ಕಾಶ್ಮೀರದಲ್ಲಿ ೬ ಭಯೋತ್ಪಾದಕರ ಸಾವು

ಕಾಶ್ಮೀರದಲ್ಲಿ ಭದ್ರತಾಪಡೆಯಿಂದ ಭಯೋತ್ಪಾದಕರನ್ನು ಪ್ರತಿದಿನ ಸಾಯಿಸಲಾಗುತ್ತಿರುವುದು ಒಳ್ಳೆಯ ವಿಷಯವಿದೆ; ಆದರೆ ಈ ರೀತಿ ಭಯೋತ್ಪಾದಕರನ್ನು ಸಾಯಿಸಿದರೂ ಕಾಶ್ಮೀರದಲ್ಲಿ ಭಯೋತ್ಪಾದನೆ ಮುಗಿದಿಲ್ಲ ಮತ್ತು ಮುಗಿಯುವ ಸಾಧ್ಯತೆ ಇಲ್ಲ; ಏಕೆಂದರೆ ಎಲ್ಲಿಯವರೆಗೆ ಅವರನ್ನು ನಿರ್ಮಿಸುವ ಪಾಕಿಸ್ತಾನವನ್ನು ನಾಶ ಮಾಡುವುದಿಲ್ಲವೋ, ಅಲ್ಲಿಯವರೆಗೆ ಭಯೋತ್ಪಾದಕರು ಬರುತ್ತಲೇ ಇರುತ್ತಾರೆ, ಇದು ವಸ್ತುಸ್ಥಿತಿಯಾಗಿದೆ !

ಶ್ರೀನಗರ – ಜಮ್ಮು-ಕಾಶ್ಮೀರದ ಕುಲಗಾಮ್ ಮತ್ತು ಅನಂತನಾಗ ಈ ಜಿಲ್ಲೆಗಳಲ್ಲಿ ನಡೆದಿರುವ ಬೇರೆಬೇರೆ ಚಕಮಕಿಗಳಲ್ಲಿ ಭದ್ರತಾಪಡೆಯು ೬ ಭಯೋತ್ಪಾದಕರನ್ನು ಸಾಯಿಸಿದೆ. ಈ ಚಕಮಕಿಯಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾನೆ. ಮೃತಪಟ್ಟ ಭಯೋತ್ಪಾದಕರು ಜೈಶ್-ಇ-ಮೊಹಮ್ಮದ್ ಈ ಭಯೋತ್ಪಾದಕ ಸಂಘಟನೆಗೆ ಸೇರಿದವರಾಗಿದ್ದಾರೆ. ಇದರಲ್ಲಿ ಇಬ್ಬರು ಪಾಕಿಸ್ತಾನಿ ಮತ್ತು ಇಬ್ಬರು ಸ್ಥಳೀಯರಾಗಿದ್ದಾರೆ ಮತ್ತು ಇತರ ಇಬ್ಬರ ಗುರುತು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.