ಭಾಜಪದ ಧ್ವಜದ ಮೇಲೆ ಹಸುವನ್ನು ಮಲಗಿಸಿ ಹತ್ಯೆ ಮಾಡಿದ ಮೂರು ಮತಾಂಧರ ಬಂಧನ

ಹಿಂದೂಗಳನ್ನು ಅಸಹಿಷ್ಣು ಎಂದು ನಿರ್ಧರಿಸುವ ಜಾತ್ಯತೀತರು ಮತ್ತು ಪ್ರಗತಿ(ಅಧೋಗತಿ)ಪರರು ಈಗ ಏಕೆ ಮಾತನಾಡುತ್ತಿಲ್ಲ ? ಪ್ರಾಣಿ ಮಿತ್ರ ಸಂಘಟನೆಯವರು ಎಲ್ಲಿದ್ದಾರೆ ?

ಇಂಫಾಲ (ಮಣಿಪುರ) – ಮಣಿಪುರ ರಾಜ್ಯದ ಲಿಲೊಂಗ ಪೊಲೀಸ್ ಠಾಣೆಯ ಪೊಲೀಸರು ಅಬ್ದುಲ್ ರಶೀದ್, ನಜಿಬುಲ್ಲಾ ಹುಸೈನ್ ಮತ್ತು ಮಹಮ್ಮದ್ ಆರೀಫ್ ಖಾನ್ ಇವರನ್ನು ಗೋಹತ್ಯೆ ಪ್ರಕರಣದಲ್ಲಿ ಬಂಧಿಸಿದ್ದಾರೆ. ಇದರಲ್ಲಿ ಕೆಲವು ಜನರಿಂದ ಗೋಹತ್ಯೆ ನಡೆಸಲಾಗುತ್ತಿದೆ ಎಂಬ ವಿಡಿಯೋ ಪ್ರಸಾರವಾಗಿತ್ತು. ಈ ಮೂವರು ಭಾಜಪದ ಧ್ವಜದ ಮೇಲೆ ಹಸುವನ್ನು ಮಲಗಿಸಿ ಹತ್ಯೆ ಮಾಡುತ್ತಿರುವುದು ವಿಡಿಯೋದಲ್ಲಿ ಕಾಣುತ್ತಿದೆ. ಹಾಗೂ ಈ ಜನರು ಮಣಿಪುರದ ಮುಖ್ಯಮಂತ್ರಿ ಮತ್ತು ಭಾಜಪದ ಮುಖಂಡ ಎನ್. ಬಿರೆನ ಸಿಂಹ ಮತ್ತು ಭಾಜಪದ ಪ್ರದೇಶ ಅಧ್ಯಕ್ಷ ಸಾರದಾ ದೇವಿ ಇವರನ್ನು ನಿಂದಿಸುತ್ತಿರುವುದು ಕಾಣುತ್ತಿದೆ.