ಜಾತ್ಯತೀತರ ಮೇಲೆ ನಿರ್ದೇಶಕ ವಿವೇಕ ಅಗ್ನಿಹೋತ್ರಿಯವರಿಂದ ತೀಕ್ಷ್ಣ ಟೀಕೆ

ಮುಂಬಯಿ – ಯಾರಿಗೆ ‘ದ ಕಶ್ಮೀರ ಫೈಲ್ಸ’ ಚಲನಚಿತ್ರ ಕಾಶ್ಮೀರದ ಭೂತಕಾಲವಾಗಿತ್ತು’, ಎಂದು ಅನಿಸುತ್ತಿದೆಯೋ, ಅದು ಅವರ ತಪ್ಪು. ಅದು ಕೇವಲ ಭಾರತದ ಭವಿಷ್ಯದ ‘ಸಂಕ್ಷಿಪ್ತ ಭಾಗ’ (ಟ್ರೇಲರ)ವಾಗಿದೆ. ಹನುಮಾನ ಜಯಂತಿಯ ಮೆರವಣಿಗೆಯ ಪುರಾವೆಯನ್ನು ನೋಡಿ, ಎಂದು ಟ್ವಿಟ ಮಾಡಿ ‘ದ ಕಶ್ಮೀರ ಪೈಲ್ಸ’ ಚಲನಚಿತ್ರದ ನಿರ್ದೇಶಕರಾದ ವಿವೇಕ ಅಗ್ನಿಹೋತ್ರಿಯವರು ದೆಹಲಿಯ ಜಹಾಂಗೀರಪುರಿಯಲ್ಲಿ ಮತಾಂಧರು ನಡೆಸಿದ ಗಲಭೆಯ ವಿಡಿಯೋ ಅನ್ನು ಪ್ರಸಾರ ಮಾಡಿದ್ದಾರೆ. ಅಲ್ಲಿ ಹನುಮಾನ ಜಯಂತಿಯ ಮೆರವಣಿಗೆಯ ಮೇಲೆ ಮಸೀದಿಯಿಂದ ಕಲ್ಲುತೂರಾಟ ನಡೆಸಲಾಗಿತ್ತು ಹಾಗೂ ಮತಾಂಧರು ಬಂದೂಕು ಮತ್ತು ಖಡ್ಗ ಹಿಡಿದುಕೊಂಡು ಹಿಂದೂಗಳ ಮೇಲೆ ಹಾಗೂ ಪೊಲೀಸರ ಮೇಲೆ ದಾಳಿ ನಡೆಸಿದ್ದರು.
If anyone thinks #TheKashmirFiles was about the past of Kashmir, you are wrong. It’s a trailer of Bharat’s future. See this evidence of #HanumanJayanti procession. pic.twitter.com/CwaHLZGTGO
— Vivek Ranjan Agnihotri (@vivekagnihotri) April 17, 2022
೧. ವಿವೇಕ ಅಗ್ನಿಹೋತ್ರಿಯವರ ಈ ಟ್ವಿಟನ ಮೇಲೆ ಹಲವರು ಟ್ವಿಟ್ಸ ಮಾಡಿ ಪ್ರತಿಕ್ರಿಯೆ ವ್ಯಕ್ತ ಪಡಿಸಿದ್ದಾರೆ. ಓರ್ವ ಹಿಂದು ವ್ಯಕ್ತಿಯು, ‘ನಮ್ಮ ಮೇಲೆ ನಡೆಯುವ ದಾಳಿಗೆ ನಮ್ಮ ಭಯ, ಜಾತಿವಾದ, ಸ್ವಾರ್ಥ ಹಾಗೂ ಲೋಭವೇ ಹೊಣೆ. ನಾವು ಕೇವಲ ನಮ್ಮ ಬಗ್ಗೆಯಷ್ಟೇ ವಿಚಾರ ಮಾಡುತ್ತೇವೆ. ಜಿಹಾದಿಗಳು ತಮ್ಮ ಪಂಥಕ್ಕಾಗಿ ಹಾಗೂ ಅದರೊಂದಿಗೆ ಸಂಬಂಧಪಟ್ಟ ಜನರ ಬಗ್ಗೆ ವಿಚಾರ ಮಾಡುತ್ತಾರೆ. ನಮಗೆ ಪೂಜೆ ಮಾಡಿದರೂ ಕೂಡ ನಾಚಿಕೆಯೆನಿಸುತ್ತದೆ; ಆದರೆ ದರ್ಗಾಗೆ ಹೋಗಿ ಕಂಬಳಿ ಹೊದಿಸುವುದು ‘ಫ್ಯಾಷನ್’ ಆಗಿದೆ. ಅದರ ಪರಿಣಾಮವೆಂದರೆ ಈ ರೀತಿಯ ದಾಳಿಯಾಗಿದೆ. ಎಂದು ಹೇಳಿದರು.
೨. ಮತ್ತೊಬ್ಬ ಹಿಂದುವು, ಭಾರತವನ್ನು ಹಿಂದು ರಾಷ್ಟ್ರವೆಂದು ಘೋಷಿಸಿದರೆ ಕಟ್ಟರುವಾದವು ತನ್ನಿಂದ ತಾನೇ ನಷ್ಟವಾಗುವುದು ಎಂದು ಹೇಳಿದರು.
ತೆಲಂಗಾಣದ ಮಹಿಳಾ ತಹಶೀಲ್ದಾರ್ಗೆ ಸೇರಿದ ₹20 ಕೋಟಿ ಮೌಲ್ಯದ ಅಕ್ರಮ ಆಸ್ತಿ ಜಪ್ತಿ!
‘ಆಪರೇಷನ್ ಸಿಂದೂರ್’ನಲ್ಲಿ ವೀರಮರಣ ಹೊಂದಿದ 6 ಭಾರತೀಯ ಸೈನಿಕರ ಹೆಸರುಗಳು ಮೊದಲ ಬಾರಿಗೆ ಪ್ರಕಟ!
ಬಂಗಾಳದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯಾಗಲಿದೆ ! – ಮುಖ್ಯಮಂತ್ರಿ ಶುಭೆಂದು ಅಧಿಕಾರಿ
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!