ಮುಸಲ್ಮಾನ ಸರಕಾರಿ ನೌಕರರಿಗೆ ರಮಜಾನಿನ ಸಮಯದಲ್ಲಿ ಕಾರ್ಯಾಲಯದ ಸಮಯದ ಒಂದು ಗಂಟೆ ಮೊದಲೇ ಮನೆಗೆ ಹೋಗಲು ಅನುಮತಿ ನೀಡಲಾಗಿದೆ !

ಆಂಧ್ರಪ್ರದೇಶದಲ್ಲಿನ ವೈ. ಎಸ್‌. ಆರ್‌ ಸರಕಾರದ ಜನತಾದ್ರೋಹಿ ನಿರ್ಣಯ !

  • ಜನತೆಯ ಹಣದಿಂದ ಸರಕಾರಿ ನೌಕರರಿಗೆ ವೇತನ ನೀಡಲಾಗುತ್ತದೆ. ಅದರಲ್ಲಿಯೂ ಒಂದು ತಿಂಗಳ ವರೆಗೆ ಪ್ರತಿದಿನ ೧ ಗಂಟೆ ಮುಸಲ್ಮಾನ ನೌಕರರು ಕಡಿಮೆ ಕೆಲಸ ಮಾಡಲಿದ್ದಾರೆ, ಹೀಗಿರುವಾಗ ಸರಕಾರವು ಅವರ ವೇತನದಿಂದ ಇದರ ಹಣವನ್ನು ಕಡಿತಗೊಳಿಸಬೇಕು !

  • ಹಿಂದೂಗಳಿಗೆ ಶ್ರೀರಾಮನವಮಿ, ಹನುಮಾನಜಯಂತಿ ಇತ್ಯಾದಿ ಅನೇಕ ಹಬ್ಬಗಳ ಸಮಯದಲ್ಲಿ ರಜೆ ನೀಡಲಾಗುವುದಿಲ್ಲ, ಆಗ ಇಂತಹ ನಿರ್ಣಯವನ್ನು ಆಂಧ್ರಪ್ರದೇಶ ಸರಕಾರವು ಯಾವಾಗ ತೆಗೆದುಕೊಳ್ಳಲಿದೆ ?

ಅಮರಾವತಿ (ಆಂಧ್ರಪ್ರದೇಶ) – ಆಂಧ್ರಪ್ರದೇಶದಲ್ಲಿನ ವೈ. ಎಸ್‌. ಜಗನಮೋಹನ ರೆಡ್ಡಿಯವರ ಸರಕಾರವು ರಾಜ್ಯದಲ್ಲಿನ ಎಲ್ಲ ಮುಸಲ್ಮಾನ ಸರಕಾರಿ ನೌಕರರು, ಶಿಕ್ಷಕರು ಹಾಗೂ ಕಾಂಟ್ರಾಕ್ಟರ್‌ಗಳಿಗೆ ರಮಜಾನಿನ ಸಮಯದಲ್ಲಿ ನಿಯೋಜಿತ ಕಾರ್ಯಾಲಯದ ಸಮಯದ ೧ ಗಂಟೆ ಮೊದಲೇ ಮನೆಗೆ ಹೋಗಬಹುದು, ಎಂಬ ಆದೇಶ ನೀಡಿದೆ.

(ಸೌಜನ್ಯ : NewsX)

ಕೆಲವು ದಿನಗಳ ಹಿಂದೆಯೇ ದೆಹಲಿಯಲ್ಲಿನ ಅಮ್‌ ಆದ್ಮಿ ಪಕ್ಷದ ಸರಕಾರವೂ ಇದೇ ನಿರ್ಣಯವನ್ನು ತೆಗೆದುಕೊಳ್ಳುವ ಘೋಷಣೆ ಮಾಡಿತ್ತು, ಆದರೆ ನಂತರ ಅದನ್ನು ಹಿಂಪಡೆಯಲಾಯಿತು.