ತ್ರಿಪುರಾದಲ್ಲಿ ರಜೆಗಾಗಿ ಅನುಮತಿ ಸಿಕ್ಕಿದರೂ ಹೋಗಲು ಬಿಡದೆ ಇದ್ದರಿಂದ ಯೋಧನಿಂದ ಅಧಿಕಾರಿಗಳ ಮೇಲೆ ಗುಂಡು ಹಾರಿಸಿ ಹತ್ಯೆ

ಸಿಪಾಯಿಜಾಲಾ (ತ್ರಿಪುರಾ) – ಇಲ್ಲಿಯ ‘ಒ.ಏನ್.ಜಿ.ಸಿ. ಗ್ಯಾಸ್ ಕಲೆಕ್ಷನ್ ಸ್ಟೇಷನ್’ ಹತ್ತಿರ ಇರುವ ‘ತ್ರಿಪುರಾ ಸ್ಟೇಟ್ ರೈಫಲ್ಸ್’ನ ನೆಲೆಯಲ್ಲಿ ‘ರೈಫಲ್ಸ್’ನ ೫ ನೇ ಬಟಾಲಿಯನ್ ರೈಫಲ್ ಮ್ಯಾನ್ ಸುಕಾಂತ ದಾಸ ಇವರು ವರಿಷ್ಠ ಸಹಕಾರಿ ಸುಭೆದಾರ್ ಮಾರ್ಕಾ ಸಿಂಗ್ ಜಮತಿಯಾ ಮತ್ತು ನಾಯಬ ಮತ್ತು ಸುಭೇದಾರ್ ಕಿರಣ್ ಜಮತಿಯಾ ಇವರನ್ನು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ತದನಂತರ ದಾಸ ಇವರು ಮಧುಪುರ ಪೊಲೀಸ್ ಠಾಣೆಯಲ್ಲಿ ಆತ್ಮಸಮರ್ಪಣೆ ಮಾಡಿದ್ದಾರೆ. ಸುಕಾಂತ ದಾಸ ಅವರು ರಜೆಗಾಗಿ ಅರ್ಜಿ ನೀಡಿದ್ದರು. ಅವರಿಗೆ ರಜೆ ನೀಡಲಾಗಿತ್ತು; ಆದರೂ ಅವರಿಗೆ ಹೋಗಲು ಬಿಡುತ್ತಿರಲಿಲ್ಲ. ಅದಕ್ಕಾಗಿ ಅವರ ಹಿರಿಯ ಅಧಿಕಾರಿಗಳೊಂದಿಗೆ ವಾದ-ವಿವಾದ ನಡೆದು ಈ ಕೃತ್ಯ ನಡೆದಿದೆ.