ಆಪರೇಷನ ಬ್ಲೂ ಸ್ಟಾರಗೆ ೩೮ ವರ್ಷಗಳು ಪೂರ್ಣ!

ಅಮೃತಸರ (ಪಂಜಾಬ) – ಭಾರತೀಯ ಸೇನೆಯು ೧೯೮೪ ರಲ್ಲಿ ಸುವರ್ಣ ಮಂದಿರದಲ್ಲಿ ಖಾಲಿಸ್ತಾನಿ ಭಯೋತ್ಪಾದಕರ ವಿರುದ್ಧ ` ಆಪರೇಷನ ಬ್ಲೂ ಸ್ಟಾರ’ ಅನ್ನು ಪ್ರಾರಂಭಿಸಿತ್ತು. ಅದಕ್ಕೆ ಜೂನ ೬ ರಂದು ೩೮ ವರ್ಷಗಳು ಪೂರ್ಣಗೊಂಡವು. ಆದ್ದರಿಂದ ಜೂನ ೬, ೨೦೨೨ ರಂದು, ಮಂದಿರದ ಪ್ರವೇಶದ್ವಾರದಲ್ಲಿ ಖಾಲಿಸ್ತಾನ ಬೆಂಬಲಿಗರು ಪೊಲೀಸರ ಸಮ್ಮುಖದಲ್ಲಿ ಘೋಷಣೆಗಳನ್ನು ಕೂಗಿದರು. ಕೈಯಲ್ಲಿ ಖಡ್ಗ ಹಿಡಿದು `ಖಾಲಿಸ್ತಾನ ಜಿಂದಾಬಾದ’ ಘೋಷಣೆ ಮಾಡಿದರು. ಇದರೊಂದಿಗೆ ಅಂದಿನ ಖಾಲಿಸ್ತಾನ ನಾಯಕ ಮತ್ತು ಭಯೋತ್ಪಾದಕ ಜರ್ನೈಲ್ ಭಿಂದ್ರನವಾಲೆಯ ಛಾಯಾಚಿತ್ರವುಳ್ಳ ಭಿತ್ತಿಪತ್ರಗಳು ಪ್ರದರ್ಶಿಸಲಾಯಿತು. ಈ ಸಮಯದಲ್ಲಿ ಜನರು ಸುವರ್ಣ ಮಂದಿರ ಪ್ರವೇಶಿಸಲು ಪ್ರಯತ್ನಿಸಿದರು; ಆದರೆ ಅವರನ್ನು ಪ್ರವೇಶದ್ವಾರದಲ್ಲಿಯೇ ನಿಲ್ಲಿಸಲಾಯಿತು. ಆಪರೇಷನ ಬ್ಲೂ ಸ್ಟಾರನಲ್ಲಿ ೮೩ ಸೈನಿಕರು ಜೀವ ಕಳೆದುಕೊಂಡರೆ ಮತ್ತು ೪೯೨ ಜನರ ಸಾವು ಸಂಭಿವಿಸಿತು.
Pro-Khalistan slogans raised at Golden temple; Bhindranwale posters displayed on Op Blue Star anniversary
Watch for details pic.twitter.com/ak8sVoJkYk
— Hindustan Times (@htTweets) June 6, 2022
ಸಂಪಾದಕೀಯ ನಿಲುವುಇಂತಹ ದೇಶದ್ರೋಹಿ ಖಾಲಿಸ್ತಾನ ಬೆಂಬಲಿಗರನ್ನು ಹಿಡಿದು ಜೀವಾವಧಿ ಶಿಕ್ಷೆಗೆ ಗುರಿಪಡಿಸಬೇಕು, ಆಗ ಮಾತ್ರ ಇನ್ನಿತರರು ಈ ರೀತಿ ಮಾಡುವ ಮುಂಚೆ ಸ್ವಲ್ಪ ಯೋಚಿಸುತ್ತಾರೆ! |
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!