
ನವದೆಹಲಿ – ದೆಹಲಿಯ ೪೦ ಹಳ್ಳಿಗಳ ಹೆಸರು ಇಸ್ಲಾಮಿ ಆಗಿದೆ. ಅವನ್ನು ಬದಲಾಯಿಸಲು ದೆಹಲಿಯ ಆಮ್ ಆದ್ಮಿ ಪಕ್ಷದ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂಬ ಮಾಹಿತಿ ದೆಹಲಿಯ ಭಾಜಪದ ಪ್ರದೇಶಾಧ್ಯಕ್ಷ ಆದೇಶ ಗುಪ್ತಾ ಅವರು ನೀಡಿದರು. ಅವರು ಅಲ್ಲಿಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ದೆಹಲಿಯ ಈ ೪೦ ಹಳ್ಳಿಗಳ ಹೆಸರುಗಳಲ್ಲಿ ಹುಮಾಯೂಪುರ, ಯುಸಫ್ ಸರಾಯ್, ಮಸುದಪುರ, ಜಮರುದಾಪುರ, ಬೇಗುಂಪುರ ಸೈದುಲ ಅಜಾಬ, ಫತೆಹಪುರ ಬೇರಿ, ಹೌಜ ಖಾಸ, ಶೇಖ ಶರಾಯ ಮುಂತಾದ ಹೆಸರು ಒಳಗೊಂಡಿವೆ.
Delhi BJP chief wants Muslim names of 40 villages changed https://t.co/MhksPsQhjl
— TOI Cities (@TOICitiesNews) April 23, 2022
೧. ಗುಪ್ತಾ ಮಾತು ಮುಂದುವರೆಸುತ್ತಾ, ಯಾರೂ ಗುಲಾಮಗಿರಿಯ ಮಾನಸಿಕತೆಯಲ್ಲಿ ಇರಲು ಇಚ್ಛಿಸುವುದಿಲ್ಲ. ಈ ಹೆಸರುಗಳು ಅದನ್ನೇ ನೆನಪಿಸುತ್ತದೆ. ನನಗೆ ಅನೇಕ ಗ್ರಾಮಸ್ಥರು ಹೆಸರನ್ನು ಬದಲಾಯಿಸುವ ಮನವಿಯನ್ನು ನೀಡಿದ್ದಾರೆ. ಭಾಜಪ ಅಧಿಕಾರವಿರುವ ದಕ್ಷಿಣ ದೆಹಲಿ ಮಹಾನಗರಪಾಲಿಕೆಯಲ್ಲಿ ಮಹಮ್ಮದಪುರ ಹಳ್ಳಿಯ ಹೆಸರನ್ನು ಬದಲಾಯಿಸಿ ಮಾಧವಪುರ ಇಡುವ ಪ್ರಸ್ತಾಪ ಸಮ್ಮತಿಸಿ ಸರಕಾರಕ್ಕೆ ಕಳುಹಿಸಲಾಗಿದೆ.
೨. ಈ ವಿಷಯವಾಗಿ ಆಮ್ ಆದ್ಮಿ ಪಕ್ಷ ಹೇಳಿದೇನೆಂದರೆ, ದೆಹಲಿಯ ಪ್ರಕರಣದ ಸಂಬಂಧಿತ ರಾಜ್ಯ ನಾಮಕರಣ ಪ್ರಾಧಿಕರಣ ಇದೆ. ಏನಾದರೂ ಹೆಸರು ಬದಲಾಯಿಸುವ ಪ್ರಸ್ತಾವನೆ ಸಿಕ್ಕಿದ್ದರೆ ಆಗ ಈ ಪ್ರಾಧಿಕಾರ ಕಾನೂನಿನ ಪ್ರಕಾರ ಸಮೀಕ್ಷೆ ನಡೆಸಿ ಕ್ರಮ ಕೈಗೊಳ್ಳುವುದು.
ಸಂಪಾದಕರ ನಿಲುವುಕೇವಲ ದೆಹಲಿಯಲ್ಲಿ ಅಷ್ಟೇ ಅಲ್ಲದೆ, ಸಂಪೂರ್ಣ ದೇಶಾದ್ಯಂತ ಗುಲಾಮಗಿರಿಯ ಕುರುಹು ಇರುವ ಇಸ್ಲಾಮಿ ಹೆಸರುಗಳನ್ನು ಬದಲಾಯಿಸುವುದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಪ್ರಯತ್ನಿಸಬೇಕು. |
ವಾರಾಣಸಿ: ಇನ್ನುಮುಂದೆ ಮೀನು-ಮಾಂಸ ಮಾರಾಟವಿಲ್ಲ!
ಒಡಿಶಾ: ಇಂಜಿನಿಯರ್ನಿಂದ ಕೋಟ್ಯಂತರ ರೂಪಾಯಿಗಳ ಅಕ್ರಮ ಆಸ್ತಿ ವಶ
ಗೃಹಬಳಕೆ ಸಿಲಿಂಡರ್ ಬೆಲೆ ೨೯ ರೂಪಾಯಿ ಹೆಚ್ಚಳ
ಹಕೀಂಪುರ (ಬಂಗಾಳ): ತಾಯ್ನಾಡಿಗೆ ಮರಳಲು ಪ್ರತಿದಿನ ಗಡಿ ಭಾಗಕ್ಕೆ ಬರುತ್ತಿರುವ 200-300 ಬಾಂಗ್ಲಾದೇಶಿಗರು !
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!