ಕರ್ನಾಟಕದ ಮಹಾವಿದ್ಯಾಲಯಗಳಲ್ಲಿ ಹಿಜಾಬ ಮತ್ತು ಭಗವಾ ಶಾಲನ್ನು ಧರಿಸಿ ಬರುವುದರ ಮೇಲೆ ನಿರ್ಬಂಧ !

ಬೆಂಗಳೂರು – ರಾಜ್ಯದಲ್ಲಿನ ಉಡುಪಿಯ ಕೆಲವು ಮಹಾವಿದ್ಯಾಲಯಗಳಲ್ಲಿ ಮುಸಲ್ಮಾನ ವಿದ್ಯಾರ್ಥಿನಿಯರು ಹಿಜಾಬ (ತಲೆ, ಮುಖ ಮತ್ತು ಕುತ್ತಿಗೆಯನ್ನು ಮುಚ್ಚುವ ಬಟ್ಟೆ ) ಧರಿಸಿ ಬರುವ ಬೇಡಿಕೆ ನೀಡಿದ ನಂತರ ಹಿಂದೂ ವಿದ್ಯಾರ್ಥಿನಿಯರೂ ಭಗವಾ ಶಾಲು ಧರಿಸಿ ಬರಲು ಆರಂಭಿಸಿದ ನಂತರ ರಾಜ್ಯ ಸರಕಾರವು ಈ ಎರಡರ ಮೇಲೆ ನಿರ್ಬಂಧ ಹಾಕಿದೆ. ಸರಕಾರವು ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಖಾಸಗಿ ಬಟ್ಟೆಗಳನ್ನು ಧರಿಸಿ ಬರಲು ಆದೇಶಿಸಿದೆ.