
ನವದೆಹಲಿ – ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ ಮೇಲೆ ನಿರ್ಬಂಧ ಹೇರಿದ ನಂತರ ಈಗ ಈ ಸಂಘಟನೆಯ ರಾಜಕೀಯ ಪಕ್ಷವಾದ ‘ಸೋಶಲ ಡೆಮಾಕ್ರೆಟಿಕ ಪಾರ್ಟಿ ಆಫ್ ಇಂಡಿಯಾ’ದ ಮೇಲೂ (‘ಎಸ್.ಡಿ.ಪಿ.ಐ’ನ ಮೇಲೂ) ಕಾರ್ಯಾಚರಣೆಯಾಗುವ ಸಾಧ್ಯತೆಯಿದೆ. ಈ ರಾಜಕೀಯ ಪಕ್ಷದ ನೋಂದಣಿಯಾಗಿದ್ದು ಅದಕ್ಕೆ ಚುನಾವಣಾ ಆಯೋಗದಿಂದ ಮಾನ್ಯತೆ ದೊರೆತಿದೆ. ಗೃಹಮಂತ್ರಾಲಯವು ಈ ಪಕ್ಷದ ಮೇಲೆ ಕಾರ್ಯಾಚರಣೆ ಮಾಡಲು ಚುನಾವಣಾ ಆಯೋಗಕ್ಕೆ ಶಿಫಾರಸ್ಸು ಮಾಡಬಲ್ಲುದು, ಹಾಗೆಯೇ ಗೃಹಮಂತ್ರಾಲಯದ ಆಧಾರದಲ್ಲಿ ಚುನಾವಣಾ ಆಯೋಗವೂ ಈ ಪಕ್ಷದ ಮೇಲೆ ನಿರ್ಬಂಧವನ್ನು ಹೇರಬಹುದು. ‘ಎಸ್.ಡಿ.ಪಿ.ಐ.’ನ ಮೇಲೆ ಮೊದಲಿನಿಂದಲೂ ಚುನಾವಣಾ ಆಯೋಗದ ಗಮನವಿದೆ. ಪಕ್ಷದ ದೇಣಿಗೆಗಳಿಗೆ ಸಂಬಂಧಿಸಿದ ಮಾಹಿತಿಯ ಮೇಲೆ ಆಯೋಗವು ಪಕ್ಷವನ್ನು ಸತತವಾಗಿ ಪ್ರಶ್ನಿಸಿದೆ.
#SDPIUnderRadar | SDPI, known as the political arm of PFI is under the EC’s radar for failing to file its contribution reports. #NewsX‘s @Ashish_sinhaa breaks down these explosive funding details of SDPI. pic.twitter.com/TiuP9dQN5Q
— NewsX (@NewsX) September 29, 2022
‘ಎಸ್.ಡಿ.ಪಿ.ಐ.’ ೨೦೧೮-೧೯ ಹಾಗೂ ೨೦೧೯-೨೦ ಈ ವರ್ಷಗಳಲ್ಲಿ ದೊರೆತ ದೇಣಿಗೆಗಳ ಬಗ್ಗೆ ಮಾಹಿತಿ ನೀಡಿಲ್ಲ. ೨೦೨೨-೨೧ರಲ್ಲಿ ಪಕ್ಷಕ್ಕೆ ೨ ಕೋಟಿ ೯೦ ಲಕ್ಷದಷ್ಟು ದೇಣಿಗೆ ದೊರೆತಿತ್ತು. ಆದರೆ ಪಕ್ಷದ ಪದಾಧಿಕಾರಿಗಳಿಗೆ ಕೇವಲ ೨೨ ಲಕ್ಷ ರೂಪಾಯಿಗಳ ಮಾಹಿತಿ ನೀಡಲು ಸಾಧ್ಯವಾಯಿತು. ‘ದೇಣಿಗೆ ನೀಡಿದವರು ಯಾರು ?’ ಎಂಬುದನ್ನೂ ಪಕ್ಷವು ಘೋಷಿಸಿಲ್ಲ, ಹಾಗೆಯೇ ಕಳೆದ ೩ ವರ್ಷಗಳಲ್ಲಿ ಕರ್ನಾಟಕ, ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ೧೧ ಕೋಟಿ ೭೮ ಲಕ್ಷ ರೂಪಾಯಿಗಳನ್ನು ಜಮೆ ಮಾಡಲಾಗಿದೆ. ಇಂತಹ ಸ್ಥಿತಿಯಲ್ಲಿ ಕೇಂದ್ರೀಯ ತನಿಖಾ ಸಂಸ್ಥೆಯು ಈ ಪಕ್ಷದ ಮೇಲೆ ಕಾರ್ಯಾಚರಣೆ ಮಾಡಬಹುದು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!