ಬಿಹಾರದ ರಾಷ್ಟ್ರೀಯ ಹೆದ್ದಾರಿಯ ಮೇಲೆ ಇಬ್ಬರು ನಡೆಸಿದ ಗುಂಡಿನ ದಾಳಿಯಲ್ಲಿ ಒಬ್ಬನು ಸಾವನ್ನಪ್ಪಿದ್ದಾನೆ ಹಾಗೂ ೯ ಜನರು ಗಾಯಗೊಂಡಿದ್ದಾರೆ : ೭ ಪೊಲೀಸರ ಅಮಾನತು

ಬಿಹಾರದಲ್ಲಿನ ಜಂಗಲರಾಜ !

ಬೇಗುಸರಾಯ (ಬಿಹಾರ) – ಇಲ್ಲಿಯ ರಾಷ್ಟ್ರೀಯ ಹೆದ್ದಾರಿಯ ಮೇಲೆ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ದುಶ್ಕರ್ಮಿಗಳಿಂದ ನಡೆದ ಗುಂಡಿನ ದಾಳಿಯಲ್ಲಿ ಒಬ್ಬನು ಸಾವನ್ನಪ್ಪಿದ್ದಾನೆ ಮತ್ತು ೮ ಜನರು ಗಾಯಗೊಂಡಿದ್ದಾರೆ. ಈ ಇಬ್ಬರು ರಾಷ್ಟ್ರೀಯ ಹೆದ್ದಾರಿಯ ಮೇಲೆ ಸುಮಾರು ೩೦ ಕಿಲೋಮೀಟರ್ ವರೆಗೂ ಗುಂಡಿನ ದಾಳಿ ನಡೆಸಿದ್ದಾರೆ. ಇದರಲ್ಲಿ ಅಯೋಧ್ಯ ವೃತ್ತದ ಹತ್ತಿರ ಗುಂಡು ತಗಲಿರುವ ವ್ಯಕ್ತಿ ರಸ್ತೆಯಲ್ಲಿ ಸಾವನ್ನಪ್ಪಿದ್ದಾನೆ ಹಾಗೂ ಬಾಚವಾರ, ಫುಲವಾರಿಯ, ಬರೌನಿ ಮತ್ತು ಚಕಿಯಾ ಪ್ರದೇಶದಲ್ಲಿ ೮ ಜನರು ಗಾಯಗೊಂಡಿದ್ದಾರೆ. ಎಲ್ಲರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಅವರಿಬ್ಬರೂ ಗುಂಡಿನ ದಾಳಿ ನಡೆಸುತ್ತಾ ಸಮಸ್ತಿಪೂರದ ಕಡೆಗೆ ಓಡಿ ಹೋಗಿದ್ದಾರೆ. ಗುಂಡಿನ ದಾಳಿಯ ಘಟನೆಯ ನಂತರ ಸುತ್ತಮುತ್ತಲಿನ ಪರಿಸರದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಈ ವಿಷಯವಾಗಿ ಹೆಚ್ಚುವರಿ ಪೊಲೀಸ್ ಮಹಾಸಂಚಾಲಕ ಜಿತೇಂದ್ರ ಸಿಂಹ ಗಂಗವಾರ್ ಇವರು, ಅಪರಾಧಿಗಳ ಗುರುತು ಹಿಡಿಯಲು ಮತ್ತು ಅವರನ್ನು ಬಂಧಿಸುವದಕ್ಕಾಗಿ ಸಿಸಿಟಿವಿ ಛಾಯಾಚಿತ್ರದ ಸಹಾಯ ತೆಗೆದುಕೊಳ್ಳುತ್ತಿದ್ದಾರೆ. ಈ ಪ್ರಕರಣದಲ್ಲಿ ದುರ್ಲಕ್ಷ ಮಾಡಿರುವುದರಿಂದ ೭ ಪೊಲೀಸರನ್ನು ಅಮಾನತುಗೊಳಿಸಲಾಗಿದೆ. (ಕೇವಲ ಅಮಾನತು ಮಾಡದೆ ಇಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ! – ಸಂಪಾದಕರು)