ಜಲಪಾಯಗುಡಿ (ಬಂಗಾಲ) ಇಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿ ವಿಸರ್ಜನೆ ನಡೆಯುತ್ತಿರುವಾಗ ಅನಿರೀಕ್ಷಿತವಾಗಿ ನದಿಯಲ್ಲಿ ಪ್ರವಾಹ ಬಂದಿದ್ದರಿಂದ ೧೦ ಜನರ ಸಾವು

ಜಲಪಾಯಗುಡಿ (ಬಂಗಾಲ) – ಇಲ್ಲಿ ಅಕ್ಟೋಬರ್ ೫ ರಂದು ಶ್ರೀ ದುರ್ಗಾದೇವಿ ಮೂರ್ತಿಯ ವಿಸರ್ಜನೆಗಾಗಿ ರಾತ್ರಿ ೯ ಗಂಟೆ ಸುಮಾರಿಗೆ ಮಾಲ ನದಿಯ ತೀರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಅಲ್ಲಿ ವಿಸರ್ಜನೆಗಾಗಿ ೪೦ ಮೂರ್ತಿಗಳನ್ನು ತರಲಾಗಿತ್ತು. ಆಗ ಅನಿರೀಕ್ಷಿತವಾಗಿ ನದಿಗೆ ಪ್ರವಾಹ ಬಂದಿದ್ದು. ಇದರಲ್ಲಿ ಅನೇಕ ಜನರು ಕೊಚ್ಚಿ ಹೋದರು.

ಇಲ್ಲಿಯವರೆಗೆ ೧೦ ಜನರು ಸಾವನ್ನಪ್ಪಿರುವ ಮಾಹಿತಿ ತಿಳಿದು ಬಂದಿದೆ. ಇನ್ನು ಎಷ್ಟು ಜನರು ನಾಪತ್ತೆಯಾಗಿದ್ದರಿಂದ ಸಾವನ್ನಪ್ಪಿರುವ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಈ ಪ್ರವಾಹದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿದೆ. ಅಲ್ಲಿ ಸಹಾಯಕಾರ್ಯ ನಡೆಯುತ್ತಿದೆ. ನದಿಗೆ ಅನಿರೀಕ್ಷಿತವಾಗಿ ಪ್ರವಾಹ ಹೇಗೆ ಬಂದಿತು ಇದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ತಿಳಿದು ಬಂದಿಲ್ಲ.