ದೆಹಲಿಯಲ್ಲಿನ ಗಲಭೆಯ ಮೊದಲು ಭಾಜಪ ನಾಯಕರಿಂದ ಮಾಡಲಾದ ದ್ವೇಷ ಪೂರ್ಣ ಟೀಕೆಗಳ ವಿಚಾರಣೆ ನಡೆಸುವ ಬೇಡಿಕೆಯ ಬಗ್ಗೆ ಬೇಗ ನಿರ್ಣಯ ತೆಗೆದುಕೊಳ್ಳಿ !

ಸರ್ವೋಚ್ಚ ನ್ಯಾಯಾಲಯದಿಂದ ದೆಹಲಿ ಉಚ್ಚ ನ್ಯಾಯಾಲಯಕ್ಕೆ ಆದೇಶ

ನವ ದೆಹಲಿ – ದೆಹಲಿಯಲ್ಲಿ ಕಳೆದ ವರ್ಷ ನಡೆದ ಗಲಭೆಯ ಮೊದಲು ಭಾಜಪದ ನಾಯಕರು ನೀಡಿದ ದ್ವೇಷ ಹರಡುವ ಹೇಳಿಕೆಗಳ ವಿರುದ್ಧ ಅಪರಾಧ ದಾಖಲಿಸಿ ವಿಚಾರಣೆ ನಡೆಸುವ ಬೇಡಿಕೆಯ ಅರ್ಜಿಯ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ದೆಹಲಿಯ ಉಚ್ಚ ನ್ಯಾಯಾಲಯಕ್ಕೆ ಬೇಗನೆ ನಿರ್ಣಯ ತೆಗೆದುಕೊಳ್ಳಲು ಹೇಳಿದೆ. `ಈ ನಿರ್ಣಯವನ್ನು ಮುಂದಿನ ಮೂರು ತಿಂಗಳಿನಲ್ಲಿ ತೆಗೆದುಕೊಳ್ಳಬೇಕು’ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ.