ಅಲವರ (ರಾಜಸ್ಥಾನ) ಇಲ್ಲಿಯ ಒಂದು ಅಪ್ರಾಪ್ತ ಮೂಕ ಮತ್ತು ಕಿವುಡ ಹುಡುಗಿಯ ಮೇಲೆ ಸಾಮೂಹಿಕ ಬಲಾತ್ಕಾರ !

ಇನ್ನೊಂದು ಘಟನೆಯಲ್ಲಿ ಸಾಮೂಹಿಕ ಬಲಾತ್ಕಾರ ಪೀಡಿತೆಯಿಂದ ಆತ್ಮಹತ್ಯೆ !

ಕಾಂಗ್ರೆಸ್ ಸರಕಾರ ಇರುವ ರಾಜಸ್ಥಾನದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವ ಘಟನೆ ! ಮಹಿಳೆಯ ಹಿತಾಸಕ್ತಿಯ ಹೋರಾಟಗಾರ್ತಿ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು  ಈಗ ಏನು ಹೇಳುತ್ತಾರೆ ? 

ಅಲವರ (ರಾಜಸ್ಥಾನ) – ಇಲ್ಲಿಯ ಮೂಕ ಕಿವುಡ ಹಾಗೂ ಅಪ್ರಾಪ್ತ ಹುಡುಗಿಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಬಲಾತ್ಕಾರ ಮಾಡುವವರು ಹುಡುಗಿಯ ಗುಪ್ತಾಂಗಕ್ಕೆ ಚೂಪಾದ ವಸ್ತು ಹಾಕಿ ಗಾಯಗೊಳಿಸಿದ್ದಾರೆ. ಒಂದು ಖಾಸಗಿ ಬಸ್ಸಿನಲ್ಲಿ ಈ ಬಲಾತ್ಕಾರ ನಡೆದಿರಬಹುದು ಎಂದು ಪೊಲೀಸರಿಗೆ ಸಂಶಯವಿದೆ. ಹುಡುಗಿಗೆ ರಕ್ತಸಿಕ್ತ ಸ್ಥಿತಿಯಲ್ಲಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಆಕೆಯ ಮೇಲೆ ಸತತ ೩ ಗಂಟೆಯ ಕಾಲ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಕೆಲವು ದಿನಗಳ ಹಿಂದೆ ರಾಜಸ್ಥಾನದ ಭರತಪುರ ಜಿಲ್ಲೆಯ ಕೈಥವಾಡಾ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಸಾಮೂಹಿಕ ಬಲಾತ್ಕಾರ ನಡೆದ ಓರ್ವ ಅಪ್ರಾಪ್ತ ಹುಡುಗಿಯು ಸಾಮಾಜಿಕ ಅವಮಾನ ಸಹಿಸಬಾರದು ಎಂದು ಆತ್ಮಹತ್ಯೆ ಮಾಡಿಕೊಂಡಳು. ಆಫೀಜ ಮತ್ತು ಮನೀಶ ಈ ಕಾಮುಕರು ಆಕೆಯ ಅಶ್ಲೀಲ ವಿಡಿಯೋಗಳನ್ನು ತಯಾರಿಸಿದ್ದರು ಮತ್ತು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದರು.