|
ಅಕ್ಬರ್ ದಾಳಿಕೋರನಾಗಿದ್ದಾಗ, ಇಲ್ಲಿಯವರೆಗೆ ಅವನ ಹೆಸರು ರಸ್ತೆಗೆ ಇರುವುದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿ ! ಹೆಸರು ಬದಲಾವಣೆಗೆ ಈ ರೀತಿಯ ಬೇಡಿಕೆ ಏಕೆ ಮಾಡಬೇಕಾಗುತ್ತದೆ ? ನಗರಸಭೆಗೆ ತಿಳಿಯುವುದಿಲ್ಲವೇ ? |

ನವ ದೆಹಲಿ : ಇಲ್ಲಿಯ ‘ಅಕ್ಬರ್ ರಸ್ತೆ’ಗೆ ದಿವಂಗತ ಸಿಡಿಎಸ್ (ಚೀಫ್ ಆಫ್ ಡಿಫೆನ್ಸ್ ಸ್ಟಾಫ್ – ಮೂರು ಸೇನೆಗಳ ಮುಖ್ಯಸ್ಥ) ಜನರಲ್ ಬಿಪಿನ್ ರಾವತ್ ಇವರ ಹೆಸರನ್ನು ಇಡುವಂತೆ ಒತ್ತಾಯಿಸಿ ದೆಹಲಿಯ ಭಾಜಪದಿಂದ ನವ ದೆಹಲಿ ಪುರಸಭೆಗೆ ಪತ್ರ ಬರೆದಿದೆ. ‘ಅಕ್ಬರ್ ನಮ್ಮ ಮೇಲೆ ದಾಳಿ ಮಾಡಿದ ರಾಜನಾಗಿದ್ದ. ಆತನ ಬದಲು ಜನರಲ್ ರಾವತ್ ಇವರ ಹೆಸರಿಡುವುದು ಸೂಕ್ತವಾಗಿದೆ’, ಎಂದು ಪತ್ರದಲ್ಲಿ ತಿಳಿಸಿದ್ದಾರೆ.
Delhi BJP urges NDMC to rename Akbar road after CDS Bipin Rawat for a ‘permanent memory’ https://t.co/MbuuGu2Ak9
— Republic (@republic) December 14, 2021
೧. ನವ ದೆಹಲಿ ಪುರಸಭೆಯ ಉಪಾಧ್ಯಕ್ಷ ಸತೀಶ್ ಉಪಾಧ್ಯಾಯ ಇವರು, ‘ಈ ಬೇಡಿಕೆಗೆ ನಮ್ಮ ಬೆಂಬಲವಿದೆ; ಆದರೆ, ಈ ನಿರ್ಧಾರವು ಸಂಪೂರ್ಣವಾಗಿ ನವದೆಹಲಿ ಪುರಸಭೆಗೆ ಬಿಟ್ಟದ್ದು. ಪುರಸಭೆಯು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ವಿಚಾರ ಮಾಡುತ್ತದೆ ಎಂದು ಹೇಳಿದರು.
೨. ಈ ರಸ್ತೆಗೆ ಮರುನಾಮಕರಣ ಮಾಡಬೇಕೆಂಬ ಬೇಡಿಕೆ ಹಿಂದೆಯೇ ಇತ್ತು. ಕೇಂದ್ರ ಸಚಿವ ವಿ.ಕೆ. ಸಿಂಗ್ ಇವರು ‘ಅಕ್ಬರ್ ರಸ್ತೆ’ಯ ಹೆಸರನ್ನು ‘ಮಹಾರಾಣಾ ಪ್ರತಾಪ್ ರಸ್ತೆ’ ಎಂದು ಬದಲಾಯಿಸಬೇಕೆಂದು ಒತ್ತಾಯಿಸಿದ್ದರು. ಈ ಹಿಂದೆ ಈ ರಸ್ತೆಯ ಹೆಸರಿನ ಫಲಕವನ್ನು ಹಾಳು ಮಾಡಿ ಅಲ್ಲಿ ‘ಸಾಮ್ರಾಟ್ ಹೇಮು ವಿಕ್ರಮಾದಿತ್ಯ ಮಾರ್ಗ’ ಎಂಬ ಫಲಕವೂ ಹಾಕಲಾಗಿತ್ತು. ಇದರ ಹೊಣೆಯನ್ನು ಹಿಂದೂ ಸೇನೆ ಹೊತ್ತುಕೊಂಡಿತ್ತು.
ಉತ್ತರಾಖಂಡದಲ್ಲಿ ಖಲಿಸ್ತಾನಿ ಉಗ್ರನ ಬಂಧನ: ಭಾರೀ ಶಸ್ತ್ರಾಸ್ತ್ರಗಳ ವಶ: Khalistani Terrorists Nabbed
ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ 9 ರಲ್ಲಿ 6 ಸಂಸದರು ಬಂಡಾಯ: ಶಿವಸೇನೆಯಲ್ಲಿ ಸೇರುವ ಸಾಧ್ಯತೆ! : Operation Tiger
ಟೆಲಿಗ್ರಾಮ್’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಟೆಲಿಗ್ರಾಮ್ : Telegram App
ಪುಣೆಯಲ್ಲಿ ಕ್ರಿಶ್ಚಿಯನ್ ಧರ್ಮಗುರು ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲು! : Pune Conversion
‘ಸಂಘದವರು ಹಿಂದೂಗಳಲ್ಲ, ಕೇವಲ ಹಿಂದುತ್ವವಾದಿಗಳಂತೆ!’ – ಕಾಂಗ್ರೆಸ್ ಸಚಿವ ಯತೀಂದ್ರ ಸಿದ್ದರಾಮಯ್ಯ
ಸಂಘವು ವ್ಯಕ್ತಿಗೆ ದೇಶಭಕ್ತಿಯನ್ನು ಕಲಿಸುವ ಸಂಸ್ಥೆ: ನೋಂದಣಿಯ ಅಗತ್ಯವಿಲ್ಲ! – ಸಿ.ಟಿ. ರವಿ