ಮಾನೇಸರದ ಹಮ್ದರ್ದ ಕಂಪನಿಗೆ ಮಹಾಪಂಚಾಯತಿಯ ಎಚ್ಚರಿಕೆ

ಮಾನೆಸರ (ಹರಿಯಾಣ) : ಇಲ್ಲಿಯ ಪ್ರಸಿದ್ಧ ಔಷಧಿ ನಿರ್ಮಿಸುವ ಹಮ್ದರ್ದ ಕಂಪನಿಯಲ್ಲಿ ಸ್ಥಳೀಯ ಹಿಂದೂಗಳಿಗೆ ೫೦% ಮೀಸಲಾತಿ ನೀಡುವ ಮನವಿ ಇಲ್ಲಿ ನಡೆದಿರುವ ಮಹಾಪಂಚಾಯತಿಯಲ್ಲಿ ಮಾಡಲಾಯಿತು. ಏನಾದರೂ ಈ ಮನವಿಯನ್ನು ತಳ್ಳಿಹಾಕಿದರೆ ಆಗ ಕಂಪನಿ ಮುಚ್ಚಲಾಗುವುದು, ಎಂಬ ಎಚ್ಚರಿಕೆ ಮಹಾಪಂಚಾಯತಿಯಿಂದ ನೀಡಲಾಗಿದೆ. ಈ ಮಹಾಪಂಚಾಯಾತಿಯಲ್ಲಿ ಹಮ್ದರ್ದ ಕಂಪನಿ ಹಿಂದೂಗಳ ಜೊತೆ ತಾರತಮ್ಯ ಮಾಡುತ್ತಿದೆ, ಎಂದು ಆರೋಪಿಸಲಾಯಿತು. ಮಹಾಪಂಚಾಯತಿಯ ನಂತರ ಗ್ರಾಮಸ್ಥರು ಮತ್ತು ಕೆಲವು ಹಿಂದೂ ಸಂಘಟನೆಯವರು ಸ್ಥಳೀಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
‘Hamdard does not employ Hindus’: Mahapanchayat in Haryana demands 50% reservation for local Hindus in jobs in the companyhttps://t.co/ohcZ5R1sPB
— OpIndia.com (@OpIndia_com) July 9, 2022
ಹಮ್ದರ್ದ ಕಂಪನಿಯ ಅಧಿಕಾರಿ ಶೈಲೇಶ್ ತಿವಾರಿ ಇವರು ಗ್ರಾಮಸ್ಥರ ಆರೋಪ ತಿರಸ್ಕರಿಸಿ ‘ಇದು ಪ್ರಸಿದ್ಧಿಗಾಗಿ ಮಾಡಿರುವ ಪ್ರಯತ್ನ’ ಎಂದು ಪ್ರತ್ಯಾರೋಪ ಮಾಡಿದರು. ಈ ಮೊದಲು ರಾಜ್ಯ ಸರಕಾರ ಕಂಪನಿಯಲ್ಲಿ ರಾಜ್ಯದ ನಾಗರಿಕರಿಗೆ ೭೫% ಮೇಸಲಾತಿ ನೀಡುವುದಾಗಿ ಘೋಷಿಸಿತ್ತು.
ಮಾನೆಸರದ ಮಾಜಿ ಸರಪಂಚ ರಾಮ ಅವತಾರ ಇವರ ಪ್ರಕಾರ, ಹಮ್ದರ್ದ ಕಂಪನಿಯ ಕಾರಖಾನೆ ಸ್ಥಳೀಯ ರೈತರ ಭೂಮಿಯ ಮೇಲೆ ಕಟ್ಟಲಾಗಿದೆ. ಈ ಕಂಪನಿಗೆ ನ್ಯಾಸದ ಹೆಸರಿನ ಮೇಲೆ ಅನೇಕ ರೀತಿಯ ಸವಲತ್ತುಗಳು ಸಿಗುತ್ತವೆ, ಹೀಗಿರುವಾಗ ಈ ಕಂಪನಿಯಲ್ಲಿ ಸ್ಥಳೀಯ ಹಿಂದೂಗಳಿಗೆ ಇಲ್ಲಿಯವರೆಗೆ ನೌಕರಿ ನೀಡಲಾಗಿಲ್ಲ. ಈ ಕಂಪನಿಯಲ್ಲಿ ಇಲ್ಲಿಯವರೆಗೆ ಎಷ್ಟು ಸ್ಥಳೀಯ ಹಿಂದೂಗಳಿಗೆ ನೌಕರಿ ನೀಡಿದ್ದಾರೆ? ಇದರ ಬಗ್ಗೆ ಸರಕಾರ ವಿಚಾರಣೆ ನಡೆಸಬೇಕು ಎಂದು ಹೇಳಿದರು.
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ