ಬಾಗಲಕೋಟೆಯಲ್ಲಿ ಹಿಂದೂ ವಿದ್ಯಾರ್ಥಿಗಳ ಮತಾಂತರದ ಆರೋಪದಿಂದ ಸೇಂಟ್ ಪಾಲ್ ಶಾಲೆಯನ್ನು ಮುಚ್ಚಿದ ಇಲಾಖೆ !

ದೂರಿನ ನಂತರ ತಕ್ಷಣ ಕ್ರಮ ಕೈಗೊಂಡ ಇಲಾಖೆಗೆ ಅಭಿನಂದನೆ ! ಇಂತಹ ತತ್ಪರತೆ ಎಲ್ಲ ಕಡೆಗಳಲ್ಲೂ ಇರಬೇಕು ಮತ್ತು ಅದರಲ್ಲಿಯೂ ಯಾರಾದರೂ ದೂರನ್ನು ನೀಡುವುದಕ್ಕಿಂತ ಇಲಾಖೆಯೇ ಎಚ್ಚರದಿಂದಿದ್ದು ಇಂತಹ ಘಟನೆಗಳನ್ನು ತಡೆಯಲು ತಕ್ಷಣ ಕ್ರಮ ಕೈಗೊಳ್ಳಬೇಕು ! ಸಂಪಾದಕರು

ಸೇಂಟ್ ಪಾಲ್ ಶಾಲೆ

ಬಾಗಲಕೋಟೆ – ಬಾಗಲಕೋಟೆಯಲ್ಲಿನ ಹುನಗುಂದ ಸಮೀಪದ ಇಳಕಲ ಭಾಗದಲ್ಲಿರುವ ಸೆಂಟ್ ಪಾಲ್ಸ್ ಉಚ್ಚ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಹಾಗೂ ಹಿಂದುತ್ವನಿಷ್ಠ ಸಂಘಟನೆ ಇವರು ಮತಾಂತರದ ಬಗ್ಗೆ ದೂರು ನೀಡಿದ ನಂತರ ಶಾಲೆ ಮುಚ್ಚಿದ್ದಾರೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆಯ ನಿರೀಕ್ಷಣೆ ನಡೆಸಿದ ನಂತರ ಈ ನಿರ್ಣಯ ತೆಗೆದುಕೊಂಡಿದ್ದಾರೆ.