|
ಈ ಕುರಿತು ಮಹಿಳಾ ಸಂಘಟನೆಗಳು ಎಂದಿಗೂ ಏನನ್ನೂ ಮಾತನಾಡುವುದಿಲ್ಲ, ಎನ್ನುವುದನ್ನು ಗಮನಿಸಿರಿ ! ಯಾವಾಗಲೂ ಶರಿಯತ ಕಾನೂನು ಜಾರಿಗೊಳಿಸಲು ಒತ್ತಾಯಿಸುವವರು ಇಂತಹ ಘಟನೆಗಳ ಬಗ್ಗೆ ಆರೋಪಿಗೆ ಶರಿಯತ ಕಾನೂನಿನಂತೆ ಕೈಕಾಲು ಮುರಿಯುವ, ಹಾಗೆಯೇ ನಡುರಸ್ತೆಯಲ್ಲಿ ಕಟ್ಟಿಹಾಕಿ ಅವನನ್ನು ಕಲ್ಲಿನಿಂದ ಹೊಡೆದು ಶಿಕ್ಷಿಸಬೇಕೆಂದು ಒತ್ತಾಯಿಸುವುದಿಲ್ಲ, ಎನ್ನುವುದನ್ನು ಗಮನಿಸಿರಿ ! |

ದಮೋಹ (ಮಧ್ಯಪ್ರದೇಶ) – ಇಲ್ಲಿ ಓರ್ವ ಸೊಸೆ ತನ್ನ ಮಾವ ರಶೀದ ಖಾನ ಅತ್ಯಾಚಾರ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಮಾವನ ವಿರುದ್ಧ ದೂರು ದಾಖಲಿಸಿ, ಅವನನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಪತಿಯ ವಿರುದ್ಧವೂ ದೂರು ದಾಖಲಿಸಲಾಗಿದ್ದು, ಸದ್ಯ ಅವನು ಪರಾರಿಯಾಗಿದ್ದಾನೆ.
मध्य प्रदेश के दमोह जिले की घटना, पुलिस कर रही मामले की जांच @ReporterRavish https://t.co/tDt6msx009
— AajTak (@aajtak) April 2, 2022
ಈ ಮಹಿಳೆಯು ಪತ್ರಕರ್ತರೊಂದಿಗೆ ಮಾತನಾಡುತ್ತಾ, ನನ್ನ ನಿಕಾಹ ೨೦೨೦ ರಲ್ಲಿ ಆಗಿತ್ತು. ಆಗಿನಿಂದ ರಾಶೀದ ಖಾನ ನನ್ನ ಕಡೆಗೆ ವಕ್ರದೃಷ್ಟಿಯಿಂದ ನೋಡುತ್ತಿದ್ದನು. ಆದ್ದರಿಂದ ನಾನು ಅವನಿಂದ ನನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೆನು; ಆದರೆ ನಾನು ನನ್ನನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಯಾವಾಗ ನನ್ನ ಗಂಡ ಮನೆಯಲ್ಲಿ ಇರುತ್ತಿರಲಿಲ್ಲವೋ, ಆಗ ಅವನು ನನ್ನ ಮೇಲೆ ಅತ್ಯಾಚಾರ ಮಾಡುತ್ತಿದ್ದನು. ಈ ವಿಷಯದಲ್ಲಿ ಯಾರಿಗಾದರೂ ಹೇಳಿದರೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದನು. ಮಾವನ ಈ ಕೃತ್ಯದ ಕುರಿತು ಗಂಡನಿಗೆ ಹೇಳಿದಾಗ ಅವನು ನನ್ನನ್ನೇ ಬೆದರಿಸಿದನು ಮತ್ತು ಮಾವನ ಕೃತ್ಯವನ್ನು ಬೆಂಬಲಿಸಿದನು ಎಂದು ಹೇಳಿದರು.
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!
ಚಿಂಚವಡ (ಪುಣೆ)ದಲ್ಲಿನ ಶ್ರೀ ಮೋರಯಾ ಗೋಸಾವಿ ಮಂದಿರ ಪರಿಸರದ ಜಾತ್ರೆಯಲ್ಲಿ ‘ಮೇಡ್ ಇನ್ ಪಾಕಿಸ್ತಾನ್’ ಲೇಬಲ್ ಇರುವ ಚಾದರಗಳ ಮಾರಾಟ!
ಬಂಗಾಳದ ಭಾಂಗರ ಬಾಂಬ್ ಸ್ಫೋಟ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಮಾಜಿ ಶಾಸಕ ಶೌಕತ್ ಮೊಲ್ಲಾ ಬಂಧನ
ನೆರೂಲ್ (ನವಿ ಮುಂಬಯಿ): ಹಾಸ್ಟೆಲ್ನಲ್ಲಿದ್ದ ಹಿಂದೂ ದೇವತೆಗಳ ಮೂರ್ತಿಗಳನ್ನು ಎಸೆದ ಕ್ರಿಶ್ಚಿಯನ್ ಯುವತಿ!
ಪಂಢರಪುರ: ಶ್ರೀ ವಿಠ್ಠಲ ಮೂರ್ತಿಯ ರಾಸಾಯನಿಕ ಲೇಪನಕ್ಕೆ ವಾರಕರಿ ಸಂಪ್ರದಾಯದ ವಿರೋಧ: ರಾಸಾಯನಿಕ ಲೇಪನದಿಂದ ಮೂರ್ತಿಗೆ ಹಾನಿ!
ಲಂಡನ್ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಾರ್ಯಕ್ರಮದಲ್ಲಿ ಗದ್ದಲ: ಭಾರತೀಯ ಹೈಕಮಿಷನ್ ತೀವ್ರ ಆಕ್ರೋಶ