
ಕೋಲಕತಾ (ಬಂಗಾಳ) – ತೃಣಮೂಲ ಕಾಂಗ್ರೆಸ್ನ ಮುಖಂಡ ಮತ್ತು ಮಾಜಿ ಕ್ರಿಕೆಟ ಪಟು ಕೀರ್ತಿ ಆಝಾದ ಇವರು ಅಕ್ಟೋಬರ ೧೬ ರಂದು ಸುಳ್ಳು ಹೇಳಿಕೆಯನ್ನು ಟ್ವೀಟ ಮಾಡಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಎರಡನೇಯ ಸರಸಂಘಚಾಲಕ ಪೂ. ಮಾಧವರಾವ ಗೋಳವಲಕರ (ಗುರೂಜಿ)ಯವರನ್ನು ಅವಮಾನಗೊಳಿಸಿದ್ದಾರೆ. ‘ಗೋಳವಲಕರರು ಆಂಗ್ಲರ ಗುಲಾಮಗಿರಿ ಮಾಡಲು ಸಿದ್ಧರಿದ್ದರು; ಆದರೆ ದಲಿತರು, ಹಿಂದುಳಿದವರು ಮತ್ತು ಮುಸಲ್ಮಾನರಿಗೆ ಸಮಾನ ಅಧಿಕಾರ ನೀಡುವ ಸ್ವಾತಂತ್ರ್ಯ ಅವರಿಗೆ ಬೇಡವಾಗಿತ್ತು’, ಎನ್ನುವ ಸುಳ್ಳು ಹೇಳಿಕೆಯನ್ನು ಅವರ ಹೆಸರಿನಲ್ಲಿ ಮತ್ತು ಅವರ ಛಾಯಾಚಿತ್ರದೊಂದಿಗೆ ಆಝಾದರು ಟ್ವೀಟ್ ಮಾಡಿದ್ದಾರೆ. (ಭಗತಸಿಂಗ, ಗೋಳವಲಕರ ಗುರೂಜಿಯವರಂತಹ ರಾಷ್ಟ್ರಪುರುಷರಿಗೆ ಅವಮಾನಗೊಳಿಸಿ ರಾಜಕೀಯ ಸ್ವಾರ್ಥವನ್ನು ಸಾಧಿಸುವ ರಾಜಕಾರಣಿಗಳ ರಾಷ್ಟ್ರಪ್ರೇಮಿ ಜನತೆಯು ನ್ಯಾಯೋಚಿತ ಮಾರ್ಗದಿಂದ ಪ್ರತಿಕಾರ ಮಾಡಬೇಕು – ಸಂಪಾದಕರು)
Is this true?
क्या ये सच है?? pic.twitter.com/a56Bwuc2Na— Kirti Azad (@KirtiAzaad) October 16, 2022
೧. ಒಬ್ಬ ಟ್ವಿಟರ ಬಳಕೆದಾರನು, ಆಝಾದರು ಏನು ಬರೆದಿದ್ದಾರೆಯೋ, ಅದು ಎಲ್ಲವೂ ಸುಳ್ಳಾಗಿದ್ದು, ಅವರು ಬಾಯಿಮುಚ್ಚಿಕೊಂಡಿರಬೇಕು ಎಂದು ಬರೆದಿದ್ದಾರೆ.
೨. ಸುಶೀಲ ಅಗ್ರವಾಲರು ಇವರು, ಕೀರ್ತಿ ಆಝಾದರು ಯಾವ ಪುಸ್ತಕವನ್ನು ಉಲ್ಲೇಖಿಸಿದ್ದಾರೆಯೋ, ಆ ಪುಸ್ತಕವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಗುರೂಜಿಯವರು ನಿರಾಕರಿಸಿದ್ದರು ಎಂದು ಬರೆದಿದ್ದಾರೆ.
೩. ಇತರ ಅನೇಕ ಟ್ವಿಟರ ಬಳಕೆದಾರರು ಆಝಾದರು ನೀಡಿರುವ ಹೇಳಿಕೆ ಸುಳ್ಳಾಗಿರುವುದನ್ನು ಹೇಳಿದ್ದು, ಪೂ. ಗೋಳವಲಕರ ಗುರೂಜಿಯವರು ಇಂತಹ ಯಾವುದೇ ಟಿಪ್ಪಣೆಯನ್ನು ಮಾಡಿರಲಿಲ್ಲವೆಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಸಂಘ ಮತ್ತು ಪೂ. ಗೋಳವಲಕರ ಗುರೂಜಿಯವರ ವಿಷಯದಲ್ಲಿ ಎಳ್ಳಷ್ಟೂ ಜ್ಞಾನವಿಲ್ಲದೇ ಇರುವಾಗ ಸ್ವಂತ ಅಜ್ಞಾನವನ್ನು ತೋರಿಸುವ ತೃಣಮೂಲ ಕಾಂಗ್ರೆಸ್ನ ನಾಯಕ ! |
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ