೨ ಸಾವಿರ ೬೪೨ ಪ್ರತಿಭಟನಾಕಾರರ ಬಂಧನ

ಹೊಸ ದೆಹಲಿ – ಕೇಂದ್ರ ಸರಕಾರವು ಅಗ್ನಿಪಥ ಯೋಜನೆ ಪರಿಚಯಿಸಿದ ನಂತರ, ವಿರೋಧಕರು ನಿರ್ಮಿಸಿದ ವಾತಾವರಣದಿಂದ ಯೋಜನೆಯ ವಿರುದ್ಧ ದೇಶದಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳು ನಡೆದವು. ಈ ಯೋಜನೆಗೆ ಬಿಹಾರ ರಾಜ್ಯದಲ್ಲಿ ಎಲ್ಲಕ್ಕಿಂತ ಹೆಚ್ಚು ವಿರೋಧ ವ್ಯಕ್ತವಾಯಿತು. ಅನೇಕ ರೈಲು ಗಾಡಿಗಳು ಬೆಂಕಿಗೆ ಆಹುತಿಯಾದವು. ಅಗ್ನಿಪಥ ಯೋಜನೆಯ ವಿರುದ್ಧ ಭುಗಿಲೆದ್ದ ಹಿಂಸಾಚಾರದಲ್ಲಿ ರೈಲ್ವೆಗೆ ಒಟ್ಟು ೨೬೦ ಕೋಟಿ ರೂಪಾಯಿಯ ನಷ್ಟ ಉಂಟಾಯಿತು ಎಂಬ ಮಾಹಿತಿ ಕೇಂದ್ರ ರೈಲು ಸಚಿವ ಅಶ್ವಿನಿ ವೈಷ್ಣವ ಇವರು ಈಗಷ್ಟೇ ಸಂಸತ್ತಿನಲ್ಲಿ ಒಂದು ಲಿಖಿತ ಪ್ರಶ್ನೆಗೆ ಉತ್ತರಿಸುವಾಗ ನೀಡಿದರು.
ಅಗ್ನಿಪಥ ಯೋಜನೆಯ ವಿರುದ್ಧ ಪ್ರತಿಭಟನೆಗಳಿಂದ ದೇಶದಾದ್ಯಂತ ಒಟ್ಟು ೨ ಸಾವಿರ ೧೩೨ ರೈಲು ಗಡಿಗಳನ್ನು ರದ್ದುಪಡಿಸಲಾಯಿತು. ಈ ಸಮಯದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಇಬ್ಬರು ಸಾವನ್ನಪ್ಪಿದರು ಹಾಗೂ ೩೫ ಜನರು ಗಾಯಗೊಂಡರು. ೨ ಸಾವಿರ ೬೪೨ ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಅಶ್ವಿನಿ ವೈಷ್ಣವ ಇವರು ನೀಡಿದರು.
ಸಂಪಾದಕೀಯ ನಿಲುವುಹಿಂಸಕ ಆಂದೋಲನ ನಡೆಸಿ ಸಾರ್ವಜನಿಕ ಆಸ್ತಿ ಪಾಸ್ತಿ ನಾಶ ಮಾಡುವವರಿಗೆ ಸರಕಾರ ಜೀವಾವಧಿಗಾಗಿ ಕಾರಾಗೃಹಕ್ಕೆ ತಳ್ಳಿ ಅವರಿಂದ ನಷ್ಟ ಪರಿಹಾರ ವಸೂಲಿ ಮಾಡಬೇಕು, ಅದರ ಭಾರ ಜನರ ಮೇಲೆ ಬೀಳದೆ ಇರುವ ಹಾಗೆ ನೋಡಬೇಕು. |
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case
‘ನ್ಯಾಯಾಲಯವನ್ನು ಇದರಲ್ಲಿ ಎಳೆಯಬೇಡಿ’, ಎಂದು ಹೇಳುತ್ತ ತಕ್ಷಣದ ವಿಚಾರಣೆಗೆ ನ್ಯಾಯಾಲಯದ ನಿರಾಕರಣೆ
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನಾವಿಕರನ್ನು ಒತ್ತೆಯಾಳಾಗಿರಿಸಿದ್ದ 44 ಸೊಮಾಲಿಯನ್ನರಿಗೆ ಜೀವಾವಧಿ
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಬುಲ್ಡೋಜರ್ ಕ್ರಮಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ನ ವಿಭಜಿತ ತೀರ್ಪು! : Allahabad HC