾಗುವುದು !’- ಅಲಿಗಡ ವಿದ್ಯಾಪೀಠದಲ್ಲಿ ಮತಾಂಧ ಮುಸಲ್ಮಾನ ವಿದ್ಯಾರ್ಥಿಗಳ ಬೆದರಿಕೆ

ಅಲಿಗಡ (ಉತ್ತರಪ್ರದೇಶ) – ಇಲ್ಲಿಯ ಅಲಿಗಡ ವಿದ್ಯಾಪೀಠದಲ್ಲಿನ ಮುಸಲ್ಮಾನ ವಿದ್ಯಾರ್ಥಿಗಳು ಬಾಬ್ರಿ ಮಸೀದಿ ಧ್ವಂಸಗೊಳಿಸಿರುವ ಡಿಸೆಂಬರ್ ೬ ಇದನ್ನು `ಕಪ್ಪು ದಿನ’ವೆಂದು ಆಚರಿಸಿದರು. ಈ ಸಮಯದಲ್ಲಿ ಅವರು `ಈ ಭೂಮಿ ಅಲ್ಲಾಹನದು ಇಲ್ಲಿಯ ಎಲ್ಲಾ ಮೂರ್ತಿಗಳು ತೆರೆವು ಗೊಳಿಸಲಾಗುವುದು’, ಎಂದು ಬೆದರಿಕೆ ನೀಡಿದರು. ಇದರ ಜೊತೆಗೆ ಈ ವಿದ್ಯಾರ್ಥಿಗಳ `ಬಾಬರಿ ಮಸೀದಿ ಇತ್ತು, ಇದೆ ಮತ್ತು ಭವಿಷ್ಯದಲ್ಲಿ ಕೂಡ ಇರುತ್ತದೆ’ ಎಂದು ಘೋಷಣೆ ಕೂಗಿದರು.

ಡಿಸೆಂಬರ್ ೬, ೨೦೨೨ ದಿನದಂದು ವಿದ್ಯಾಪೀಠದ ವಿದ್ಯಾರ್ಥಿ ನಾಯಕ ಮಹಮ್ಮದ್ ಫರೀದ ಇವನ ನೇತೃತ್ವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸಲ್ಮಾನ ವಿದ್ಯಾರ್ಥಿಗಳು ಕೈಯಲ್ಲಿ ಫಲಕ ಹಿಡಿದು ವಿದ್ಯಾಪೀಠ ಪರಿಸರದಲ್ಲಿ ಪ್ರತಿಭಟನೆ ನಡೆಸಿದರು. ಈ ಸಮಯದಲ್ಲಿ ಆತ, “ಬಾಬರಿ ಮಸೀದಿ ಎಂದಿಗೂ ನಾಶ ಮಾಡಲು ಸಾಧ್ಯವಿಲ್ಲ ಅದು ಶಾಶ್ವತವಾಗಿರುವುದು. ಒಂದು ದಿನ ಅಲ್ಲಾಹನ ಈ ಭೂಮಿಯಿಂದ ಎಲ್ಲಾ ಮೂರ್ತಿಗಳು ತೆರೆವು ಗೊಳಿಸಲಾಗುವುದು ಮತ್ತು ಕೇವಲ ಅಲ್ಲಾಹನ ಹೆಸರು ಉಳಿಯುವುದು.” ಎಂದು ಹೇಳಿದನು.

ಪೊಲೀಸರು ಈ ಪ್ರಕರಣದ ಅನ್ವೇಷಣೆ ನಡೆಸಬೇಕು ! – ಭಾಜಪ

ಈ ವಿಷಯವಾಗಿ ಅಲಿಗಡ ಇಲ್ಲಿಯ ಭಾಜಪದ ಜಿಲ್ಲಾ ಉಪಾಧ್ಯಕ್ಷ ಗೌರವ ಶರ್ಮ ಇವರು, ಸರ್ವೋಚ್ಚ ನ್ಯಾಯಾಲಯವು ಡಿಸೆಂಬರ್ ೬ ರಂದು ಕಪ್ಪು ದಿನ ಆಚರಿಸಲು ನಿಷೇಧಿಸಿದೆ. ಆದರೂ ಕೂಡ ಅಲಿಗಡ ವಿದ್ಯಾಪೀಠದಲ್ಲಿ ಈ ದಿನ ಆಚರಿಸಲಾಗಿದೆ. ಪೊಲೀಸರು ಈ ಪ್ರಕರಣದ ಅನ್ವೇಷಣೆ ನಡೆಸಬೇಕೆಂದು ಹೇಳಿದರು.

ಸಂಪಾದಕೀಯ ನಿಲುವು

  • ಹಿಂದೂಗಳಿಗೆ ಈ ರೀತಿ ಬಹಿರಂಗವಾಗಿ ಬೆದರಿಕೆ ನೀಡಿ ಕಾನೂನು ಮತ್ತು ಸುವ್ಯವಸ್ಥೆಗೆ ಅವ್ವಾಹನೆ ನೀಡುವವರಿಗೆ ಸರಕಾರವು ಜೀವಾವಧಿ ಶಿಕ್ಷೆ ನೀಡಬೇಕು !
  • ಇಂತಹ ಬೆದರಿಕೆ ಹಿಂದೂಗಳು ಮುಸಲ್ಮಾನರಿಗೆ ನೀಡಿದ್ದರೆ, ಇಷ್ಟೊತ್ತಿಗೆ ಪ್ರಗತಿಪರರು, ಕಾಂಗ್ರೆಸ್ಸಿಗರು, ಕಮ್ಯುನಿಸ್ಟರು, ಬುದ್ಧಿಜೀವಿಗಳು ಮುಂತಾದವರು ಹಿಂದೂಗಳ ಮೇಲೆ ಮುಗಿಬೀಳುತ್ತಿದ್ದರು, ಆದರೆ ಈಗ ಇವರೆಲ್ಲರೂ ಮೌನವಾಗಿದ್ದಾರೆ !
  • ವಿದ್ಯಾರ್ಥಿದಶೆಯಿಂದಲೇ ಇಷ್ಟೊಂದು ಪರಾಕಾಷ್ಠೆಯ ಹಿಂದೂ ದ್ವೇಷ ಕಲಿಸುವ ವಿದ್ಯಾಪೀಠಗಳ ಮೇಲೆ ಸರಕಾರ ನಿಷೇಧ ಏಕೆ ಹೇರುವುದಿಲ್ಲ ?