
ಗೌಹಾಟಿ – ಆಸ್ಸಾಂನ ಗೋಲಪಾಡಾ ಜಿಲ್ಲೆಯ ಅಜಮಲ ಹುಸೇನ ಹೆಸರಿನ ಅಲ್ ಕಾಯ್ದಾ ಸಂಘಟನೆಯ ಮತ್ತೊಬ್ಬ ಭಯೋತ್ಪಾದಕನನ್ನು ಇತ್ತೀಚೆ ಬಂಧಿಸಲಾಯಿತು. ಆತ ಗೌಹಾಟಿಯ ತನ್ನ ಮನೆಯಲ್ಲಿ ಅಲ್ ಕಾಯ್ದಾ ಸಂಘಟನೆಯ ಸದಸ್ಯನಾಗಿದ್ದ ಬಾಂಗ್ಲಾದೇಶಿ ಭಯೋತ್ಪಾದಕನಿಗೆ ಆಶ್ರಯ ನೀಡಿದ್ದನು. ಆಸ್ಸಾಂನಲ್ಲಿ ಇಲ್ಲಿಯವರೆಗೆ ‘ಅಲ್ ಕಾಯ್ದಾ ಭಾರತೀಯ ಉಪಖಂಡ’ ಮತ್ತು ‘ಅನ್ಸಾರುಲ್ಲಾ ಬಾಂಗ್ಲಾ ಟೀಮ್’ ಈ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ೩೮ ಭಯೋತ್ಪಾದಕರನ್ನು ಬಂಧಿಸಲಾಗಿದೆ.
೧. ಪ್ರಸಾರಮಾಧ್ಯಮಗಳು ನೀಡಿದ ಒಂದು ವಾರ್ತೆಯನುಸಾರ ಅಜಮಲ ಹುಸೇನ ಭಯೋತ್ಪಾದಕರಿಗೆ ಆಶ್ರಯ ನೀಡಿರುವುದನ್ನು ಒಪ್ಪಿಕೊಂಡಿದ್ದಾನೆ ಮತ್ತು ಅವನು ಆಸ್ಸಾಂನ ಬಾರಪೇಟಾ ಜಿಲ್ಲೆಯಲ್ಲಿ ಅಲ್ ಕಾಯ್ದಾದಿಂದ ತರಬೇತಿ ಪಡೆದಿರುವುದನ್ನು ಒಪ್ಪಿಕೊಂಡಿದ್ದಾನೆ.
೨. ಸದ್ಯಕ್ಕೆ ಆಸ್ಸಾಂ ಪೊಲೀಸರು ಭಯೋತ್ಪಾದಕ ಕೃತ್ಯಗಳ ಸಂದರ್ಭದಲ್ಲಿ ರಾಜ್ಯದ ಅನೇಕ ಮದರಸಾ ಮತ್ತು ಮಸೀದಿಗಳನ್ನು ನಷ್ಟಗೊಳಿಸುವ ಚಳುವಳಿಯನ್ನು ಕೈಗೆತ್ತಿಕೊಂಡಿದ್ದಾರೆ. ಈ ಚಳುವಳಿಯಡಿಯಲ್ಲಿ ಪೊಲೀಸರು ಆಸ್ಸಾಂನ ಬಾರಪೇಟಾ ಜಿಲ್ಲೆಯಲ್ಲಿರುವ ಒಂದು ಮದರಸಾವನ್ನು ನಷ್ಟಗೊಳಿಸಿದರು. ( ಭಯೋತ್ಪಾದಕರ ನೆಲೆಯಾಗಿರುವ ಮದರಸಾಗಳನ್ನು ನಷ್ಟಗೊಳಿಸುವ ಆಸ್ಸಾಂ ಸರಕಾರದ ಕ್ರಮವನ್ನು ಭಯೋತ್ಪಾದಕ ಪೀಡಿತ ಇತರೆ ರಾಜ್ಯ ಸರಕಾರಗಳು ಅನುಕರಣೆ ಮಾಡಬೇಕು ಇದೇ ರಾಷ್ಟ್ರಾಭಿಮಾನಿ ಜನತೆಯ ಅಪೇಕ್ಷೆಯಾಗಿದೆ – ಸಂಪಾದಕರು)
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !