ಸೂರತ (ಗುಜರಾತ)ನಲ್ಲಿ ‘ಪಾಕಿಸ್ತಾನೀ ಫೂಡ ಫೆಸ್ಟಿವ್ಹಲ’ ಆಯೋಜಿಸಿದ ಉಪಹಾರಗೃಹದ ಮೇಲೆ ಬಜರಂಗ ದಳದ ಕಾರ್ಯಕರ್ತರಿಂದ ಆಕ್ರಮಣ

  • ಭಾರತದಲ್ಲಿ ಪಾಕನ ಬಾವುಟ ಹಾರಿಸುವುದು, ಭಾರತ-ಪಾಕ ಸ್ಪರ್ಧೆಯಲ್ಲಿ ಪಾಕ ಜಯಿಸಿದ ಬಳಿಕ ಪಟಾಕಿ ಸಿಡಿಸುವುದು ಹಾಗೂ ಪಾಕ ಪರಾಭವವಾದ ಬಳಿಕ ಕಲ್ಲುತೂರಾಟ ನಡೆಸುವುದು, ಅನೇಕ ಸ್ಥಳಗಳಲ್ಲಿ ಪಾಕನ ಸಮರ್ಥನೆಯಲ್ಲಿ ಘೋಷಣೆ ನೀಡುವುದು, ಕಾಶ್ಮೀರದ ಮುಖಂಡರಿಂದ ಪಾಕನ ಗುಣಗಾನ ಮಾಡುವುದು, ಪಾಕನ ಹೆಸರಿನಲ್ಲಿ ಖಾದ್ಯ ಮಹೋತ್ಸವ ಆಯೋಜಿಸುವುದು, ಈ ರೀತಿ ಶತ್ರುರಾಷ್ಟ್ರವನ್ನು ಸ್ತುತಿಸುವಂತಹ ಘಟನೆಗಳ ಬಗ್ಗೆ ಯಾವ ಸರಕಾರಕ್ಕೂ ಏನೂ ಅನಿಸುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ ! ಮೇಲಿನ ಕೃತ್ಯ ಗಳನ್ನು ಮಾಡುವ ರಾಷ್ಟ್ರಘಾತಕರ ಮೇಲೆ ಕಾರ್ಯಾಚರಣೆ ನಡೆಸಲು ರಾಷ್ಟ್ರಪ್ರೇಮಿಗಳೇ ಒಗ್ಗಟ್ಟಾಗಿ !
  • ಶತ್ರು ರಾಷ್ಟ್ರದ ಉದೊ ಉದೊ ಮಾಡುವವರನ್ನು ದೇಶದ್ರೋಹಿಗಳೆಂದು ಘೋಷಿಸಿ ಸರಕಾರವು ಅವರಿಗೆ ಆಜೀವ ಕಾರಾಗೃಹ ವಾಸದ ಶಿಕ್ಷೆಯನ್ನು ವಿಧಿಸಬೇಕು!

ಸೂರತ (ಗುಜರಾತ) – ಇಲ್ಲಿನ ರಿಂಗರೋಡ ಭಾಗದಲ್ಲಿರುವ ಒಂದು ಉಪಹಾರಗೃಹದಲ್ಲಿ ‘ಪಾಕಿಸ್ತಾನೀ ಫೂಡ ಫೆಸ್ಟಿವ್ಹಲ’ನ ಆಯೋಜಿಸಲಾದ ಬಗ್ಗೆ ಬಜರಂಗ ದಳದ ಕೆಲವು ಕಾರ್ಯಕರ್ತರು ಆ ಉಪಹಾರಗೃಹದ ಮೇಲೆ ಆಕ್ರಮಣ ನಡೆಸಿ ಧ್ವಂಸಗೊಳಿಸಿದರು. ಅದರ ಜೊತೆಗೆ ಅಲ್ಲಿ ಹಾಕಲಾದ ಒಂದು ಬಟ್ಟೆಯ ಫಲಕವನ್ನು ತೆಗೆದು ಹಾಕಿ ಅದಕ್ಕೆ ಬೆಂಕಿ ಹಚ್ಚಿದರು. ಈ ಉಪಹಾರಗೃಹದಲ್ಲಿ ೧೨ ಡಿಸಂಬರನಿಂದ ‘ಟೇಸ್ಟ ಆಫ ಇಂಡಿಯಾ’ ಎಂಬ ಹೆಸರಿನ ಒಂದು ಮಹೋತ್ಸವವು ಪ್ರಾರಂಭವಾಯಿತು. ಡಿಸಂಬರ ೨೨ರವರೆಗೆ ನಡೆಯಲಿದ್ದ ಆ ಮಹೋತ್ಸವದಲ್ಲಿ ‘ಪಾಕಿಸ್ತಾನೀ ಫೂಡ ಫೆಸ್ಟಿವ್ಹಲ’ ಅನ್ನು ಸಹ ಆಯೋಜಿಸಲಾಗಿತ್ತು. ಸಂಬಂಧಪಟ್ಟ ಉಪಹಾರಗೃಹದವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾಗಿ ಬಜರಂಗ ದಳದ ಓರ್ವ ಅಧಿಕಾರಿಯು ಮಾಹಿತಿ ನೀಡಿದರು.

 

೧. ಬಜರಂಗ ದಳದ ದಕ್ಷಿಣ ಗುಜರಾತ ವಿಭಾಗದ ಅಧ್ಯಕ್ಷರಾದ ದೇವೀಪ್ರಸಾದ ದುಬೆಯವರು ಉಪಹಾರಗೃಹದಲ್ಲಿ ಈ ರೀತಿಯ ಉತ್ಸವವನ್ನು ಆಯೋಜಿಸಲು ಬಿಡುವುದಿಲ್ಲ ಎಂದು ಹೇಳಿದರು

೨. ‘ಟೇಸ್ಟ ಆಫ ಇಂಡಿಯಾ’ ಅಭಿಯಾನವನ್ನು ನಡೆಸಲು ‘ಶುಗರ ಆಂಡ ಸ್ಪಾಯ್ಸ ರೆಸ್ಟಾರೆಂಟ’ನ ಸಂಚಾಲಕರಾದ ಸಂದೀಪ ಡಾವರರವರು, ಅನೇಕ ಜನರ ಭಾವನೆಗಳಿಗೆ ನೋವಾಗಿರುವುದರಿಂದ ಸಂಬಂಧಪಟ್ಟ ಕಾರ್ಯಕ್ರಮದಿಂದ ‘ಪಾಕಿಸ್ತಾನೀ’ ಎಂಬ ಶಬ್ಧವನ್ನು ಅದರಿಂದ ತೆಗೆದು ಹಾಕಲಿ ಎಂದಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರಲ್ಲಿ ಅಪರಾಧ ನೋಂದಾಯಿಸಲಾಗಿಲ್ಲ.