ಅಜ್ಞಾತರಿಂದ ಬಾಗಿಲ ಮೇಲೆ ಅಂಟಿಸಲಾಗಿದೆ ಬೆದರಿಕೆಯ ಪತ್ರ

ಲಕ್ಷ್ಮಣಪುರಿ (ಉತ್ತರಪ್ರದೇಶ) – ರಾಜ್ಯದ ಬರೆಯಲಿ ಜಿಲ್ಲೆಯ ಸಿರೌಲಿ ಭಾಗದ ಕೇಶವಪುರ ಗ್ರಾಮದ ದಿನೇಶ ಪಂಡಿತ ಇವರ ಮನೆಯ ಹೊರಗೆ ಬೆದರಿಕೆ ಪತ್ರ ಅಂಟಿಸಿರುವುದು ಕಂಡು ಬಂದಿದೆ. ಅದರಲ್ಲಿ ಪಂಡಿತ ಕುಟುಂಬವನ್ನು ಕೊಲ್ಲುವುದಾಗಿ ಬೆದರಿಸಲಾಗಿದೆ. ಇದರಿಂದ ಗ್ರಾಮದ ಹಿಂದೂಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಘಟನೆಯ ಸೂಚನೆ ಸಿಗುತ್ತಲೇ ಪೊಲೀಸ ಅಧಿಕಾರಿ ಚಮನ ಸಿಂಹ ಚೋಪಡಾ ಇವರು ಪಂಡಿತ ಕುಟುಂಬಕ್ಕೆ ರಕ್ಷಣೆ ನೀಡುವ ಭರವಸೆ ನೀಡಿದ್ದಾರೆ. ಆದಷ್ಟು ಬೇಗನೆ ಆರೋಪಿಯನ್ನು ಬಂಧಿಸಲಾಗುವುದು ಎಂದು ಸಹ ಚೋಪಡಾ ಹೇಳಿದ್ದಾರೆ.
#Bareilly : हिंदू परिवार को आठ दिन में मारने की धमकी, घर के दरवाजे पर चिपकाया पत्र। @bareillypolice @Uppolice
More Updates: https://t.co/YzXGNIJVIL https://t.co/drMF5eqSJI
— Zee Uttar Pradesh Uttarakhand (@ZEEUPUK) August 3, 2022
ದಿನೇಶ ಪಂಡಿತ ಇವರ ಮನೆಯ ಹೊರಗೆ ಬಾಗಿಲಿನ ಮೇಲೆ ಅಂಟಿಸಿರುವ ಪತ್ರದಲ್ಲಿ, ‘ದಿನೇಶ ಪಂಡಿತ, ನೀನು ಹೀಗೆಯೇ ದಾರಿಗೆ ಬರುವುದಿಲ್ಲ. ಸುಮ್ಮನೆ ಇರದಿದ್ದರೆ, ೮ ದಿನದಲ್ಲಿ ನಿನ್ನ ಕುಟುಂಬವನ್ನು ಕೊಲ್ಲುವೆವು, ನಂತರ ಯಾರು ಬೆಂಬಲಕ್ಕೆ ಬರುವುದಿಲ್ಲ. ಹಿಂದೂಗಳ ಪರ ನಿಲ್ಲುವುದನ್ನು ಬಿಟ್ಟು ಬಿಡು. ನಿನಗಾಗಿ ಒಬ್ಬ ಹಿಂದೂ ಕೂಡ ಮುಂದೆ ಬರಲಾರ. ಇಂದು ಊರಿನ ಒಬ್ಬ ವ್ಯಕ್ತಿಯೂ ನಿನ್ನ ಜೊತೆ ಇರುವುದಿಲ್ಲ. ಏನಾದರೂ ಎಲ್ಲರಿಗೆ ಸಹಾಯ ಮಾಡುತ್ತಾ ಇದ್ದರೆ, ಖಂಡಿತವಾಗಿಯೂ ಸಾಯುವಿ’.
ಸಂಪಾದಕೀಯ ನಿಲುವು
|
ನೈಸರ್ಗಿಕ ವಿಕೋಪದಿಂದ ೧ ಸಾವಿರ ಕೋಟಿ ರೂಪಾಯಿ ಹಾನಿ : Himachal Pradesh Natural Disasters
ಮೊಬೈಲ್ ಫೋನ್ ಪೋಷಕರ ಜಾಗವನ್ನು ಆಕ್ರಮಿಸಿಕೊಳ್ಳುತ್ತಿರುವುದು ಕಳವಳಕಾರಿ ! : Supreme Court on Mobile phone
ಸೋನಮ್ ವಾಂಗ್ಚುಕ್ ಅವರು ಉಪವಾಸ ಮುಕ್ತಾಯ !
ಶಿಕ್ಷಣ ಸಚಿವರ ಸ್ಥಳಾಂತರ: ಹೊಸ ಕಾನೂನು ಸಹ ರೂಪಿಸಲಾಗುವುದು! – ಪ್ರಧಾನಿ ನರೇಂದ್ರ ಮೋದಿ
ಖೋಪೋಲಿಯ ಶ್ರೀ ಭಗವಾನ ವೀರೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ನಾಲ್ವರ ಬಂಧನ!
ಅಸ್ಸಾಂ: ನೆರೆಗೆ ೪೧ ಜನರ ಸಾವು !