ಹರಿದ್ವಾರದಲ್ಲಿನ ಧರ್ಮಸಂಸತ್ತಿನಲ್ಲಿ ತಥಾಕಥಿತ ಪ್ರಚೋದನಕಾರಿ ಭಾಷಣ ಮಾಡಿದ ಪ್ರಕರಣ !

ನವ ದೆಹಲಿ – ಹರಿದ್ವಾರದಲ್ಲಿನ ಧರ್ಮಸಂಸತ್ತಿನಲ್ಲಿ ತಥಾಕಥಿತ ಪ್ರಚೋದನಕಾರಿ ಭಾಷಣ ಮಾಡಿದ ಪ್ರಕರಣದಲ್ಲಿ ಜಿತೇಂದ್ರ ನಾರಾಯಣ ಸಿಂಹ ತ್ಯಾಗಿ ಇವರಿಗೆ ಸರ್ವೋಚ್ಚ ನ್ಯಾಯಾಲಯವು ನಿಯಮಿತ ಜಾಮೀನು ನೀಡಿದೆ. ಜಿತೇಂದ್ರ ತ್ಯಾಗಿ ಇವರ ಮೇಲೆ ಹರಿದ್ವಾರದಲ್ಲಿನ ಧರ್ಮ ಸಂಸತ್ತಿನಲ್ಲಿ ಇಸ್ಲಾಂ ಮತ್ತು ಪೈಗಂಬರ ಇವರ ವಿರುದ್ಧ ಆಕ್ಷೇಪಾರ್ಹ ಭಾಷಣ ಮಾಡಿದ ಆರೋಪವಿದೆ. ಈ ಪ್ರಕರಣದಲ್ಲಿ ಜಿತೇಂದ್ರ ತ್ಯಾಗಿ ಇವರಿಗೆ ಸರ್ವೋಚ್ಚ ನ್ಯಾಯಾಲಯ ೩ ತಿಂಗಳ ಶರತ್ತುಬದ್ಧ ಜಾಮೀನು ನೀಡಿತ್ತು. ಕೆಲವು ತಿಂಗಳ ಹಿಂದೆ ವಸೀಮ್ ರಿಝ್ವಿ ಇವರು ಇಸ್ಲಾಂ ತ್ಯಾಗ ಮಾಡಿ ಹಿಂದೂ ಧರ್ಮವನ್ನು ಸ್ವೀಕರಿಸಿದ್ದರು. ಅನಂತರ ಸಂಪೂರ್ಣ ದೇಶದಲ್ಲಿ ಅವರ ಧರ್ಮಾಂತರದ ಚರ್ಚೆ ನಡೆದಿತ್ತು. ಹರಿದ್ವಾರದಲ್ಲಿ ಧರ್ಮಸಂಸತ್ತಿನಲ್ಲಿ ಅವರು ತಥಾಕಥಿತ ಪ್ರಚೋದನಕಾರಿ ಭಾಷಣ ಮಾಡಿರುವುದರಿಂದ ಅವರ ಮೇಲಿನ ವಿರೋಧ ಇನ್ನೂ ಹೆಚ್ಚಾಗಿತ್ತು. ಪೊಲೀಸರು ಅವರ ಮೇಲೆ ಅಪರಾಧವನ್ನು ದಾಖಲಿಸಿ ಅವರನ್ನು ಬಂದಿಸಿದ್ದರು.
Supreme Court Grants Bail To Jitendra Tyagi In Hate Speech Case @Deepankar_0047 https://t.co/f6K6EtcQvL
— Live Law (@LiveLawIndia) September 12, 2022
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!