ಬಾಗಪತ (ಉತ್ತರಪ್ರದೇಶ)ದಲ್ಲಿ ಓರ್ವ ಸಾಧೂವಿನ ಹತ್ಯೆ !

ನಿರಂತರವಾಗಿ ಹಿಂದೂಗಳ ಸಾಧು-ಸಂತರ ಹತ್ಯೆಯಾಗುವುದು ಇದು ಒಂದು ದೊಡ್ಡ ಪಿತೂರಿಯಾಗಿದೆ. ಈ ಪಿತೂರಿಯನ್ನು ನಾಶಗೊಳಿಸಲು ಕೇಂದ್ರ ಸರಕಾರವು ಕ್ರಮಕೈಗೊಳ್ಳಬೇಕು !

ಬಾಗಪತ (ಉತ್ತರಪ್ರದೇಶ) – ಇಲ್ಲಿಯ ನಿರಪುಡಾ ಗ್ರಾಮದ ಕಾಡಿನಲ್ಲಿ ವಾಸಿಸುತ್ತಿದ್ದ ಓರ್ವ ೪೦ ವರ್ಷದ ಸಾಧುವಿನ ಹತ್ಯೆ ಮಾಡಲಾಗಿದೆ. ಈ ಸಾಧುವನ್ನು ಕೋಲಿನಿಂದ ಹೊಡೆದು ಸಾಯಿಸಲಾಗಿದೆ ಎಂದು ಪೋಲೀಸರ ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಸಾಧುವಿನ ಹೆಸರು ಲಾಲೂನಾಥ ಆಗಿತ್ತು. ಅವರು ೭ ತಿಂಗಳಿನಿಂದ ಈ ಕಾಡಿನಲ್ಲಿಯ ಭೂಮಿಯಾ ದೇವಸ್ಥಾನದ ಹತ್ತಿರ ಒಂದು ಗುಡಿಸಲಿನಲ್ಲಿ ವಾಸಿಸುತ್ತಿದ್ದರು ಅವರು ಹಿಂದೆ ಕಿಶನಪೂರ ಬರಾಲ ಹಳ್ಳಿಯ ದೇವಸ್ಥಾನದಲ್ಲಿ ವಾಸಿಸುತ್ತಿದ್ದರು.