ಸ್ಥಳೀಯ ಹಿಂದುಗಳಿಗೆ ನೌಕರಿಯಲ್ಲಿ ೫೦% ಮೀಸಲಾತಿ ನೀಡಲಿಲ್ಲವೆಂದರೆ ಕಂಪನಿ ಮುಚ್ಚಿ ಬಿಡುವೆವು.

ಮಾನೇಸರದ ಹಮ್‌ದರ್ದ ಕಂಪನಿಗೆ ಮಹಾಪಂಚಾಯತಿಯ ಎಚ್ಚರಿಕೆ

ಮಾನೆಸರ (ಹರಿಯಾಣ) : ಇಲ್ಲಿಯ ಪ್ರಸಿದ್ಧ ಔಷಧಿ ನಿರ್ಮಿಸುವ ಹಮ್‌ದರ್ದ ಕಂಪನಿಯಲ್ಲಿ ಸ್ಥಳೀಯ ಹಿಂದೂಗಳಿಗೆ ೫೦% ಮೀಸಲಾತಿ ನೀಡುವ ಮನವಿ ಇಲ್ಲಿ ನಡೆದಿರುವ ಮಹಾಪಂಚಾಯತಿಯಲ್ಲಿ ಮಾಡಲಾಯಿತು. ಏನಾದರೂ ಈ ಮನವಿಯನ್ನು ತಳ್ಳಿಹಾಕಿದರೆ ಆಗ ಕಂಪನಿ ಮುಚ್ಚಲಾಗುವುದು, ಎಂಬ ಎಚ್ಚರಿಕೆ ಮಹಾಪಂಚಾಯತಿಯಿಂದ ನೀಡಲಾಗಿದೆ. ಈ ಮಹಾಪಂಚಾಯಾತಿಯಲ್ಲಿ ಹಮ್‌ದರ್ದ ಕಂಪನಿ ಹಿಂದೂಗಳ ಜೊತೆ ತಾರತಮ್ಯ ಮಾಡುತ್ತಿದೆ, ಎಂದು ಆರೋಪಿಸಲಾಯಿತು. ಮಹಾಪಂಚಾಯತಿಯ ನಂತರ ಗ್ರಾಮಸ್ಥರು ಮತ್ತು ಕೆಲವು ಹಿಂದೂ ಸಂಘಟನೆಯವರು ಸ್ಥಳೀಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಹಮ್‌ದರ್ದ ಕಂಪನಿಯ ಅಧಿಕಾರಿ ಶೈಲೇಶ್ ತಿವಾರಿ ಇವರು ಗ್ರಾಮಸ್ಥರ ಆರೋಪ ತಿರಸ್ಕರಿಸಿ ‘ಇದು ಪ್ರಸಿದ್ಧಿಗಾಗಿ ಮಾಡಿರುವ ಪ್ರಯತ್ನ’ ಎಂದು ಪ್ರತ್ಯಾರೋಪ ಮಾಡಿದರು. ಈ ಮೊದಲು ರಾಜ್ಯ ಸರಕಾರ ಕಂಪನಿಯಲ್ಲಿ ರಾಜ್ಯದ ನಾಗರಿಕರಿಗೆ ೭೫% ಮೇಸಲಾತಿ ನೀಡುವುದಾಗಿ ಘೋಷಿಸಿತ್ತು.

ಮಾನೆಸರದ ಮಾಜಿ ಸರಪಂಚ ರಾಮ ಅವತಾರ ಇವರ ಪ್ರಕಾರ, ಹಮ್‌ದರ್ದ ಕಂಪನಿಯ ಕಾರಖಾನೆ ಸ್ಥಳೀಯ ರೈತರ ಭೂಮಿಯ ಮೇಲೆ ಕಟ್ಟಲಾಗಿದೆ. ಈ ಕಂಪನಿಗೆ ನ್ಯಾಸದ ಹೆಸರಿನ ಮೇಲೆ ಅನೇಕ ರೀತಿಯ ಸವಲತ್ತುಗಳು ಸಿಗುತ್ತವೆ, ಹೀಗಿರುವಾಗ ಈ ಕಂಪನಿಯಲ್ಲಿ ಸ್ಥಳೀಯ ಹಿಂದೂಗಳಿಗೆ ಇಲ್ಲಿಯವರೆಗೆ ನೌಕರಿ ನೀಡಲಾಗಿಲ್ಲ. ಈ ಕಂಪನಿಯಲ್ಲಿ ಇಲ್ಲಿಯವರೆಗೆ ಎಷ್ಟು ಸ್ಥಳೀಯ ಹಿಂದೂಗಳಿಗೆ ನೌಕರಿ ನೀಡಿದ್ದಾರೆ? ಇದರ ಬಗ್ಗೆ ಸರಕಾರ ವಿಚಾರಣೆ ನಡೆಸಬೇಕು ಎಂದು ಹೇಳಿದರು.