ಪಂಜಾಬನಲ್ಲಿ ವಿಧಾನಸಭೆಯ ಚುನಾವಣೆಯಿರುವುದರಿಂದ ಉದ್ದೇಶಪೂರ್ವಕವಾಗಿ ಈ ರೀತಿಯ ಘಟನೆಗಳನ್ನು ಮಾಡಲಾಗುತ್ತಿದೆಯೇ ? ಎಂಬುದನ್ನು ಕೇಂದ್ರ ಸರಕಾರ ಕಂಡು ಹಿಡಿಯ ಬೇಕು !

ಕಪುರಥಳಾ (ಪಂಜಾಬ) – ಅಮೃತಸರದಲ್ಲಿರುವ ಸ್ವರ್ಣ ದೇವಾಲಯದಲ್ಲಿರುವ ಗುರು ಗ್ರಂಥ ಸಾಹಿಬ ಅನ್ನು(ಸಿಕ್ಖರ ಪವಿತ್ರ ಧಾರ್ಮಿಕ ಗ್ರಂಥದ) ಅವಮಾನಿಸಲು ಪ್ರಯತ್ನಿಸಿದವರು ಹಲ್ಲೆಯಿಂದ ಮೃತಪಟ್ಟ ಘಟನೆ ರಾಜ್ಯದ ಕಪುರಥಳಾದಲ್ಲಿಯೂ ನಡೆದಿದೆ. ಕಪುರಥಳಾ ಜಿಲ್ಲೆಯಲ್ಲಿ ನಿಜಾಮಪೂರ ಗ್ರಾಮದಲ್ಲಿ ಗುರುದ್ವಾರದಲ್ಲಿ ವ್ಯಕ್ತಿಯೊಬ್ಬನು ನಿಶಾಣ ಸಾಹಿಬ ಅನ್ನು (ಸಿಕ್ಖರ ಪವಿತ್ರ ಧ್ವಜ)ವನ್ನು ವಿಡಂಬನೆ ಮಾಡಿದನು. ಗ್ರಾಮಸ್ಥರು ವಿಡಂಬನೆ ಮಾಡಿದ ವ್ಯಕ್ತಿಯನ್ನು ಹಿಡಿದುಕೊಂಡು ಅವನನ್ನು ಹಿಗ್ಗಾಮುಗ್ಗಾ ಥಳಿಸಿದರು. ಈ ಥಳಿತದ ನಂತರ ಆ ಯುವಕನು ಎಲ್ಲಿಗೆ ಹೋದನು ? ಎಂಬ ಬಗ್ಗೆ ಇನ್ನೂ ಯಾರಿಗೂ ಮಾಹಿತಿ ಸಿಗಲಿಲ್ಲ. ಪೊಲೀಸರು ಕೂಡ ಅವನನ್ನು ವಶಪಡಿಸಿಕೊಂಡಿರುವ ಬಗ್ಗೆ ಸ್ಪಷ್ಟೀಕರಣ ನೀಡಲಿಲ್ಲ.
काफी पिटाई के बाद युवक की मौत हो गई, कपूरथला के एसएसपी ने इसकी पुष्टी की है.#Punjab #Kapurthala #CrimeNewshttps://t.co/3p6Bli1lZc
— ABP News (@ABPNews) December 19, 2021
ಮುಂಜಾನೆ ೪ ಘಂಟೆಗೆ ಆ ಯುವಕನು ನಿಶಾಣ ಸಾಹಿಬನ ವಿಡಂಬನೆ ಮಾಡುತ್ತಿದ್ದನು. ಗ್ರಾಮಸ್ಥರು ತಲುಪಿದ ತಕ್ಷಣ ಆ ಯುವಕನು ಓಡಿ ಹೋಗಲು ಪ್ರಯತ್ನಿಸಿದನು. ಆತನನ್ನು ೨ ಗಂಟೆಗಳ ಪ್ರಯತ್ನದಲ್ಲಿ ಹಿಡಿಯಲಾಯಿತು ಹಾಗೂ ಅವನನ್ನು ಥಳಿಸಿದರು. ಗ್ರಾಮಸ್ಥರು ಥಳಿಸುತ್ತಿರುವುದರ ವಿಡಿಯೊ ಮಾಡಿದ್ದಾರೆ. ಗ್ರಾಮಸ್ಥರು, ಪಕ್ಕದಲ್ಲಿಯೇ ಪೊಲೀಸರ ಚೌಕಿ ಇದೆ; ಆದರೂ ಕೂಡ ನಾವು ಆ ಯುವಕನನ್ನು ಅವರಿಗೆ ಒಪ್ಪಿಸುವುದಿಲ್ಲ. ನಾವು ಅವನನ್ನು ವಶದಲ್ಲಿಟ್ಟುಕೊಂಡಿದ್ದು ಸಿಕ್ಖ ಸಂಘಟನೆಗಳನ್ನು ಕರೆದಿದ್ದೇವೆ. ಅವರೇ ಅವನ ಬಗ್ಗೆ ತೀರ್ಮಾನಿಸಲಿದ್ದಾರೆ ಎಂದು ಹೇಳಿದ್ದಾರೆ. ಆ ಯುವಕನು ದೆಹಲಿಯಿಂದ ಬಂದಿದ್ದಾನೆ. ಯುವಕನು, ತನಗೆ ಹಣ ನೀಡಿ ವಿಡಂಬನೆ ಮಾಡಲು ಕಳುಹಿಸಲಾಗಿತ್ತು. ಎಂದು ಹೇಳಿದನು. ಅದನ್ನು ಬಿಟ್ಟು ತನ್ನ ಬಗ್ಗೆ ಏನೂ ಕೂಡ ಹೇಳಲಿಲ್ಲ. ಅವನು ತನ್ನ ಹೆಸರನ್ನು ಕೂಡ ಹೇಳುತ್ತಿಲ್ಲ. ಅನಂತರ ಆ ಯುವಕನು ಅಲ್ಲಿಂದ ಓಡಿ ಹೋಗಿರುವುದು ತಿಳಿದು ಬಂದಿದೆ.
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ