ಮದರಸಾಗಳಲ್ಲಿ ದುಷ್ಟ ಕೃತ್ಯಗಳನ್ನು ಮಾಡುವವರು ಸಿಕ್ಕಿಬಿದ್ದರೆ ಅವರ ಮೇಲೆ ಸರಕಾರ ಗುಂಡು ಹಾರಿಸಲಿ, ಆದರೆ ಅವರಿಂದ ಮುಸಲ್ಮಾನರ ಅಪಕೀರ್ತಿ ಮಾಡಬಾರದು !

‘ಆಲ್ ಇಂಡಿಯಾ ಯುನೈಟೆಡ್ ಡೆಮೊಕ್ರೆಟಿಕ್ ಫ್ರಂಟ’ ಅಧ್ಯಕ್ಷ ಮೌಲಾನಾ ಬದರುದ್ದೀನ ಅಜಮಲ್ ಇವರ ಹೇಳಿಕೆ !

‘ಆಲ್ ಇಂಡಿಯಾ ಯುನೈಟೆಡ್ ಡೆಮೊಕ್ರೆಟಿಕ್ ಫ್ರಂಟ’ ಅಧ್ಯಕ್ಷ ಮೌಲಾನಾ ಬದರುದ್ದೀನ ಅಜಮಲ್

ಗೌಹಾಟಿ (ಆಸ್ಸಾಂ) – ಒಂದು ವೇಳೆ ಮದರಸಾದಲ್ಲಿ ದುಷ್ಟ ಕೃತ್ಯಗಳನ್ನು ಮಾಡುವ ಜನರು ಸಿಗುತ್ತಿದ್ದರೆ, ನಮಗೆ ಅವರ ವಿಷಯದಲ್ಲಿ ಸ್ವಲ್ಪವೂ ಸಹಾನುಭೂತಿಯಿಲ್ಲ. ಸರಕಾರವು ಇಂತಹವರ ಮೇಲೆ ಗುಂಡು ಹಾಕಬೇಕು, ಎಂದು ‘ಆಲ್ ಇಂಡಿಯಾ ಯುನೈಟೆಡ್ ಡೆಮೊಕ್ರೆಟಿಕ್ ಫ್ರಂಟ’ ಅಧ್ಯಕ್ಷರಾದ ಮೌಲಾನಾ ಬದರುದ್ಧೀನ ಅಜಮಲ ಇವರು ಹೇಳಿದರು.

ಅಜಮಲ್ ತಮ್ಮ ಮಾತನ್ನು ಮುಂದುವರಿಸುತ್ತಾ, ಒಂದು ವೇಳೆ ಮದರಸಾದಲ್ಲಿ ೧-೨ ಕೆಟ್ಟ ಶಿಕ್ಷಕರು ಸಿಗುತ್ತಿದ್ದರೇ, ಸರಕಾರ ಅಂತಹವರ ವಿಚಾರಣೆ ಮಾಡಬೇಕು. ಅದರಲ್ಲಿ ಅವರು ತಪ್ಪಿತಸ್ಥರೆಂದು ಕಂಡು ಬಂದರೆ ಸರಕಾರವು ಅವರ ಮೇಲೆ ಕ್ರಮ ಜರುಗಿಸಬೇಕು; ಆದರೆ ಅವರಿಂದಾಗಿ ಸಂಪೂರ್ಣ ಮುಸಲ್ಮಾನರಿಗೆ ‘ಜಿಹಾದಿ’ ಎಂದು ಹೇಳುವುದು ಸೂಕ್ತವಲ್ಲ. ಇದು ‘ಜಿಹಾದ’ ಅಲ್ಲ, ‘ಉಗ್ರವಾದಿ’ ಆಗಿದೆ. ಸರಕಾರವು ಅದನ್ನು ತಡೆಗಟ್ಟಬೇಕು. ಸರಕಾರ ಭಾರತದ ಗಡಿಯನ್ನು ರಕ್ಷಿಸಬೇಕು. ಗುಪ್ತಚರ ಇಲಾಖೆಯನ್ನು ಸುದೃಢಗೊಳಿಸಬೇಕು ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಕಳೆದ ೩ ದಶಕಗಳಲ್ಲಿ ಜಿಹಾದಿ ಉಗ್ರವಾದಿಗಳ ವಿರುದ್ಧ ಎಷ್ಟು ಮುಸಲ್ಮಾನರು ಬಾಯಿ ಬಿಟ್ಟಿದ್ದಾರೆ ? ಬದಲಾಗಿ ಮುಸಲ್ಮಾನ ಮುಖಂಡರು ಅವರನ್ನು ರಕ್ಷಿಸುವ ಪ್ರಯತ್ನ ಮಾಡಿದ್ದಾರೆ. ಈ ವಿಷಯದಲ್ಲಿ ಅಜಮಲ್ ಏಕೆ ಮಾತನಾಡುವುದಿಲ್ಲ ?
  • ಮಸೀದಿಯ ಎದುರಿನಿಂದ ಹಿಂದೂಗಳ ಧಾರ್ಮಿಕ ಮೆರವಣಿಗೆ ಹೋಗುವಾಗ ಆಗುವ ಆಕ್ರಮಣಗಳಿಗೆ ಮುಸಲ್ಮಾನ ಮುಖಂಡರು ಮತ್ತು ಅವರ ಧಾರ್ಮಿಕ ಸಂಘಟನೆಗಳನ್ನು ಏಕೆ ವಿರೋಧಿಸುವುದಿಲ್ಲ ಮತ್ತು ಇಂತಹ ಘಟನೆಗಳನ್ನು ನಿಲ್ಲಿಸಲು ಅವರೇಕೆ ಮುಂದೆ ಬರುವುದಿಲ್ಲ ?
  • ಪೊಲೀಸರು ಯಾವಾಗ ಜಿಹಾದಿ ಉಗ್ರವಾದಿಗಳ ಚಕಮಕಿಯಲ್ಲಿ ಹತ್ಯೆ ಮಾಡಲಗುತ್ತದೆ, ಆಗ ‘ಹತ್ಯೆಯಾದವನು ಉಗ್ರವಾದಿಯಾಗಿರಲಿಲ್ಲ’, ಎಂದು ಕಿರುಚಾಡುವ ಮುಸಲ್ಮಾನರು ಮಂಚೂಣಿಯಲ್ಲಿರುತ್ತಾರೆ ! ಅವರ ಅಂತ್ಯಯಾತ್ರೆಯಲ್ಲಿಯೂ ಅವರು ಬೃಹತ್ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ, ಈ ವಿಷಯದಲ್ಲಿ ಅಜಮಲ ಏಕೆ ಮಾತನಾಡುವುದಿಲ್ಲ ?