
ಗೌಹಾಟಿ – ಆಸ್ಸಾಂನ ಗೋಲಪಾಡಾ ಜಿಲ್ಲೆಯ ಅಜಮಲ ಹುಸೇನ ಹೆಸರಿನ ಅಲ್ ಕಾಯ್ದಾ ಸಂಘಟನೆಯ ಮತ್ತೊಬ್ಬ ಭಯೋತ್ಪಾದಕನನ್ನು ಇತ್ತೀಚೆ ಬಂಧಿಸಲಾಯಿತು. ಆತ ಗೌಹಾಟಿಯ ತನ್ನ ಮನೆಯಲ್ಲಿ ಅಲ್ ಕಾಯ್ದಾ ಸಂಘಟನೆಯ ಸದಸ್ಯನಾಗಿದ್ದ ಬಾಂಗ್ಲಾದೇಶಿ ಭಯೋತ್ಪಾದಕನಿಗೆ ಆಶ್ರಯ ನೀಡಿದ್ದನು. ಆಸ್ಸಾಂನಲ್ಲಿ ಇಲ್ಲಿಯವರೆಗೆ ‘ಅಲ್ ಕಾಯ್ದಾ ಭಾರತೀಯ ಉಪಖಂಡ’ ಮತ್ತು ‘ಅನ್ಸಾರುಲ್ಲಾ ಬಾಂಗ್ಲಾ ಟೀಮ್’ ಈ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ೩೮ ಭಯೋತ್ಪಾದಕರನ್ನು ಬಂಧಿಸಲಾಗಿದೆ.
೧. ಪ್ರಸಾರಮಾಧ್ಯಮಗಳು ನೀಡಿದ ಒಂದು ವಾರ್ತೆಯನುಸಾರ ಅಜಮಲ ಹುಸೇನ ಭಯೋತ್ಪಾದಕರಿಗೆ ಆಶ್ರಯ ನೀಡಿರುವುದನ್ನು ಒಪ್ಪಿಕೊಂಡಿದ್ದಾನೆ ಮತ್ತು ಅವನು ಆಸ್ಸಾಂನ ಬಾರಪೇಟಾ ಜಿಲ್ಲೆಯಲ್ಲಿ ಅಲ್ ಕಾಯ್ದಾದಿಂದ ತರಬೇತಿ ಪಡೆದಿರುವುದನ್ನು ಒಪ್ಪಿಕೊಂಡಿದ್ದಾನೆ.
೨. ಸದ್ಯಕ್ಕೆ ಆಸ್ಸಾಂ ಪೊಲೀಸರು ಭಯೋತ್ಪಾದಕ ಕೃತ್ಯಗಳ ಸಂದರ್ಭದಲ್ಲಿ ರಾಜ್ಯದ ಅನೇಕ ಮದರಸಾ ಮತ್ತು ಮಸೀದಿಗಳನ್ನು ನಷ್ಟಗೊಳಿಸುವ ಚಳುವಳಿಯನ್ನು ಕೈಗೆತ್ತಿಕೊಂಡಿದ್ದಾರೆ. ಈ ಚಳುವಳಿಯಡಿಯಲ್ಲಿ ಪೊಲೀಸರು ಆಸ್ಸಾಂನ ಬಾರಪೇಟಾ ಜಿಲ್ಲೆಯಲ್ಲಿರುವ ಒಂದು ಮದರಸಾವನ್ನು ನಷ್ಟಗೊಳಿಸಿದರು. ( ಭಯೋತ್ಪಾದಕರ ನೆಲೆಯಾಗಿರುವ ಮದರಸಾಗಳನ್ನು ನಷ್ಟಗೊಳಿಸುವ ಆಸ್ಸಾಂ ಸರಕಾರದ ಕ್ರಮವನ್ನು ಭಯೋತ್ಪಾದಕ ಪೀಡಿತ ಇತರೆ ರಾಜ್ಯ ಸರಕಾರಗಳು ಅನುಕರಣೆ ಮಾಡಬೇಕು ಇದೇ ರಾಷ್ಟ್ರಾಭಿಮಾನಿ ಜನತೆಯ ಅಪೇಕ್ಷೆಯಾಗಿದೆ – ಸಂಪಾದಕರು)
ಕೊಲೆ ಪ್ರಕರಣವನ್ನು ವಿರೋಧಿಸಿದವರ ವಿರುದ್ಧ ದಾಖಲಾಗಿದ್ದ ಪ್ರಕರಣಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ!
‘ನ್ಯಾಯಾಲಯವನ್ನು ಇದರಲ್ಲಿ ಎಳೆಯಬೇಡಿ’, ಎಂದು ಹೇಳುತ್ತ ತಕ್ಷಣದ ವಿಚಾರಣೆಗೆ ನ್ಯಾಯಾಲಯದ ನಿರಾಕರಣೆ
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನೌಕೆಯನ್ನು ವಶಕ್ಕೆ ತೆಗೆದುಕೊಂಡು ನಾವಿಕರನ್ನು ಒತ್ತೆಯಾಳಾಗಿರಿಸಿದ್ದ ಸೊಮಾಲಿಯಾದ 44 ನಾಗರಿಕರಿಗೆ ಜೀವಾವಧಿ ಶಿಕ್ಷೆ! : Somalians Get Life Imprisonment
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಜಂಜೀರಾ ಕೋಟೆಯ ಮೇಲೆ ಶಾಶ್ವತವಾಗಿ ಕೇಸರಿ ಧ್ವಜ ಹಾರಿಸಿ, ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು! : Sahyadri Foundation Hindustan Alert!