
ಡೆಹರಾಡೂನ (ಉತ್ತರಾಖಂಡ) – ಮೇ ೩ ರಿಂದ ಚಾರಧಾಮ ಯಾತ್ರೆಯು ಆರಂಭವಾದ ನಂತರ ಇಲ್ಲಿಯ ವರೆಗೆ ೮ ಲಕ್ಷ ಜನರು ಈ ಯಾತ್ರೆಯನ್ನು ಪೂರ್ಣಗೊಳಿಸಿದ್ದಾರೆ. ಕೊರೊನಾದಿಂದಾಗಿ ೨ ವರ್ಷಗಳ ಕಾಲ ಈ ಯಾತ್ರೆಯು ನಿಂತಿತ್ತು. ಅನಂತರ ಆರಂಭವಾದ ಈ ಯಾತ್ರೆಯ ದಾರಿಯಲ್ಲಿ ಸದ್ಯ ಎಲ್ಲೆಡೆ ಪ್ಲಾಸ್ಟೀಕಿನ ಚೀಲಗಳು, ಬಾಟಲಿಗಳೊಂದಿಗೆ ಕಸದ ರಾಶಿ ಕಂಡುಬರುತ್ತಿದೆ, ಇದು ಪರಿಸರಕ್ಕೆ ಅತ್ಯಂತ ಅಪಾಯಕಾರಿಯಾಗಿದೆ. ಈ ಬಗ್ಗೆ ಪರಿಸರ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಇದರ ಛಾಯಾಚಿತ್ರಗಳು ಸಾಮಾಜಿಕ ಮಾಧ್ಯಮಗಳಿಂದ ಪ್ರಸಾರಿತವಾಗುತ್ತಿವೆ.
‘Garbage has piled up…’: Experts worry over pollution on Char Dham Yatra route https://t.co/aQ2f7ilAIa
— Hindustan Times (@HindustanTimes) May 22, 2022
೧. `ಗಢವಾಲ ಸೆಂಟ್ರಲ್ ಯುನಿವರ್ಸಿಟಿ’ಯ ಭೂಗೋಳ ವಿಭಾಗದ ಪ್ರಮುಖ ಪ್ರಾ. ಎಮ್. ಎಸ್. ನೇಗೀಯವರು ಮಾತನಾಡುತ್ತ, ಕೇದಾರನಾಥದಂತಹ ಸಂವೇದನಾಶೀಲ ಪ್ರದೇಶಗಳಲ್ಲಿ ಸಂಗ್ರಹವಾಗುತ್ತಿರುವ ಕಸವು ಅಪಾಯಕಾರಿಯಾಗಿದೆ. ಇದರೊಂದ ಟೊಳ್ಳು ನಿರ್ಮಾಣವಾಗಿ ಭೂಕುಸಿತವಾಗಬಹುದು. ೨೦೧೩ರ ದುಃಖದಾಯಕ ಘಟನೆಗಳನ್ನು ನಾವೆಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು. (೨೦೧೩ರಲ್ಲಿ ಕೇದಾರನಾಥದಲ್ಲಿ ಪ್ರವಾಹ ಬಂದಿತ್ತು.)
೨. ಉತ್ತರಾಖಂಡದಲ್ಲಿನ `ಹಾಯ್ ಆಲ್ಟಿಟ್ಯೂಡ್ ಪ್ಲಾಂಟ ಫಿಜಿಯಾಲಾಜಿ ರಿಸರ್ಚ ಸೆಂಟರ್’ನ ಸಂಚಾಲಕರಾದ ಪ್ರಾ. ಎಮ್. ಸಿ ನೌಟಿಯಾಲರವರು ಮಾತನಾಡುತ್ತ ಪ್ರವಾಸಿಗರ ಸಂಖ್ಯೆಯು ಅನೇಕ ಪಟ್ಟು ಹೆಚ್ಚಾಗಿದೆ, ಇದರಿಂದಾಗಿ ಪ್ಲಾಸ್ಟೀಕಿನ ಕಸವೂ ಹೆಚ್ಚಿದೆ. ಇದರ ಪರಿಣಾಮವು ನೈಸರ್ಗಿಕ ವನಸ್ಪತಿಗಳ ಮೇಲೂ ಆಗಿದೆ, ಎಂದು ಹೇಳಿದ್ದಾರೆ.
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ: ಅಂತಿಮವಾಗಿ ದೂರು ದಾಖಲು
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein
ದೇವತೆ, ಭಾರತಮಾತೆ ಮತ್ತು ರಾಜಕೀಯ ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಸಾಧ್ಯವಿಲ್ಲ !