
ನವದೆಹಲಿ – ಕೇಂದ್ರ ಸರಕಾರ ಜಾರಿ ಮಾಡಿರುವ ನಿರ್ಣಯದ ಪ್ರಕಾರ ಅಮರನಾಥ ಯಾತ್ರೆಗಾಗಿ ಹೋಗುವ ಎಲ್ಲಾ ಯಾತ್ರೆಗಳಿಗೆ ಪ್ರತಿಯೊಬ್ಬರಿಗೆ ೫ ಲಕ್ಷ ರೂಪಾಯಿಯ ‘ವಿಮಾ ಕವಚ’ ನೀಡುವ ನಿರ್ಣಯ ತೆಗೆದುಕೊಳ್ಳಲಾಗಿದೆ. ಹಾಗೂ ಪ್ರತಿ ಯಾತ್ರಿಕನಿಗೆ ‘ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್’ ಎಂದರೆ ‘ಆರ್.ಎಫ್.ಐ.ಡಿ.’ ಟ್ಯಾಗ್ ನೀಡಲಾಗುವುದು. ಜಮ್ಮು-ಕಾಶ್ಮೀರದ ಮುಖ್ಯ ಸಚಿವರು ನೀಡಿರುವ ಮಾಹಿತಿಯ ಪ್ರಕಾರ ಈ ಸಾರಿ ಮೊಟ್ಟಮೊದಲು ಯಾತ್ರಿಕರಿಗೆ ಈ ಟ್ಯಾಗ್ ನೀಡಲಾಗುವುದು. ಇದರ ಜೊತೆಗೆ ಟೆಂಟ್, ‘ವೈಫೈ ಹಾಟ್ಸ್ಪಾಟ್’, ಸಾಕಷ್ಟು ಬೆಳಕಿನ ವ್ಯವಸ್ಥೆ ಈ ರೀತಿಯ ಅವಶ್ಯಕ ಸೌಲಭ್ಯಗಳು ಯಾತ್ರಿಕರಿಗೆ ಸಂಪೂರ್ಣ ಮಾರ್ಗದಲ್ಲಿ ಮಾಡಿಕೊಡಲಾಗುವುದು.
Amid the heightened security threat to the Amarnath Yatra this year, the government has decided to insure every pilgrim for Rs 5 lakh and give all of them unique Radio Frequency Identification (RFID) tags—earlier given to vehicles only.https://t.co/fZaV4EoO5L
— The Indian Express (@IndianExpress) May 17, 2022
೧. ಅಮರನಾಥ ಯಾತ್ರೆಯಲ್ಲಿ ಜಿಹಾದಿ ಭಯೋತ್ಪಾದಕರ ಕಾರ್ಯಾಚರಣೆ ಆಗಬಾರದೆಂದು, ಕೇಂದ್ರ ಸರಕಾರ ಸುರಕ್ಷೆಯ ದೃಷ್ಟಿಯಿಂದ ಅವಶ್ಯಕವಾದ ಎಲ್ಲಾ ರೀತಿಯ ಕಾಳಜಿ ವಹಿಸುತ್ತಿರುವುದು ಸ್ಪಷ್ಟಪಡಿಸಿದೆ.
೨. ಕೊರೋನಾದ ಮಹಾಮಾರಿಯ ೨ ವರ್ಷಗಳ ನಂತರ ಅಮರನಾಥ ಯಾತ್ರೆಗೆ ಅನುಮತಿ ಸಿಕ್ಕಿರುವುದರಿಂದ ಈ ಸಮಯದಲ್ಲಿ ಸುರಕ್ಷೆಯ ಜೊತೆಗೆ ಇದರ ಎಲ್ಲಾ ವ್ಯವಸ್ಥೆಯ ಮೇಲೆ ನಿಗಾವಹಿಸಲಾಗಿದೆ.
೩. ಈ ಮೊದಲು ಆಗಸ್ಟ್ ೫, ೨೦೧೯ ರಂದು ಅಮರನಾಥ ಯಾತ್ರೆ ನಡೆದಿತ್ತು. ಅದರ ನಂತರ ಈಗ ಎರಡು ವರ್ಷಗಳ ನಂತರ ಅಂದರೆ ಜೂನ್ ೩೦, ೨೦೨೨ ರಿಂದ ಯಾತ್ರೆಗೆ ಆರಂಭವಾಗುವುದು.
‘ಆರ್.ಎಫ್.ಐ.ಡಿ.’ ಟ್ಯಾಗ್ ಅಂದರೆ ಏನು ?
‘ರೇಡಿಯೋ ಫ್ರಿಕ್ವೆನ್ಸಿ ಐಡೆಂಟಿಫಿಕೇಶನ್’ ಎಂದರೆ ‘ಆರ್.ಎಫ್.ಐ.ಡಿ.’ ಟ್ಯಾಗ್ ಈ ತಂತ್ರಜ್ಞಾನ ‘ರೇಡಿಯೋ ಫ್ರೀಕ್ವೆನ್ಸಿ’ಯ ಮೇಲೆ ಆಧಾರಿತವಾಗಿದ್ದು ಇದು ಯಾವುದಾದರೂ ವಸ್ತು ಅಥವಾ ವ್ಯಕ್ತಿಯನ್ನು ಹುಡುಕಲು, ಗುರುತಿಸಲು ಅಥವಾ ಸಂಪರ್ಕಿಸಲು ಉಪಯೋಗಿಸಲಾಗುತ್ತದೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ