ಹಿಜಾಬ್ ಪ್ರಕರಣದ ವಿದ್ಯಾರ್ಥಿನಿ ಮುಸ್ಕಾನ ಖಾನ ಇವಳನ್ನು ‘ಅಲ್ ಕಾಯದಾ’ ಮುಖಂಡ ಅಲ್ ಜವಾಹಿರಿಯಿಂದ ಪ್ರಶಂಸೆ

ನವದೆಹಲಿ – ಕರ್ನಾಟಕದ ಹಿಜಾಬ ಪ್ರಕರಣದ ಸಮಯದಲ್ಲಿ ಶಿವಮೊಗ್ಗದಲ್ಲಿ ಒಂದು ಶಾಲೆಯ ಪರಿಸರದಲ್ಲಿ ಮುಸ್ಕಾನ ಖಾನ ಹೆಸರಿನ ವಿದ್ಯಾರ್ಥಿನಿಯು ಹಿಜಾಬನ್ನು ವಿರೋಧಿಸುವ ವಿದ್ಯಾರ್ಥಿಗಳ ಎದುರಿಗೆ ‘ಅಲ್ಲಾಹು ಅಕ್ಬರ್’ನ (‘ಅಲ್ಲಾ ಮಹಾನ್ ಆಗಿದ್ದಾನೆ’) ಘೋಷಿಸಿದ್ದಳು. ಅವಳನ್ನು ‘ಅಲ್ ಕಾಯದಾ’ ಈ ಕಟ್ಟರ ಜಿಹಾದಿ ಭಯೋತ್ಪಾದಕ ಸಂಘಟನೆಯ ಮುಖಂಡ ಅಯಮಾನ ಅಲ್ ಜಿಹಾದಿ ಭಯೋತ್ಪಾದಕ ಸಂಘಟನೆಯ ಮುಖಂಡ ಅಯಮಾನ ಅಲ್ ಜವಾಹಿರಿ ಪ್ರಶಂಸಿಸಿದ್ದಾನೆ.

ಅಲ್ ಕಾಯದಾ ಅಧಿಕೃತ ಮಾಧ್ಯಮವಾಗಿರುವ ‘ಶಬಾಬ’ ಈ ಪ್ರಸಾರ ಮಾಧ್ಯಮವು ಬಿಡುಗಡೆಗೊಳಿಸಿದ್ದ ಒಂದು ವಿಡಿಯೋದಲ್ಲಿ ಅಲ್ ಜವಾಹಿರಿಯು, ‘ಸಾಮಾಜಿಕ ಮಾಧ್ಯಮಗಳ ಮೂಲಕ ಮುಸ್ಕಾನಳ ವಿಡಿಯೋ ನೋಡಿ ನಾನು ಬಹಳ ಪ್ರಭಾವಿತನಾಗಿದ್ದೇನೆ. ಆದ್ದರಿಂದ ಅವಳನ್ನು ಪ್ರಶಂಸಿಸಲು ನಾನು ಒಂದು ಕವಿತೆ ಬರೆದಿದ್ದೇನೆ’, ತದನಂತರ ಅವನು ಈ ಕವಿತೆಯನ್ನು ಓದುತ್ತಿರುವುದು ಕಂಡು ಬರುತ್ತಿದೆ. ಅಲ್ ಕಾಯದಾ ಈ ವಿಡಿಯೋ ‘ಭಾರತದ ಮಹಾನ ಮಹಿಳೆ’ ಎಂದು ಶೀರ್ಷಿಕೆಯಡಿ ಪ್ರಸಾರ ಮಾಡಿದೆ.

ಭಾರತೀಯ ಮುಸ್ಲಿಮರಿಗೆ ಪ್ರಚೋದನೆ

(ಸೌಜನ್ಯ : News 24)

ಈ ವಿಡಿಯೋದಲ್ಲಿ ಅಲ್ ಜವಾಹಿರಿಯು ಭಾರತದ ಮುಸಲ್ಮಾನರಿಗೆ ಈ(ಹಿಜಾಬನ) ‘ಅತ್ಯಾಚಾರ’ದ ವಿರುದ್ಧ ಪ್ರತಿಕ್ರಿಯೆ ನೀಡುವಂತೆ ಕರೆ ನೀಡಿದ್ದಾನೆ.