ಭಾಗ್ಯನಗರದಲ್ಲಿ ಕ್ರಮ!

ಭಾಗ್ಯನಗರ (ತೆಲಂಗಾಣಾ) – ಅಜ್ಮೀರ್ನ ಖ್ವಾಜಾ ಮೊಯಿನುದ್ದೀನ್ ಚಿಶ್ತಿ ದರ್ಗಾದ ಖಾದಿಮ್ (ಸೇವಕ) ಗೌಹರ್ ಚಿಶ್ತಿಯನ್ನು ಭಾಗ್ಯನಗರದಿಂದ ಬಂಧಿಸಲಾಗಿದೆ. ಭಾಜಪದ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿ ಮುಹಮ್ಮದ್ ಬಗ್ಗೆ ನೀಡಿದ ತಥಾಕಥಿತ ಆಕ್ಷೇಪಾರ್ಹ ಹೇಳಿಕೆಗೆ ಸಂಬಂಧಿಸಿದಂತೆ ಚಿಶ್ತಿಯು ಶರ್ಮಾ ಅವರ ಶಿರಚ್ಛೇದ ಮಾಡುವಂತೆ ಮುಸ್ಲಿಮರನ್ನು ಪ್ರಚೋದಿಸಿದ್ದ. ಅದೇ ರೀತಿ ಉದಯಪುರದಲ್ಲಿ ಕನ್ಹೈಯ್ಯಾಲಾಲ್ನನ್ನು ಕೊಂದವರಿಗೂ ಆತನಿಗೂ ಸಂಬಂಧವಿದೆ ಎಂಬ ಅಂಶವೂ ಬೆಳಕಿಗೆ ಬಂದಿದೆ. ಚಿಶ್ತಿಯನ್ನು ಅಜ್ಮೀರ್ಗೆ ಕರೆದೊಯ್ಯಲಾಗುವುದು.
ಚಿಶ್ತಿ ಪ್ರಚೋದನೆ ನೀಡಿದ ಪ್ರಕರಣ ಬೆಳಕಿಗೆ ಬಂದಾಗ, ಚಿಶ್ತಿ ತನ್ನ ಕುಟುಂಬದೊಂದಿಗೆ ತಲೆಮರೆಸಿಕೊಂಡಿದ್ದ. ಜೂನ್ ೧೭ ರಂದು ಚಿಸ್ತಿ ಉದಯಪುರಕ್ಕೆ ಹೋಗಿದ್ದನು. ಅಲ್ಲಿ ಆತ ‘ಸರ್ ತಾನ್ ಸೆ ಜುದಾ’ (ದೇಹದಿಂದ ತಲೆಯನ್ನು ಬೇರ್ಪಡಿಸಿ) ಎಂಬ ಘೋಷಣೆಗಳನ್ನು ನೀಡಿದ್ದ. ಆ ಸಮಯದಲ್ಲಿ ಅವನು ಕನ್ಹೈಯಾಲಾಲನ ಹಂತಕರಲ್ಲಿ ಒಬ್ಬನಾದ ಮುಹಮ್ಮದ್ ರಿಯಾಜ್ನನ್ನು ಭೇಟಿಯಾಗಿದ್ದ. ಅದೇ ದಿನ ರಿಯಾಜ್ ಶಿರಚ್ಛೇದದ ಬಗ್ಗೆ ವೀಡಿಯೋ ಮಾಡಿ ಹೇಳಿಕೆ ನೀಡಿದ್ದನು.
ಗೌಹರ್ ಚಿಶ್ತಿ ಹೇಳಿದ್ದೇನು ?ಗೌಹರ್ ಚಿಶ್ತಿಯ ವೀಡಿಯೋವನ್ನು ವ್ಯಾಪಕವಾಗಿ ಪ್ರಸಾರ ಮಾಡಲಾಗಿದ್ದು, ಅದರಲ್ಲಿ ಆತ, ‘ಪ್ರವಾದಿ ವಿರುದ್ಧದ ಹೇಳಿಕೆಯನ್ನು ಎಂದಿಗೂ ಸಹಿಸುವುದಿಲ್ಲ. ‘ಗುಸ್ತಖ್ ಇ ರಸೂಲ್ ಕಿ ಏಕ್ ಹಿ ಸಜಾ, ಸರ್ ತನ್ ಸೆ ಜುದಾ, ಸರ್ ತಾನ್ ಸೆ ಜುದಾ.’(ಪ್ರವಾದಿಯ ಅವಮಾನ ಮಾಡುವವರ ಶಿರಚ್ಛೇದ ಏಕೈಕ ಶಿಕ್ಷೆಯಾಗಿದೆ!) ಪ್ರವಾದಿಗೆ ಗೌರವ ಸಿಗಬೇಕು, ಅದಕ್ಕಾಗಿ ನಾವು ಶಿರಚ್ಛೇದವನ್ನೂ ಮಾಡಲು ಸಿದ್ಧರಿದ್ದೇವೆ. ನೂಪುರ್ ಶರ್ಮಾ ತಪ್ಪು ಮಾಡಿದ್ದಾಳೆ, ಆಕೆಗೆ ಬದುಕುವ ಹಕ್ಕಿಲ್ಲ !’ ಎಂದು ಹೇಳಿದ್ದರಿಂದ ಅಜ್ಮೀರ್ ಪೊಲೀಸರು ಗೌಹರ್ ಚಿಶ್ತಿ ವಿರುದ್ಧ ಜೂನ್ ೨೫ ರಂದು ಪ್ರಕರಣ ದಾಖಲಿಸಿದ್ದರು. |
‘ಜೀವೋತ್ತಮ ವಿದ್ಯಾಪೀಠಂ’ ಸನಾತನ ಧರ್ಮದ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ! – ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ ದೂರು ದಾಖಲು : ಇಬ್ಬರ ಬಂಧನ
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein