
ಧಾರ (ಮಧ್ಯ ಪ್ರದೇಶ) : ಇಲ್ಲಿ ಮಹಾರಾಷ್ಟ್ರ ರಾಜ್ಯ ಪರಿವಾಹನ ಮಹಾಮಂಡಳದ ಬಸ್ಸು ಸೇತುವೆಯಿಂದ ನದಿಗೆ ಉರುಳಿದ ಭೀಕರ ಅಪಘಾತದಲ್ಲಿ ೧೩ ಜನರು ಸಾವನ್ನಪ್ಪಿದ್ದಾರೆ. ಈ ಸಮಯದಲ್ಲಿ ೧೫ ಜನರನ್ನು ಉಳಿಸುವ ಪ್ರಯತ್ನದಲ್ಲಿ ಯಶಸ್ಸು ಸಿಕ್ಕಿದೆ. ಸರಕಾರದಿಂದ ಮೃತಪಟ್ಟವರನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯನ್ನು ವ್ಯಕ್ತಪಡಿಸಲಾಗಿದೆ. ಈ ಬಸ್ಸಿನಲ್ಲಿ ೫೦ ರಿಂದ ೬೦ ಜನರು ಇದ್ದರು ಎಂದು ಹೇಳಲಾಗುತ್ತಿದೆ. ತಾಂತ್ರಿಕ ತೊಂದರೆಯಿಂದ ಈ ಬಸ್ಸು ಸೇತುವೆ ಸುರಕ್ಷಾ ಬೇಲಿಗೆ ಗುದ್ದಿ ನರ್ಮದಾ ನದಿಗೆ ಉರುಳಿದೆ.
Bus falls into Narmada river in Madhya Pradesh, 13 dead. @delayedjab joins us for more on this. #ITVideo #NarmadaRiver #MadhyaPradesh | @nabilajamal_ pic.twitter.com/1JIwBnLjRM
— IndiaToday (@IndiaToday) July 18, 2022
ಅಪಘಾತಕ್ಕೀಡಾದ ಬಸ್ಸು ಬೆಳಗ್ಗೆ ೭.೩೦ ಕ್ಕೆ ಧಾರನಿಂದ ಮಹಾರಾಷ್ಟ್ರದ ಜಳಗಾವ ಜಿಲ್ಲೆಯ ಅಮ್ಮಳನೇರ ಕಡೆಗೆ ಹೊರಟಿತ್ತು. ಅಪಘಾತದ ಮಾಹಿತಿ ಪಡೆಯುವದಕ್ಕಾಗಿ ಎಸ್. ಟಿ ಮಹಾಮಂಡಳವು ೦೨೨.೨೩೦೨೩೯೪೦ ಈ ಹೆಲ್ಪ್ಲೈನ್ ಕ್ರಮಾಂಕ ನೀಡಿದೆ.
ಅಪಘಾತದ ಬಗ್ಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ ಇವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕಾಶ್ಮೀರದಲ್ಲಿ ಸರಳಾ ಭಟ್ ಹತ್ಯೆ ಪ್ರಕರಣ: 36 ವರ್ಷಗಳ ನಂತರ ಉಗ್ರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ!
ನಿಜಾಮಾಬಾದ್ (ತೆಲಂಗಾಣ): ಶಾಲೆಯಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಉರ್ದು ಮತ್ತು ಕಲ್ಮಾ ಕಲಿಸುವುದಕ್ಕೆ ವಿರೋಧ
ವಿವಾಹಕ್ಕಾಗಿ ಮುಸ್ಲಿಂ ಯುವತಿಯಿಂದ ಇಸ್ಲಾಂ ಧರ್ಮ ಸ್ವೀಕರಿಸಲು ಒತ್ತಡ; ಹಿಂದು ಯುವಕನ ಆತ್ಮಹತ್ಯೆ!
ಮಣ್ಣಿನಿಂದ ತಯಾರಿಸಿದ ಶ್ರೀಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ! – ಪ್ರಧಾನಿ
Kota Conversion Racket : ಕೋಟಾ (ರಾಜಸ್ಥಾನ): ಹಿಂದೂ ಮಹಿಳೆಯರ ಮತಾಂತರ, ಲೈಂಗಿಕ ಶೋಷಣೆ
ಪ್ರಾರ್ಥನೆ ಅಥವಾ ಮಂತ್ರಗಳನ್ನು ಹೇಳಲು ವಿದ್ಯಾರ್ಥಿಗಳು ಅಥವಾ ಪೋಷಕರ ಒಪ್ಪಿಗೆ ಅತ್ಯಗತ್ಯ! – IRS Nisha Oraon