400 ಕೋಟಿ ರೂಪಾಯಿ ಬೆಲೆಬಾಳುವ ಅಷ್ಟಧಾತುವಿನಿಂದ ತಯಾರಿಸಿರುವ ಪ್ರಪಂಚದ ಎಲ್ಲಕ್ಕಿಂತ ಎತ್ತರದ ಮೂರ್ತಿ

ಭಾಗ್ಯನಗರ (ತೆಲಂಗಾಣಾ) – ಭಾರತದಲ್ಲಿ ಮೊಟ್ಟಮೊದಲು ಸಮಾನತೆಯ ಸಂದೇಶ ನೀಡುವ ವೈಷ್ಣವ ಸಂತ ರಾಮಾನುಜಾಚಾರ್ಯ ಸ್ವಾಮಿ ಇವರ `ಸ್ಟ್ಯಾಚು ಆಫ್ ಇಕ್ವಾಲಿಟಿ’ (ಸಮಾನತೆಯ ಪ್ರತಿಕ ಇರುವ ಪುತ್ತಳಿ) ಹೆಸರಿನ 216 ಅಡಿ ಎತ್ತರದ ಮೂರ್ತಿಯನ್ನು ಪ್ರಧಾನಿ ಮೋದಿ ಅವರ ಹಸ್ತದಿಂದ ವಸಂತ ಪಂಚಮಿಯ ಮುಹೂರ್ತದಲ್ಲಿ ರಾಷ್ಟ್ರಕ್ಕೆ ಸಮರ್ಪಿಸಲಾಯಿತು. ಇದು ಅಷ್ಟ ಧಾತುವಿನಿಂದ ತಯಾರಿಸಿರುವ ಪ್ರಪಂಚದ ಎಲ್ಲಕ್ಕಿಂತ ದೊಡ್ಡ ಮೂರ್ತಿಯಾಗಿದೆ. `ಗಿನ್ನಿಸ್ ಬುಕ್ ಆಫ್ ವಲ್ರ್ಡ್ ರೆಕಾರ್ಡ್’ ನಲ್ಲಿ ಮೂರ್ತಿಯನ್ನು ಸೇರಿಸಲಾಗಿದೆ. ಸುಮಾರು 1 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿ ನಿರ್ಮಿಸಲಾದ ಭವ್ಯ ರಾಮಾನುಜಾಚಾರ್ಯ ದೇವಸ್ಥಾನದ ಮೇಲೆ ಈ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ರಾಮಾನುಜಾಚಾರ್ಯರ ಎರಡನೆಯ ಮೂರ್ತಿ ದೇವಸ್ಥಾನದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ, ಇದು 120 ಕೇಜಿ ಬಂಗಾರದ್ದಾಗಿದೆ. ಸಂತ ರಾಮಾನುಜಾಚಾರ್ಯ ಸ್ವಾಮಿ ಇವರ ಜನನಕ್ಕೆ 1001 ವರ್ಷಗಳು ಪೂರ್ಣವಾದವು.
ಪ್ರಧಾನಿಯಿಂದ 216 ಅಡಿ ಎತ್ತರದ ಶ್ರೀ ರಾಮಾನುಜಾಚಾರ್ಯರ ಪ್ರತಿಮೆ ಲೋಕಾರ್ಪಣೆ
ವಿಶ್ವದ ಗಮನ ಸೆಳೆದ ಭವ್ಯ ಧಾರ್ಮಿಕ ಕಾರ್ಯಕ್ರಮ#ramanujacharyaStatue #Ramanujacharya #NarendraModi https://t.co/BcaPXOhcyM
— Udayavani (@udayavani_web) February 5, 2022
ಶ್ರೀರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ದೊಡ್ಡ ವ್ಯಕ್ತಿಗಳನ್ನು ಹೊರಗಿಡಲಾಗಿದೆ !
‘ಮ್ಯೂಸಿಕ್ ಕಾನ್ಸರ್ಟ್’ಗಳಲ್ಲಿ ಇನ್ನು ಮುಂದೆ ಮದ್ಯಪಾನಕ್ಕೆ ಅನುಮತಿಯಿಲ್ಲ ! – ಯೋಗೇಶ ಕದಮ್, ಗೃಹ ರಾಜ್ಯಸಚಿವರು
ವೈದಿಕ ಕಾಲದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿತ್ತು ಎಂದು ಹೇಳುತ್ತಾ ಮನುಸ್ಮೃತಿಯ ಶ್ಲೋಕದ ಉಲ್ಲೇಖ!
‘ ಮಹಾತ್ಮ ಫುಲೆ ವಾಡಾ’ ಆವರಣದಲ್ಲಿ ವಟಪೂಜೆ ನಿಷೇಧ ವಾಪಸ್!
ದೇಶದ 3 ರಾಜ್ಯಗಳಲ್ಲಿ ಲವ್ ಜಿಹಾದ್ನ 4 ಘಟನೆಗಳು ಬೆಳಕಿಗೆ!
ಮಧ್ಯಪ್ರದೇಶದ ಬಡನಗರದಲ್ಲಿ ಕ್ರೇನ್ ಮೂಲಕ ಕಾರನ್ನು ಎತ್ತಿ ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಯಿತು ! : Ujjain Muharram