ಪಾಕಿಸ್ತಾನದಲ್ಲಿ ಈಶನಿಂದನೆ ಮಾಡುವವನನ್ನು ಗುಂಪೊಂದು ಥಳಿಸಿ ಜೀವಂತವಾಗಿ ಸುಡುತ್ತದೆ, ಪಂಜಾಬ್ನಲ್ಲಿ ಧಾರ್ಮಿಕ ಸ್ಥಳವನ್ನು ಅವಮಾನಿಸಿದವನನ್ನು ಗುಂಪಿನವರು ಸಾಯಿಸುತ್ತಾರೆ. ಇನ್ನೊಂದೆಡೆ ಹಿಂದೂಗಳು ಅವರ ಧಾರ್ಮಿಕ ಅಂಶಗಳನ್ನು ಅವಮಾನಿಸುವ ವಿಷಯವಾಗಿ ಕಾನೂನಿನ ಮಾರ್ಗದಿಂದ ಏನಾದರೂ ಮತ್ತು ಅದನ್ನು ಸಹ ಯಾವಾಗಲಾದರೊಮ್ಮೆ ಕೃತಿ ಮಾಡಲು ಪ್ರಯತ್ನಿಸುತ್ತಾರೆ !- ಸಂಪಾದಕರು

ಅಮೃತಸರ (ಪಂಜಾಬ) – ಇಲ್ಲಿಯ ಸಿಕ್ಖರ ಸರ್ವೋಚ್ಚ ಧಾರ್ಮಿಕ ಸ್ಥಳವಾಗಿರುವ ಸ್ವರ್ಣಮಂದಿರದಲ್ಲಿನ ಗುರು ಗ್ರಂಥ ಸಾಹಿಬ್ (ಸಿಕ್ಖರ ಪವಿತ್ರ ಧರ್ಮಗ್ರಂಥ)ನ ಅವಮಾನಿಸಲು ಪ್ರಯತ್ನಿಸಿದವನು ಗುಂಪಿನವರು ನಡೆಸಿದ ಹಲ್ಲೆಯಿಂದಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಮುಖ್ಯಮಂತ್ರಿ ಚರಣ್ಜೀತ ಸಿಂಹ ಚೆನ್ನಿ ಇವರು ಸಹ ಈ ಘಟನೆಯನ್ನು ಖಂಡಿಸಿ ವಿಚಾರಣೆಯ ಆದೇಶ ನೀಡಿದ್ದಾರೆ.
Man accused of ‘sacrilege’ bid at #Amritsar‘s Golden Temple beaten to death. India Today’s @manjeet_sehgal shares more information. Listen in.#ITVideo pic.twitter.com/uMgI84I0hu
— IndiaToday (@IndiaToday) December 19, 2021
1. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ರೆಹರಾಸ ಸಾಹಿಬ್ ಪಾಠ (ಸಂಜೆಯ ಪ್ರಾರ್ಥನೆ) ನಡೆಯುತ್ತಿರುವಾಗ ಒಬ್ಬ ಅಪರಿಚಿತ ವ್ಯಕ್ತಿ ಕಟ್ಟಡದಿಂದ ಕೆಳಗೆ ಜಿಗಿದು ಮತ್ತು ನಾಟಕೀಯವಾಗಿ ಗುರುಗ್ರಂಥ ಸಾಹಿಬ್ ಎದುರು ಇಟ್ಟಿದ್ದ ಕತ್ತಿಗೆ ಮುಟ್ಟಿ ಅಪವಿತ್ರಗೊಳಿಸಲು ಪ್ರಯತ್ನಿಸಿದನು. ಈ ಬಗ್ಗೆ ಅಲ್ಲಿಯ ಗುಂಪಿನವರು ಯುವಕನನ್ನು ಹೊರಗೆ ಕರೆದುಕೊಂಡು ಹೋಗಿ ಮತ್ತು ಹಿಗ್ಗಾಮುಗ್ಗಾ ಥಳಿಸಿದರು. ಈ ಥಳಿತದಲ್ಲಿ ಯುವಕ ಸಾವನ್ನಪ್ಪಿದನು. ಯುವಕನ ಮೃತದೇಹವನ್ನು ಶವಪರೀಕ್ಷೆಗಾಗಿ ಕಳುಹಿಸಲಾಗಿದೆ. ಯುವಕ ಒಬ್ಬನೇ ಇದ್ದನು, ಎಂದು ಹೇಳಲಾಗುತ್ತಿದೆ.
2. ಭಾಜಪದ ನಾಯಕ ಮನಜಿಂದರ ಸಿಂಹ ಸಿರಸ ಇವರು ಇದರ ಹಿಂದೆ ಸಂಚು ಇದೆ ಎಂದು ಆರೋಪಿಸಿದ್ದಾರೆ. ಅವರು ಈ ಪ್ರಕರಣದ ಬಗ್ಗೆ ಕೇಂದ್ರದ ಗೃಹ ಸಚಿವ ಅಮಿತ ಶಹಾ ಅವರ ಜೊತೆ ಚರ್ಚಿಸಿದ್ದು, ಶಹಾ ಅವರು ಯೋಗ್ಯ ವಿಚಾರಣೆ ನಡೆಸುವ ಆಶ್ವಾಸನೆ ನೀಡಿದ್ದಾರೆ.
3. ಡಿಸೆಂಬರ್ 15 ರಂದು ಈ ಮಂದಿರದ ಸರೋವರದಲ್ಲಿ ಒಬ್ಬ ಯುವಕನು ಗುಟಕಾದ ಪ್ಯಾಕೆಟ್ ಎಸೆದಿದ್ದನು. ಆ ಸಮಯದಲ್ಲಿ ದೇವಸ್ಥಾನದ ಸೇವಕರು ಅವನನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದರು.
ಹಿಜಾಬ್ ನಿಂದಾಗಿ ಪರೀಕ್ಷೆ ಬರೆಯಲು ಅವಕಾಶ ಸಿಗದ ಮುಸ್ಲಿಂ ವಿದ್ಯಾರ್ಥಿನಿಗೆ ಎಂಜಿನಿಯರಿಂಗ್ ಪ್ರವೇಶಕ್ಕೆ ಅವಕಾಶ!
ರಾಜ್ಯದ ಶಾಲೆಗಳಲ್ಲಿ ಹಿಜಾಬ್ ಗೆ ನೀಡಿರುವ ಅನುಮತಿಯ ವಿರುದ್ಧ ಹಿಂದೂಗಳ ‘ಕೇಸರಿ ಶಾಲು ಅಭಿಯಾನ’ !
ದುಬೈನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ಮತಾಂಧನಿಂದ ಹಿಂದೂ ಶಿಕ್ಷಕಿಯ ಮೇಲೆ ದೌರ್ಜನ್ಯ: 6 ತೊಲ ಚಿನ್ನ ಮತ್ತು ಲಕ್ಷಾಂತರ ರೂಪಾಯಿ ಲೂಟಿ!
ದೀಪ ಬೆಳಗಿ ರೆಸ್ಟೋರೆಂಟ್ ಉದ್ಘಾಟನೆ: IUML ಮಹಿಳಾ ಶಾಸಕಿಗೆ ಕಟ್ಟರವಾದಿಗಳಿಂದ ಟೀಕೆ
ಅಸ್ಸಾಂನ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಂದ ಹಿಂದೂ ವಿದ್ಯಾರ್ಥಿಗಳಿಗೆ ಗೋಮಾಂಸ ತಿನ್ನಿಸಲು ಯತ್ನ
ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರಾ ಅವರ ಕಾರಿನ ಮೇಲೆ ಮೊಟ್ಟೆ ಎಸೆತ