‘ಇಸ್ಲಾಂನನ್ನು ಉಳಿಸಲು ಭಾರತದ ಮೇಲೆ ದಾಳಿ ಮಾಡಿ !’(ಅಂತೆ)

ಇಸ್ಲಾಮಿಕ್ ಸ್ಟೇಟ್‌ನಿಂದ ಮುಸಲ್ಮಾನರಿಗೆ ಪ್ರಚೋದನೆ

ನವದೆಹಲಿ : ‘ಇಸ್ಲಾಮಿಕ್ ಸ್ಟೇಟ್’ ಈ ಭಯೋತ್ಪಾದಕ ಸಂಘಟನೆಯು ಭಾರತದ ವಿರುದ್ಧ ಬಹಿರಂಗವಾಗಿಯೇ ಸಂಗಟನೆಯನ್ನು ತೆರೆದಿದೆ. ಇಸ್ಲಾಮಿಕ್ ಸ್ಟೇಟ್‌ನ ವಕ್ತಾರ ಅಬು ಉಮರ್-ಉಲ್-ಮುಜಾಹಿರ್‌ನು ಮುಸಲ್ಮಾನರಿಗೆ ‘ಇಸ್ಲಾಂ ಅನ್ನು ಉಳಿಸಲು ಭಾರತದ ಮೇಲೆ ದಾಳಿ ಮಾಡಿ’, ಎಂದು ಪ್ರಚೋದಿಸಿದ್ದಾನೆ. ಮುಜಾಹಿರ್ ಭಾರತದ ಮುಸಲ್ಮಾನರ ಜೊತೆಗೆ ಪಾಕಿಸ್ತಾನ, ಬಾಂಗ್ಲಾದೇಶ, ಫಿಲಿಪ್ಪೀನ್ಸ್, ಮಲೇಷ್ಯಾ, ಇಂಡೋನೇಷ್ಯಾ ಮತ್ತು ಸಿಂಗಾಪುರದ ಮುಸಲ್ಮಾನರು ಭಾರತದ ಮೇಲೆ ದಂಡೆತ್ತಿ ಬರಲು ಪ್ರಚೋದನೆ ನೀಡಿದ್ದಾನೆ.


ಮುಜಾಹಿರ್‌ನ ಅರೇಬಿಕ್ ಭಾಷೆಯಲ್ಲಿ ೩೨ ನಿಮಿಷಗಳ ಭಾಷಣವನ್ನು ಪ್ರಸಾರ ಮಾಡಲಾಗಿದೆ. ಮುಜಾಹಿರ್‌ನ ಭಾಷಣದಲ್ಲಿ, ಭಾರತದ ಮುಸಲ್ಮಾನರನ್ನು ದೇಶದ ಮೇಲೆ ದಾಳಿ ಮಾಡಲು ಪ್ರಚೋದಿಸಲಾಗುತ್ತಿದೆ. ‘ಭಾರತದಲ್ಲಿ ಇಸ್ಲಾಂ ರಕ್ಷಿಸುವುದು ಇಸ್ಲಾಮಿಕ್ ಸ್ಟೇಟ್‌ನ ಗುರಿಯಾಗಿದೆ ಎಂದು ಮುಜಾಹಿರ್ ಹೇಳಿದ್ದಾನೆ. ಭಾರತ ಸರಕಾರವು ನಿರಂತರವಾಗಿ ಇಸ್ಲಾಂನನ್ನು ಗುರಿಯಾಗಿಸಿಕೊಂಡಿದೆ ಎಂದು ಹುರುಳಿಲ್ಲದ ಆರೋಪ ಮಾಡಿದ್ದಾನೆ.

ಸಂಪಾದಕೀಯ ನಿಲುವು

ಇಂತಹ ಪ್ರಚೋದನೆ ನೀಡುವ ಭಯೋತ್ಪಾದಕ ಸಂಘಟನೆಗೆ ಪಾಠ ಕಲಿಸಲು ಭಾರತ ಸರಕಾರ ಕ್ರಮ ಕೈಗೊಳ್ಳುವುದು ಅಗತ್ಯವಿದೆ !