
ನವದೆಹಲಿ – ಎಲ್ಲ ಪುರಾವೆಗಳನ್ನು ತೋರಿಸಿದರೆ ಹಾಗೂ ದೇಶದಲ್ಲಿನ ಕೆಲವು ರಾಜ್ಯಗಳಲ್ಲಿ ಹಿಂದೂಗಳು ಅಲ್ಪ ಸಂಖ್ಯಾತರಾಗಿದ್ದರೂ ಅವರಿಗೆ ಅಲ್ಪಸಂಖ್ಯಾತರಾಗಿರುವ ದರ್ಜೆ ದೊರೆಯುತ್ತಿಲ್ಲ ಎಂದಾದರೆ, ನಾವು ಈ ಹಿಂದೂಗಳಿಗೆ ಅಲ್ಪಸಂಖ್ಯಾತರಾಗಿರುವ ದರ್ಜೆ ನೀಡುವ ಅರ್ಜಿಯ ಮೇಲೆ ವಿಚಾರ ಮಾಡುತ್ತೇವೆ, ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ. ದೇಶದಲ್ಲಿನ ಕೆಲವು ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿರುವುದರ ದರ್ಜೆ ನೀಡಲು ದಾಖಲಿಸಲಾದ ಅರ್ಜಿಯ ಮೇಲೆ ಆಲಿಕೆಯನ್ನು ನಡೆಸುವಾಗ ನ್ಯಾಯಾಲಯವ ಮೇಲಿನ ಅಭಿಪ್ರಾಯವನ್ನು ಮಂಡಿಸಿದೆ. ೧೯೯೩ರ ಕೇಂದ್ರ ಸರಕಾರದ ಸೂಚನೆಯ ಮೂಲಕ ದೇಶದಲ್ಲಿ ಮುಸಲ್ಮಾನ, ಕ್ರೈಸ್ತ, ಬೌದ್ಧ, ಜೈನ, ಪಾರಸಿಗಳಿಗೆ ಅಲ್ಪ ಸಂಖ್ಯಾತರೆಂದು ಘೋಷಿಸಲಾಗಿದೆ. ಈ ಸೂಚನೆಯನ್ನು ದೇವಕೀನಂದನ ಠಾಕೂರರವರು ಈ ಅರ್ಜಿಯ ಮೂಲಕ ಪ್ರಶ್ನಿಸಿದ್ದಾರೆ.
SC seeks ‘concrete’ examples of states denying minority status to Hindus https://t.co/ndglU2LA0k
— Hindustan Times (@HindustanTimes) July 18, 2022
೧. ನ್ಯಾಯಾಲಯವು ‘ಒಂದು ಧರ್ಮಕ್ಕೆ ರಾಜ್ಯಮಟ್ಟದಲ್ಲಿ ಅಲ್ಪಸಂಖ್ಯಾತವೆಂದು ಘೋಷಿಸಬೇಕು; ಆದರೆ ಎಲ್ಲಿಯ ವರೆಗೆ ಅವರಿಗೆ ಅಲ್ಪಸಂಖ್ಯಾತರ ದರ್ಜೆ ನೀಡಲು ನಿರಾಕರಿಸಲಾಗುವುದಿಲ್ಲ, ಅಲ್ಲಿಯ ವರೆಗೆ ನ್ಯಾಯಾಲಯವೂ ಈ ಬಗ್ಗೆ ವಿಚಾರ ಮಾಡಲಾರದು’ ಎಂದು ಹೇಳಿದೆ.
೨. ಅರ್ಜಿದಾರರ ನ್ಯಾಯವಾದಿಗಳು, ದೇಶದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಲ್ಲ ಎಂಬ ವಿಚಾರ ಸರಣಿ ನಿರ್ಮಾಣವಾಗಿದೆ, ಎಂದು ಹೇಳಿದರು.
೩. ಇದಕ್ಕೆ ನ್ಯಾಯಾಲಯವು ‘ಯಾವ ರಾಜ್ಯವು ಉದಾಹರಣೆಗೆ ಕಾಶ್ಮೀರ, ಮಿಝೋರಾಮ ಇತ್ಯಾದಿ ರಾಜ್ಯಗಳಲ್ಲಿ ಒಂದು ಧರ್ಮಕ್ಕೆ ಅಲ್ಪಸಂಖ್ಯಾತವೆಂದು ಘೋಷಿಸಲು ನಿರಾಕರಿಸಲಾಗುತ್ತಿದೆಯೇ ?, ಎಂದು ಕೇಳಿದರು.
೪. ಇದನ್ನು ಉತ್ತರಿಸಲು ನ್ಯಾಯವಾದಿಗಳು ಒಂದು ವಾರದ ಸಮಯ ಕೇಳಿದ್ದಾರೆ. ಆದುದರಿಂದ ಈ ವಿಷಯದಲ್ಲಿ ೧ ವಾರದ ನಂತರ ಮುಂದಿನ ಆಲಿಕೆ ನಡೆಯಲಿದೆ.
| ಸಂಪಾದಕೀಯ ನಿಲುವು
* ದೇಶದಲ್ಲಿನ ಕೆಲವು ರಾಜ್ಯಗಳಲ್ಲಿ ಹಿಂದೂಗಳಿಗೆ ಅಲ್ಪಸಂಖ್ಯಾತರ ದರ್ಜೆಯನ್ನು ನೀಡಬೇಕಾಗಿ ಮನವಿ ಮಾಡುವ ಅರ್ಜಿ ! |
ಕಾಶ್ಮೀರದಲ್ಲಿ ಸರಳಾ ಭಟ್ ಹತ್ಯೆ ಪ್ರಕರಣ: 36 ವರ್ಷಗಳ ನಂತರ ಉಗ್ರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ!
ನಿಜಾಮಾಬಾದ್ (ತೆಲಂಗಾಣ): ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಉರ್ದು ಮತ್ತು ಕಲ್ಮಾ ಕಲಿಸುವುದಕ್ಕೆ ವಿರೋಧ
ವಿವಾಹಕ್ಕಾಗಿ ಮುಸ್ಲಿಂ ಯುವತಿಯಿಂದ ಇಸ್ಲಾಂ ಧರ್ಮ ಸ್ವೀಕರಿಸಲು ಒತ್ತಡ; ಹಿಂದು ಯುವಕನ ಆತ್ಮಹತ್ಯೆ!
ಮಣ್ಣಿನಿಂದ ತಯಾರಿಸಿದ ಶ್ರೀಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ! – ಪ್ರಧಾನಿ
Kota Conversion Racket : ಕೋಟಾ (ರಾಜಸ್ಥಾನ): ಹಿಂದೂ ಮಹಿಳೆಯರ ಮತಾಂತರ, ಲೈಂಗಿಕ ಶೋಷಣೆ
ಪ್ರಾರ್ಥನೆ ಅಥವಾ ಮಂತ್ರಗಳನ್ನು ಹೇಳಲು ವಿದ್ಯಾರ್ಥಿಗಳು ಅಥವಾ ಪೋಷಕರ ಒಪ್ಪಿಗೆ ಅತ್ಯಗತ್ಯ! – IRS Nisha Oraon