ಗೋವುಗಳ ರಕ್ಷಣೆಗಾಗಿ ಖಡ್ಗಗಳು ಮತ್ತು ಇತರ ಆಯುಧಗಳನ್ನು ಖರೀದಿಸಿ! – ವಿಎಚ್‌ಪಿ ನಾಯಕಿ ಸಾಧ್ವಿ ಸರಸ್ವತಿ

ಉಡುಪಿ – ಸಂಚಾರವಾಣಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಬದಲು ಜನರು ಗೋವುಗಳ ರಕ್ಷಣೆಗಾಗಿ ಖಡ್ಗ ಮತ್ತಿತರ ಆಯುಧಗಳನ್ನು ಖರೀದಿಸಬೇಕು. ಲಕ್ಷಾಂತರ ರೂಪಾಯಿ ಮೌಲ್ಯದ ಸಂಚಾರವಾಣಿ ಖರೀದಿಸಲು ಜನರು ಶಕ್ತರಾಗಿದ್ದರೆ, ಅವರು ನಮ್ಮ ಹಸುಗಳನ್ನು ರಕ್ಷಿಸಲು ಖಂಡಿತವಾಗಿಯೂ ಆಯುಧಗಳನ್ನು ಖರೀದಿಸಿ ಮನೆಯಲ್ಲಿ ಇರಿಸಬಹುದು. ಶಸ್ತ್ರಾಸ್ತ್ರ ಖರೀದಿಯಿಂದ ಜನರು ಗೋಹತ್ಯೆಯನ್ನು ನಿಲ್ಲಿಸುತ್ತಾರೆ, ಎಂದು ವಿಶ್ವ ಹಿಂದೂ ಪರಿಷತ್ತಿನ ನಾಯಕಿ ಸಾಧ್ವಿ ಸರಸ್ವತಿ ಇವರು ಒಂದು ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಸಾಧ್ವೀ ಸರಸ್ವತಿಯವರು ತಮ್ಮ ಮಾತನ್ನು ಮುಂದುವರೆಸುತ್ತಾ, ನಾನು ಗೋಶಾಲೆಯಲ್ಲಿ ಹುಟ್ಟಿದ್ದು, ಗೋಹತ್ಯೆ ತಡೆಯುವುದು ನನ್ನ ಕರ್ತವ್ಯವಾಗಿದೆ. ‘ಪ್ರಭು ಶ್ರೀರಾಮನ ಮಂದಿರವನ್ನು ನಿರ್ಮಿಸುವುದು ಮತ್ತು ಭಾರತದಲ್ಲಿ ಗೋಹತ್ಯೆಯನ್ನು ನಿಲ್ಲಿಸುವುದು’ ಇದೆರಡು ನನ್ನ ಸಂಕಲ್ವಗಿವೆ ಎಂದು ಹೇಳಿದರು.